ಎಸ್ಡಿಪಿಐ, ಪಿಎಫ್ಐ ಕಾರಣಕ್ಕೆ ಮುಸ್ಲಿಮರ ಗೌರವಕ್ಕೆ ಧಕ್ಕೆ, ಸ್ವತಃ ಈ ಸಂಘಟನೆಗಳನ್ನ ಬಹಿಷ್ಕರಿಸಿ ; ರಘುಪತಿ ಭಟ್

30-07-22 11:01 pm       udupi Correspondent   ಕರಾವಳಿ

ಮುಸ್ಲಿಂ ಸಮುದಾಯದ ಗೌರವಕ್ಕೆ ಧಕ್ಕೆ ತಂದಿರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ಮುಸ್ಲಿಮರೇ ಬಹಿಷ್ಕರಿಸಬೇಕು. ಆಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.

ಉಡುಪಿ, ಜುಲೈ 30: ಮುಸ್ಲಿಂ ಸಮುದಾಯದ ಗೌರವಕ್ಕೆ ಧಕ್ಕೆ ತಂದಿರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ಮುಸ್ಲಿಮರೇ ಬಹಿಷ್ಕರಿಸಬೇಕು. ಆಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.

ಕರಾವಳಿಯಲ್ಲಿ ಕೋಮು ವೈಷಮ್ಯದ ವಾತಾವರಣ ನೆಲೆಸಿರುವುದರಿಂದ ಈ ಬಗ್ಗೆ ಹೇಳಿಕೆ ನೀಡಿರುವ ರಘುಪತಿ ಭಟ್, ಕರಾವಳಿ ಭಾಗದಲ್ಲಿ ಕೋಮು ಉದ್ರೇಕದ ಸ್ಥಿತಿ ನೆಲೆಯಾಗಲು ಈ ಸಂಘಟನೆಗಳೇ ಕಾರಣ. ಎಸ್ಡಿಪಿಐ ಮತ್ತು ಪಿಎಫ್ಐ ಕಾರಣದಿಂದಾಗಿ ಮುಸ್ಲಿಮರನ್ನು ಜನರು ಅನುಮಾನದಿಂದ ನೋಡುವಂತಾಗಿದೆ. ಹೀಗಾಗಿ ಆ ಸಂಘಟನೆಗಳನ್ನು ಸ್ವತಃ ಮುಸ್ಲಿಂ ಬಾಂಧವರೇ ಬಹಿಷ್ಕರಿಸಬೇಕು. ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದೂ ಇದೇ ಸಂಘಟನೆಗಳು. ಜಾತ್ಯತೀತ ಭಾವನೆಯುಳ್ಳ ಮತ್ತು ಶಾಂತಿ ಬಯಸುವ ಮುಸ್ಲಿಮರು ಈ ಸಂಘಟನೆಗಳನ್ನು ಹತ್ತಿರ ಬರದಂತೆ ದೂರ ಮಾಡಬೇಕು ಎಂದು ಹೇಳಿದ್ದಾರೆ.

praveen nettar, ಪ್ರವೀಣ್‌ ನೆಟ್ಟಾರ್‌ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಚೆಕ್‌  ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ - cm basavaraj bommai has handed over  compensation check of rs 50 lakh to bjp youth leader ...

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಕಾರ್ಯಕರ್ತರನ್ನು ಬಡಿದೆಬ್ಬಿಸಿದೆ. ಈಗಾಗಲೇ ರಾಜ್ಯ ಸರಕಾರ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿದ್ದು, ಯಾರು ಇದರ ಹಿಂದಿದ್ದಾರೆ, ಯಾರು ಸಂಚು ಹೆಣೆದಿದ್ದಾರೆ ಅನ್ನುವುದನ್ನು ಪತ್ತೆ ಮಾಡಲಿದೆ. ಅಲ್ಲದೆ, ಮುಂದೆ ಸಂಚು ಹೆಣೆದಿರುವುದನ್ನೂ ಬಯಲು ಮಾಡಲಿದೆ ಎಂದು ಭಟ್ ಹೇಳಿದ್ದಾರೆ.

NIA probes its own gallantry-awardee SP for 'espionage, extortion' in  Khurram Parvez case

ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಇತ್ತು. ಅದೇ ಕಾರಣದಿಂದಾಗಿ ಅಷ್ಟು ದೊಡ್ಡದಾಗಿ ವಿವಾದ ಸದ್ದು ಮಾಡಿತ್ತು. ಸಂಚು ದೊಡ್ಡದಿದ್ದರಿಂದ ಭಾರೀ ಪ್ರಚಾರ ಪಡೆದಿತ್ತು. ಆದರೆ ಅದರ ಕಾರಣಕ್ಕೆ ಸಾವು ಆಗುತ್ತದೆ ಅನ್ನುವುದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಅಮಾಯಕ ಹರ್ಷನ ಕೊಲೆ ಆಗಿಹೋಗಿತ್ತು. ಈಗ ಮತ್ತೊಬ್ಬ ಕಾರ್ಯಕರ್ತನ ಹತ್ಯೆ ಆಗಿದೆ. ಕಾರ್ಯಕರ್ತರೇ ನಮ್ಮ ಪಕ್ಷದ ಜೀವಾಳ. ಒಂದು ಜೀವ ಹೋಗುವುದನ್ನು ನಾವು ಸರಳವಾಗಿ ನೋಡಿ ಕುಳಿತುಕೊಳ್ಳುವಂತಿಲ್ಲ. ಅಮೂಲ್ಯ ಜೀವ ತೆಗೆದ ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತಾಗಬೇಕು ಎಂದರು.

MLA Raghupati Bhat said SDPI and PFI organisations should be banned from Muslim society adding that the educated Muslims should become aware of the activities of the two organisations that are bringing disrepute to the entire minority communitHe was speaking to newspersons and answering queries pertaining to the serial killings that have rocked the coastal districts. He said the activities carried out by SDPI and PFI had created an impression and one of looking at minorities with suspicion.