ಬ್ರೇಕಿಂಗ್ ನ್ಯೂಸ್
05-08-22 10:40 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 5: ಹಳೆ ಪೇಪರ್, ಹಳೆ ಕಬ್ಬಿಣ ಅಂತ ಸಿನಿಮಾ ಪದ್ಯ ಕೇಳಿರಬಹುದು. ಹೌದು.. ಈಗ ಹಳೆ ಪೇಪರ್ ಅನ್ನೋದು ಬರೀಯ ಗುಜರಿ ಸರಕಲ್ಲ. ಅತ್ಯಂತ ಬೇಡಿಕೆಯ ವಸ್ತುವಾಗಿದೆ. ತುಂಡು ಪೇಪರನ್ನೂ ಒಟ್ಟು ಮಾಡಿ, ಗುಜರಿಗೆ ಕೊಟ್ಟರೆ ಕೈತುಂಬ ಗಳಿಸುವ ದಿನ ಬಂದಿದೆ. ವರ್ಷದ ಹಿಂದೆ ಕೇವಲ ಕೇಜಿಗೆ 12ರಿಂದ 14 ರೂಪಾಯಿ ಇದ್ದ ಹಳೆ ಪೇಪರ್ ರೇಟು ಒಂದೇ ವರ್ಷದಲ್ಲಿ ದುಪ್ಪಟ್ಟು ಆಗಿದೆ. ಹೀಗಾಗಿ ಮನೆಯಲ್ಲಿ ಅಲ್ಲಲ್ಲಿ ಬೀಸಾಕುತ್ತಿದ್ದ ಹಳೆ ಪತ್ರಿಕೆಯನ್ನೆಲ್ಲ ಜನರು ಜೋಪಾನ ಇಟ್ಟುಕೊಳ್ಳಲು ತೊಡಗಿದ್ದಾರೆ.
ವರ್ಷದ ಹಿಂದೆ ನ್ಯೂಸ್ ಪ್ರಿಂಟ್ ದರವು ಕೇಜಿಗೆ 35 ರೂಪಾಯಿ ಇತ್ತು. ಈಗ ಅದರ ರೇಟು ಕೇಜಿಗೆ 80ರಿಂದ 90 ರೂಪಾಯಿ ಆಗಿದೆ. ನ್ಯೂಸ್ ಪ್ರಿಂಟ್ ದರ ಹೆಚ್ಚಿರುವುದರಿಂದ ಸಹಜವಾಗೇ ಹಳೆ ಪತ್ರಿಕೆಗಳ ದರವೂ ಹೆಚ್ಚಿದೆ. ಇಲ್ಲಿ ರೇಟ್ ಏರುವುದಕ್ಕೂ ಯುಕ್ರೇನ್- ರಷ್ಯಾ ಯುದ್ಧಕ್ಕೂ ತಾಳೆಯಿದೆ. ಅಲ್ಲಿನ ಯುದ್ಧದ ಕಾರಣ ಚೀನಾದಿಂದ ಬರುತ್ತಿದ್ದ ನ್ಯೂಸ್ ಪ್ರಿಂಟ್ ಕಡಿತಗೊಂಡಿದೆ. ಹೀಗಾಗಿ ಪೇಪರ್ ಮಿಲ್ ಗಳು ನ್ಯೂಸ್ ಪ್ರಿಂಟ್ ದರವನ್ನೂ ಒಮ್ಮೆಲೇ ಏರಿಸಿದೆ. ಇದರಿಂದಾಗಿ ಹಳೆ ಪತ್ರಿಕೆಯ ದರವೂ ಏರತೊಡಗಿದೆ.
ಗುಜರಿ ವ್ಯಾಪಾರಿಗಳು ಮನೆಗಳಿಂದ ಕೇಜಿಗೆ 25-26 ರೂಪಾಯಿ ಕೊಟ್ಟು ಖರೀದಿಸುವ ಹಳೆ ಪತ್ರಿಕೆಯನ್ನು ಎರಡು ರೂ. ಹೆಚ್ಚಿಗೆ ದರ ಪಡೆದು ನೇರವಾಗಿ ಪೇಪರ್ ಮಿಲ್ ಗಳಿಗೆ ಸಪ್ಲೈ ಮಾಡುತ್ತಾರೆ. ಮಿಲ್ ಗಳಲ್ಲಿ ಅದನ್ನು ರಿ ಸೈಕಲ್ ಮಾಡಿ, ಮತ್ತೆ ನ್ಯೂಸ್ ಪ್ರಿಂಟ್ ಆಗಿಸಿ ಕೇಜಿಗೆ 60 ರೂ.ಗೆ ಮಾರುತ್ತಾರೆ. ಹಳೆ ಪತ್ರಿಕೆ, ಹಳೆ ನೋಟ್ ಬುಕ್ಸ್ ಇವೆಲ್ಲದಕ್ಕೂ ಈಗ ಭಾರೀ ಡಿಮ್ಯಾಂಡ್ ಆಗಿದೆ. ಹಿಂದೆಲ್ಲಾ ಇಂಗ್ಲಿಷ್ ಹಳೆ ಪತ್ರಿಕೆಗಳಿಗೆ ಹೆಚ್ಚು ರೇಟ್ ಇತ್ತು. ಈಗ ಕನ್ನಡ- ಇಂಗ್ಲಿಷ್ ಎಲ್ಲ ಪತ್ರಿಕೆ, ಪುಸ್ತಕಕ್ಕೂ ಒಂದೇ ರೇಟಲ್ಲಿ ಗುಜರಿ ವ್ಯಾಪಾರಿಗಳು ಖರೀದಿಸುತ್ತಾರೆ. ಒಟ್ನಲ್ಲಿ ಯುಕ್ರೇನಲ್ಲಿ ಯುದ್ಧ ಆಗಿರುವುದು ಗುಜರಿ ಪತ್ರಿಕೆಗಳಿಗೆ ಡಿಮ್ಯಾಂಡ್ ಆಗುವಂತಾಗಿದೆ.
The demand for old newspapers and scrap paper has risen in the market. While old newspapers are being bought at up to Rs 26 a kilo, the price is likely to go up further. Last year, old newspapers were bought at Rs 12 to 15 a kilo which has now doubled. While households are carefully staking up old newspapers at home, scrap vendors have become equally careful in keeping the scrap paper intact.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm