ದನವನ್ನು ತಪ್ಪಿಸಲು ಹೋಗಿ ಆಂಬುಲೆನ್ಸ್ ಪಲ್ಟಿ ; ಹೊನ್ನಾವರದ ರೋಗಿ ಸಹಿತ ಒಂದೇ ಕುಟುಂಬದ ನಾಲ್ವರು ಸಾವು ! 

20-07-22 08:42 pm       udupi Correspondent   ಕರಾವಳಿ

ರೋಗಿಗಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಶಿರೂರು ಟೋಲ್ ಗೇಟ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಘಟನೆ ನಡೆದಿದ್ದು ಹೊನ್ನಾವರ ಮೂಲದ ನಾಲ್ವರು ಸಾವನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದಾರೆ. 

ಕುಂದಾಪುರ, ಜುಲೈ 20 : ರೋಗಿಗಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಶಿರೂರು ಟೋಲ್ ಗೇಟ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಘಟನೆ ನಡೆದಿದ್ದು ಹೊನ್ನಾವರ ಮೂಲದ ನಾಲ್ವರು ಸಾವನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದಾರೆ. 

ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ಹೃದಯ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಕರೆತರುತ್ತಿದ್ದರು. ಈ ವೇಳೆ, ಟೋಲ್ ಗೇಟ್ ರಸ್ತೆಯಲ್ಲಿ ದನ ಮಲಗಿದ್ದುದನ್ನು ತಿಳಿದು ಚಾಲಕ ಬ್ರೇಕ್ ಹಾಕಿದ್ದು ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ಟೋಲ್ ಗೇಟ್‌‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದರಲ್ಲಿದ್ದ ಹೊನ್ನಾವರದ ಹಾಡಗೇರಿ ನಿವಾಸಿ ಹೃದಯ ರೋಗಿಯಾಗಿದ್ದ ಗಜಾನನ ಗಣಪತಿ ನಾಯ್ಕ ಹಾಗೂ ಅವರ ಸಂಬಂಧಿಗಳಾದ ಮಂಜುನಾಥ ನಾಯ್ಕ, ಜ್ಯೋತಿ ನಾಯ್ಕ, ಲೋಕೇಶ್ ನಾಯ್ಕ್ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಆಂಬುಲೆನ್ಸ್ ಒಳಗಿದ್ದ ಗಣೇಶ್ ನಾಯ್ಕ್, ಗೀತಾ ಗಜಾನನ ನಾಯ್ಕ, ಶಶಾಂಕ್ ನಾಯ್ಕ, ಚಾಲಕ ರೋಷನ್ ಹಾಗೂ ಟೋಲ್ ಸಿಬಂದಿ ಸಂಭಾಜಿ ಘೋರ್ಪಡೆ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಮತ್ತು ಉಡುಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Nasty Ambulance accident at Shirur in Udupi, three from Honnavar dead. , a speeding ambulance hit a pillar of a Shirur toll gate counter killing four persons, seriously injuring two others, all from the same family on Wednesday, July 20. The driver and a toll staff escaped with minor injuries.  The ambulance that was on its way to bring a patient from Honnavar to Kundapur hospital when the driver lost control of the vehicle and hit the pillar. It is said he might have lost control while trying to evade a cow that was sitting in toll lane. Among the three deceased, one was a woman and the remaining two men.