ಕದಡಿದ ಕೋಮು ದಳ್ಳುರಿ ; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಜೆ ಆರು ಗಂಟೆಗೇ ಲಾಕ್ ! ವಹಿವಾಟು ಬಂದ್ ಮಾಡಿ ಸೇರುವಂತೆ ಕಟ್ಟಾಜ್ಞೆ 

29-07-22 03:27 pm       Mangalore Correspondent   ಕರಾವಳಿ

ಕೋಮು ಉದ್ವಿಗ್ನ ಸ್ಥಿತಿ ನೆಲೆಸಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಜೆ 6 ಗಂಟೆಯಿಂದ ಬೆಳಗ್ಗೆ ಆರು ಗಂಟೆ ವರೆಗೆ ಅಂಗಡಿ, ಇನ್ನಿತರ ಎಲ್ಲ ರೀತಿಯ ವ್ಯಾಪಾರ ಸಂಕೀರ್ಣಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ‌

ಮಂಗಳೂರು, ಜುಲೈ 29 : ಕೋಮು ಉದ್ವಿಗ್ನ ಸ್ಥಿತಿ ನೆಲೆಸಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಜೆ 6 ಗಂಟೆಯಿಂದ ಬೆಳಗ್ಗೆ ಆರು ಗಂಟೆ ವರೆಗೆ ಅಂಗಡಿ, ಇನ್ನಿತರ ಎಲ್ಲ ರೀತಿಯ ವ್ಯಾಪಾರ ಸಂಕೀರ್ಣಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ‌

ಶಾಂತಿ ಸುವ್ಯವಸ್ಥೆ ಮರಳಿಸುವ ನಿಟ್ಟಿನಲ್ಲಿ ಜುಲೈ 29 ರಿಂದ ಮೊದಲ್ಗೊಂಡು ಆಗಸ್ಟ್ 1ರ ವರೆಗೆ  ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಯಿಂದ ಬೆಳಗ್ಗೆ ಆರರ ವರೆಗೆ ಮುಚ್ಚುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮಾತ್ರ ಅಂಗಡಿ-ಮುಂಗಟ್ಟು ತೆರೆಯಲು ಅನುಮತಿ. ಉಳಿದಂತೆ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯ ವರೆಗೆ ಮುಚ್ಚಬೇಕು. ರಾತ್ರಿ ವೇಳೆ ಕೊಲೆ ಸರಣಿ ಮುಂದುವರಿಯುವ ಸಾಧ್ಯತೆ ಕಂಡುಬಂದಿರುವುದರಿಂದ ಜನರು ಯಾರು ಕೂಡ ಅನಗತ್ಯ ಹೊರಗೆ ಬಾರದಂತೆ ಸೂಚಿಸಲಾಗಿದೆ. ಔಷಧಿ, ವೈದ್ಯಕೀಯ ಅಗತ್ಯಗಳಿಗೆ ಮಾತ್ರ ಹೊರಬರಬೇಕು. ಉಳಿದಂತೆ ಜನರು ಸಂಜೆಯಾಗುತ್ತಲೇ ಮನೆ ಸೇರಬೇಕು ಎಂದು ಸೂಚನೆ ನೀಡಿದ್ದಾರೆ.

Mangalore Fazil Murder, all shops to be closed after 6pm to 6am till August 1st orders DC Rajendra Kumar. Ordering all the Urban local bodies and Grama Panchayats to close down the shops at 6pm to 6am from today 29th onwards till 1st monday morning... emergency services/hospital/medical shops will be exempted and can be operated..formal order will be issued at the earliest