ಬ್ರೇಕಿಂಗ್ ನ್ಯೂಸ್
04-07-22 08:10 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ವಳಚ್ಚಿಲ್, ಅಡ್ಯಾರ್ ಭಾಗದಲ್ಲಿ ಜುಲೈ 1ರಂದು ಭಾರೀ ಮಳೆಯಾಗಿದ್ದ ಕಾರಣ ಆ ಭಾಗದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಎತ್ತರ ಪ್ರದೇಶ ಆಗಿದ್ದರೂ ಮನೆಗಳಿಗೆ ನೀರು ನುಗ್ಗಿದ್ದು, ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನೀರು ನುಗ್ಗಿ ಬರುತ್ತಿದ್ದುದು ಜನರನ್ನು ದಿಗಿಲು ಮಾಡಿತ್ತು. ಅಲ್ಲಿರುವ ಸಣ್ಣ ಸೇತುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡು ನೀರು ಹರಿಯದೆ ತಡೆಯಾಗಿದ್ದು ಸಾರ್ವಜನಿಕರ ಟೀಕೆಗೂ ಗುರಿಯಾಗಿತ್ತು.
ಈ ಬಗ್ಗೆ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಅಡ್ಯಾರ್ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ವಳಚ್ಚಿಲ್, ಅಡ್ಯಾರ್ ಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಅಡ್ಯಾರ್ ಪಂಚಾಯತ್ ಪಿಡಿಓ ಕೃಷ್ಣ ನಾಯ್ಕ್ ಸ್ವತಃ ನೀರು ಹರಿಯೋ ಚರಂಡಿಗೆ ಇಳಿದು ಪ್ಲಾಸ್ಟಿಕ್ ಹೆಕ್ಕಿದ್ದಾರೆ. ಅಲ್ಲದೆ, ಸೇತುವೆ ಅಡಿಭಾಗದಲ್ಲಿ ಹಿಡಿದುಕೊಂಡಿದ್ದ ಪ್ಲಾಸ್ಟಿಕ್ ತೆಗೆಸಲು ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ.







ಮೊದಲೇ ಸಣ್ಣ ಸೇತುವೆ. ಒಂದು ಭಾಗದಿಂದ ನೀರು ನುಗ್ಗಿ ಬಂದಿದ್ದರಿಂದ ಸೇತುವೆ ಬ್ಲಾಕ್ ಆಗಿತ್ತು. ಆಮೇಲೆ ನೋಡಿದರೆ, ಅಲ್ಲಿನ ಎಲ್ಲ ರಸ್ತೆಗಳಲ್ಲೂ ನೀರು ನುಗ್ಗಿ ಬಂದಿತ್ತು. ಅಷ್ಟೊಂದು ನೀರು ಎಲ್ಲಿಂದ ಬಂದಿತ್ತು ಅನ್ನೋದು ಜನರಿಗೂ ಸೋಜಿಗವಾಗಿತ್ತು. ಸರಿಯಾದ ಚರಂಡಿ ಮಾಡಿಲ್ಲ. ಇದ್ದ ಚರಂಡಿಯಲ್ಲೂ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ಸುರಿಯಲಾಗಿದೆ ಎಂದು ಸ್ಥಳೀಯರು ಅಡ್ಯಾರ್ ಪಂಚಾಯತ್ ಆಡಳಿತದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೀಗ ಸ್ವತಃ ಪಿಡಿಓ ಅಧಿಕಾರಿಯೇ ನೀರು ಹರಿಯೋ ಮೋರಿಗೆ ಇಳಿದು ಸ್ವಚ್ಛ ಮಾಡಿದ್ದು ಜನರ ಪ್ರಶಂಸೆಗೆ ಕಾರಣವಾಗಿದೆ.
Mangalore Adyar gram panchayat PDO Harish Nayak gets into surge water at Valachil to clear garbage. Few days ago valachil had drowned with water creating havoc. After complaints from public PDO who visited the spot got down himself into the surge water to clear the garbage waste. People have applauded his work.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 10:11 am
HK News Staffer
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am