ಸಹಜ ಸ್ಥಿತಿಗೆ ಮರಳಿದ ದಕ್ಷಿಣ ಕನ್ನಡ ; ರಾತ್ರಿ ನಿರ್ಬಂಧ ವಾಪಸ್, ಮದ್ಯದಂಗಡಿಗೂ ಮುಕ್ತಿ

07-08-22 08:48 pm       Mangalore Correspondent   ಕರಾವಳಿ

ಕೋಮು ದ್ವೇಷದ ಕೊಲೆಗಳಿಂದಾಗಿ ಬೂದಿ ಮುಚ್ಚಿದ ಕೆಂಡದಂತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೇರಲಾಗಿದ್ದ ರಾತ್ರಿ ನಿರ್ಬಂಧವನ್ನು ಸಂಪೂರ್ಣವಾಗಿ ಜಿಲ್ಲಾಡಳಿತ ಹಿಂಪಡೆದಿದೆ.

ಮಂಗಳೂರು, ಆಗಸ್ಟ್ 7: ಕೋಮು ದ್ವೇಷದ ಕೊಲೆಗಳಿಂದಾಗಿ ಬೂದಿ ಮುಚ್ಚಿದ ಕೆಂಡದಂತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೇರಲಾಗಿದ್ದ ರಾತ್ರಿ ನಿರ್ಬಂಧವನ್ನು ಸಂಪೂರ್ಣವಾಗಿ ಜಿಲ್ಲಾಡಳಿತ ಹಿಂಪಡೆದಿದೆ.

ಅಂಗಡಿ ಮುಂಗಟ್ಟು, ವ್ಯಾಪಾರ ಸಂಕೀರ್ಣ, ಮಾಲ್, ಥಿಯೇಟರ್ ಸೇರಿದಂತೆ ಎಲ್ಲವುಗಳಿಗೂ ಮುಕ್ತ ಮಾಡಲಾಗಿದೆ. ಮದ್ಯದಂಗಡಿಗೂ ಮುಕ್ತಿ ನೀಡಲಾಗಿದ್ದು, ಆಗಸ್ಟ್ 8ರಿಂದಲೇ ಹೊಸ ಆದೇಶ ಜಾರಿಗೆ ಬರಲಿದೆ. ಕಳೆದ ಒಂದು ವಾರದಿಂದ ರಾತ್ರಿ ನಿರ್ಬಂಧ ಮೂಲಕ ವ್ಯಾಪಾರ ಸೇರಿದಂತೆ ಎಲ್ಲ ವಹಿವಾಟಿಗೂ ಬ್ರೇಕ್ ಹಾಕಲಾಗಿತ್ತು. ಇದೀಗ ವಾತಾವರಣ ಸಹಜ ಸ್ಥಿತಿಗೆ ಮರಳಿದ್ದರಿಂದ ನಿರ್ಬಂಧ ಆದೇಶವನ್ನು ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಹಿಂಪಡೆದಿದ್ದಾರೆ.

ಇದೇ ವೇಳೆ, ಕಲಂ 144 ಪ್ರಕಾರ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಆಗಸ್ಟ್ 14ರ ಮಧ್ಯರಾತ್ರಿ ವರೆಗೂ ವಿಸ್ತರಣೆ ಮಾಡಲಾಗಿದೆ. ಇದರಂತೆ, ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಸಭೆ ಸೇರುವುದು, ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ಇರುವುದಿಲ್ಲ.

Night curfew cancels, Mangalore to come to normalcy from Monday August 8th. As 144 section and night curfew was ordered in Mangalore after the murder of Fazil in Surathkal will come to an end.