ಮತ್ತೆ ಅಮಿತ್ ಷಾ ಭೇಟಿಯಾದ ಸಚಿವೆ ಶೋಭಾ ; ಎನ್‌ಐಎ ಕಚೇರಿ ಬೆಂಗಳೂರಿಗೆ ವಿಸ್ತರಿಸಲು ಮನವಿ

02-08-22 10:03 pm       udupi Correspondent   ಕರಾವಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಧನ್ಯವಾದ ಅರ್ಪಿಸಿದ್ದಾರೆ. 

ಉಡುಪಿ, ಆಗಸ್ಟ್ 2 : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಧನ್ಯವಾದ ಅರ್ಪಿಸಿದ್ದಾರೆ. 

ಪ್ರವೀಣ್ ಕೊಲೆಯಾದ ಬೆನ್ನಲ್ಲೇ ಪ್ರಕರಣದ ಬಗ್ಗೆ ಎನ್ಐಎ ತನಿಖೆ ನಡೆಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ಪ್ರಕರಣದ ಬಗ್ಗೆ ಎನ್ಐಎ ತಂಡದಿಂದ ತನಿಖೆ ವಹಿಸಿಕೊಳ್ಳಲು ಸೂಚನೆ ನೀಡಿದ್ದರು. 

Ministry of cooperation: The lure for Amit Shah - The Week

ಮಂಗಳವಾರ ದೆಹಲಿಯ ಗೃಹ ಸಚಿವಾಲಯದ ಕಚೇರಿಯಲ್ಲಿ ಷಾ ಅವರನ್ನು ಭೇಟಿಯಾದ ಶೋಭಾ, ಕೇರಳದ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ರೋಹಿ  ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇರಳದ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದು ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುತ್ತಿವೆ. ಮಂಗಳೂರು ಪ್ರದೇಶದ ಕಾರ್ಯಕರ್ತರು ಇಸ್ಲಾಮಿಕ್ ಸಂಘಟನೆಗಳಿಂದ ತೀವ್ರ ನಲುಗಿದ್ದಾರೆ ಎಂಬುದಾಗಿ ಅಮಿತ್ ಷಾಗೆ ವಿವರಿಸಿದ್ದಾರೆ.

ISIS module case: NIA conducts searches in four districts of Gujarat |  DeshGujarat

ಅಲ್ಲದೆ, ಇಸ್ಲಾಮಿಕ್ ಭಯೋತ್ಪಾದನೆಯನ್ನು ತಡೆಗಟ್ಟಲು ಮತ್ತು ಇಸ್ಲಾಮಿಕ್ ಉಗ್ರರ ಕರಿನೆರಳು ಹೊಂದಿರುವ ಮಂಗಳೂರಿನ ಮೇಲೆ ನಿಗಾ ಇಡಲು ಎನ್‌ಐಎ ಕಚೇರಿಯನ್ನು ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಿಸುವಂತೆ ಅಮಿತ್ ಶಾಗೆ ಸಚಿವೆ ಶೋಭಾ ಮನವಿ ಮಾಡಿದ್ದಾರೆ.

Union minister of state Shobha Karandalaje met union home minister Amit Shah to thank him for handing over the investigation of Praveen Nettaru murder case to NIA. It may be recalled that Karandlaje had written to Shah seeking exemplary punishments to the perpetrators.Shobha Karandalaje, in her meeting with Amit Shah, apprised him of the radical activities taking place in the coastal regions of Karnataka bordering Kerala.