ಬ್ರೇಕಿಂಗ್ ನ್ಯೂಸ್
03-08-22 09:44 pm Udupi Correspondent ಕರಾವಳಿ
ಪಡುಬಿದ್ರಿ, ಆಗಸ್ಟ್ 3: ಐದು ದಶಕಗಳ ಸುದೀರ್ಘ ಕಾಲ ಜೊತೆಯಾಗಿದ್ದು ಮಕ್ಕಳು, ಮೊಮ್ಮಕ್ಕಳ ಜೊತೆಗೆ ಬಾಳ್ವೆ ನಡೆಸಿ, ಸವಾಲುಗಳನ್ನು ಎದುರಿಸುತ್ತಾ ತುಂಬು ಜೀವನ ನಡೆಸಿದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ನಡೆದಿದೆ.
ಕಾಪು ತಾಲೂಕಿನ ಬೆಳಪು ಗ್ರಾಮದ 80 ವರ್ಷದ ಕೃಷ್ಣ ಅಲಿಯಾಸ್ ಕುಟ್ಟಿ ಶೆಟ್ಟಿ ಮತ್ತು ಅವರ ಪತ್ನಿ 75 ವರ್ಷದ ರೇವತಿ ಶೆಟ್ಟಿ ಕೆಲವೇ ಗಂಟೆಗಳ ಅಂತರದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಕೃಷ್ಣ ಶೆಟ್ಟಿ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದರೆ, ಈ ವಿಷಯ ತಿಳಿದು ಶಾಕ್ ಆಗಿದ್ದ ಪತ್ನಿ ರೇವತಿ ಬುಧವಾರ ಬೆಳಗ್ಗೆ ಅಸುನೀಗಿದ್ದಾರೆ.
ಕೃಷ್ಣ ಶೆಟ್ಟಿ ವಯೋಸಹಜ ಬಾಧೆಯಿಂದ ಮೃತಪಟ್ಟಿದ್ದರು. ಅವರ ಮಕ್ಕಳು, ಮೊಮ್ಮಕ್ಕಳು ಮುಂಬೈನಲ್ಲಿ ನೆಲೆಸಿದ್ದರಿಂದ ಅವರು ಬರುವುದಕ್ಕಾಗಿ ಅಂತಿಮ ಸಂಸ್ಕಾರವನ್ನು ಬುಧವಾರಕ್ಕೆ ಉಳಿಸಲಾಗಿತ್ತು. ಇದರ ನಡುವೆ, ಪತ್ನಿಯೂ ಮೃತಪಟ್ಟಿದ್ದರಿಂದ ಪತಿ-ಪತ್ನಿಯ ಶವಗಳನ್ನು ಒಂದೇ ಚಿತೆಯಲ್ಲಿರಿಸಿ ಬೆಂಕಿ ಕೊಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಸೂರಿ ಶೆಟ್ಟಿಯವರ ನೇತೃತ್ವದಲ್ಲಿ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರ ಸಮ್ಮುಖದಲ್ಲಿ ಅಜ್ಜ- ಅಜ್ಜಿಯ ಕಳೇಬರವನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಸುದೀರ್ಘ ಕಾಲ ಜೊತೆಯಾಗಿ ಬಾಳಿ ಕೊನೆಗಾಲದಲ್ಲಿ ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದು ಪಡುಬಿದ್ರಿ, ಕಾಪು ಪರಿಸರದಲ್ಲಿ ಜನರಲ್ಲಿ ಕುತೂಹಲ ಸೃಷ್ಟಿಸಿದೆ.
In a rare incident, a couple which lived together for five decades, saw children and grandchildren and faced life’s challenges together, died a few hours apart each other. The incident took place at Belapu, Kaup taluk. Eighty-year-old Krishna alias Kutti Shetty, and his wife, 75-year-old year old Revathi Shetty is the couple who had their funeral together.Krishna died on Tuesday August 2 morning and his wife Revathi passed away on Wednesday August 3 morning. They have left behind two sons and two daughters.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm