ಪ್ರವೀಣ್ ಹತ್ಯೆ ಪ್ರಕರಣ ; ಮತ್ತಿಬ್ಬರು ಸಂಚುಕೋರರು ಪೊಲೀಸ್ ಬಲೆಗೆ, ಇನ್ನೂ ಸಿಗದ ಹಂತಕರು !

07-08-22 10:10 pm       Mangalore Correspondent   ಕರಾವಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯ ತಾಲೂಕಿನ ನಾವೂರು ನಿವಾಸಿ ಆಬಿದ್ (22) ಮತ್ತು ಬೆಳ್ಳಾರೆಯ ಗೌರಿಹೊಳೆ ನಿವಾಸಿ ನೌಫಾಲ್(28) ಬಂಧಿತರು.

ಮಂಗಳೂರು, ಆಗಸ್ಟ್ 7: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯ ತಾಲೂಕಿನ ನಾವೂರು ನಿವಾಸಿ ಆಬಿದ್ (22) ಮತ್ತು ಬೆಳ್ಳಾರೆಯ ಗೌರಿಹೊಳೆ ನಿವಾಸಿ ನೌಫಾಲ್(28) ಬಂಧಿತರು.

ಈಗಾಗಲೇ ಕೊಲೆ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತಿಬ್ಬರ ಬಂಧನದೊಂದಿಗೆ ಬಂಧಿತರ ಸಂಖ್ಯೆ ಆರಕ್ಕೇರಿದೆ. ಇವರೆಲ್ಲ ಕೊಲೆಗೆ ಸಂಚು ಹೂಡಿದ್ದ ಆರೋಪದಲ್ಲಿ ಬಂಧಿತರಾಗಿದ್ದಾರೆ. ಆದರೆ, ಕೊಲೆ ಕೃತ್ಯದಲ್ಲಿ ನೇರ ಶಾಮೀಲಾಗಿದ್ದ ಹಂತಕರು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಹಂತಕರು ಯಾರು ಅನ್ನುವುದು ಪೊಲೀಸರಿಗೆ ತಿಳಿದಿದ್ದು, ಅವರ ಪತ್ತೆಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ.

ಕೊಲೆ ನಡೆದ ಎರಡೇ ದಿನದಲ್ಲಿ ಬೆಳ್ಳಾರೆಯ ಶಫೀಕ್ ಮತ್ತು ಸವಣೂರಿನ ಝಾಕೀರ್ ಅವರನ್ನು ಬಂಧಿಸಲಾಗಿತ್ತು. ಆನಂತರ ಬೆಂಗಳೂರಿನಲ್ಲಿ ಅವಿತುಕೊಂಡಿದ್ದ ಬೆಳ್ಳಾರೆಯ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ ಮತ್ತು ಹಾರಿಸ್ ಎಂಬ ಮತ್ತಿಬ್ಬರನ್ನು ಬಂಧನ ಮಾಡಲಾಗಿತ್ತು. ಪ್ರವೀಣ್ ಹತ್ಯೆ ನಡೆದು 12 ದಿನಗಳಾಗಿದ್ದು, ಅತ್ತ ಪ್ರಕರಣದ ತನಿಖೆ ಎನ್ಐಎಗೆ ಒಪ್ಪಿಸಲು ಎಲ್ಲ ತಯಾರಿ ನಡೆದಿದ್ದರೂ ಪ್ರಮುಖ ಆರೋಪಿಗಳನ್ನು ಬಂಧಿಸಲು ಸುಳ್ಯ ಪೊಲೀಸರು ಹಿಂದೆ ಬಿದ್ದಿದ್ದಾರೆ.

The Bellare police have made two more arrests in BJP youth leader Praveen Kumar Nettare murder case.The arrested accused are Abid (22), son of Yakub, a resident of Mahamayi temple, Navoor and Naufal (28), son of Mohammed of Gaurihole,Bellare.Investigation is going on. All the assailants have been identified and search for them is in progress, police said.