ಮುತಾಲಿಕ್ ದ.ಕ. ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ; ಹೆಜಮಾಡಿಯಲ್ಲಿ ಪೊಲೀಸರ ವಶಕ್ಕೆ 

29-07-22 12:07 pm       Mangalore Correspondent   ಕರಾವಳಿ

ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಲಾಗಿದೆ. ನಿರ್ಬಂಧ ಇದ್ದರೂ, ಜಿಲ್ಲೆಯ ಪ್ರವೇಶ ಮಾಡುತ್ತಿದ್ದ ಮುತಾಲಿಕ್ ಅವರನ್ನು ಹೆಜಮಾಡಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಮಂಗಳೂರು, ಜುಲೈ 29: ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಲಾಗಿದೆ. ನಿರ್ಬಂಧ ಇದ್ದರೂ, ಜಿಲ್ಲೆಯ ಪ್ರವೇಶ ಮಾಡುತ್ತಿದ್ದ ಮುತಾಲಿಕ್ ಅವರನ್ನು ಹೆಜಮಾಡಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ತೆರಳಲು ಪ್ರಮೋದ್ ಮುತಾಲಿಕ್ ಬರುತ್ತಿದ್ದರು.‌ ಆದರೆ ಅದಕ್ಕೂ ಮೊದಲೇ ಜಿಲ್ಲೆಯ ಪ್ರವೇಶ ತಡೆದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹೀಗಾಗಿ ಮುತಾಲಿಕ್ ಹೆಜಮಾಡಿ ಮೂಲಕ ಬರುತ್ತಿರುವ ಮಾಹಿತಿ ಪಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕೋಮು ಉದ್ರೇಕದ ವಾತಾವರಣ ಇರುವುದರಿಂದ ಮುತಾಲಿಕ್ ಆಗಸ್ಟ್ 3ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಮಾಡದಂತೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಆದೇಶ ಹೊರಡಿಸಿದ್ದಾರೆ.

Prohibitory orders passed against Pramod Muthalik from entering Mangalore, detained at Hejamady by Police. As Muthalik was on his way to Mangalore the Udupi police have detained him near Hejamady toll from entering Mangalore as there is prohibitory order has been passed.