ಬ್ರೇಕಿಂಗ್ ನ್ಯೂಸ್
03-07-22 01:14 pm Mangaluru Correspondent ಕರಾವಳಿ
ಕುಂದಾಪುರ, ಜುಲೈ 3: ಮರವಂತೆ ಸಮುದ್ರ ಕಿನಾರೆಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಶನಿವಾರ ಮಧ್ಯರಾತ್ರಿ ಕಾರೊಂದು ಸಮುದ್ರಕ್ಕೆ ಬಿದ್ದು ಅದರಲ್ಲಿದ್ದ ಮಾರ್ಬಲ್ ವ್ಯಾಪಾರಿಯ ಪುತ್ರ ಕಾರಿನಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೋದರ ಸಂಬಂಧಿಯಾಗಿರುವ ಇನ್ನೊಬ್ಬ ಯುವಕ ನಾಪತ್ತೆಯಾಗಿದ್ದು ಸ್ಥಳೀಯರು, ಅಗ್ನಿಶಾಮಕ ದಳ ಹುಡುಕಾಟ ನಡೆಸಿದ್ದಾರೆ.
ಕೋಟೇಶ್ವರದ ಬೀಜಾಡಿ ನಿವಾಸಿ ವೀರಜ್ ಆಚಾರ್ಯ(28) ಮೃತಪಟ್ಟ ಸ್ಥಿತಿಯಲ್ಲಿ ಕಾರಿನೊಳಗೆ ಪತ್ತೆಯಾಗಿದ್ದಾರೆ. ಶನಿವಾರ ರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದ್ದು, ಕಾರಿನಲ್ಲಿ ನಾಲ್ವರು ಸೋದರ ಸಂಬಂಧಿ ಯುವಕರು ಕೋಟೇಶ್ವರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದರು. ರೋಶನ್, ಸಂದೇಶ್, ಕಾರ್ತಿಕ್ ಮತ್ತು ವೀರಜ್ ಕೋಟೇಶ್ವರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ, ಮರವಂತೆಯ ಮಾರಸ್ವಾಮಿ ದೇವಸ್ಥಾನದ ಸಮೀಪ ಭಾರೀ ಮಳೆಯ ಕಾರಣ ಕಾರು ಸಮುದ್ರ ದಂಡೆಗೆ ಇಳಿದಿದೆ ಎನ್ನಲಾಗುತ್ತಿದ್ದು, ಸಮುದ್ರದ ನೀರಿನಲ್ಲಿ ಸಿಲುಕಿ ರೋಶನ್ ಎಂಬವರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಾರ್ತಿಕ್ ಮತ್ತು ಸಂದೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೀರಜ್ ಕಾರನ್ನು ಚಲಾಯಿಸುತ್ತಿದ್ದ ಸೀಟಿನಲ್ಲಿದ್ದು ಸೀಟ್ ಬೆಲ್ಟ್ ಹಾಕ್ಕೊಂಡ ರೀತಿಯಲ್ಲೇ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗ್ಗೆ ಸ್ಥಳೀಯ ಮೀನುಗಾರರು ಸೇರಿ ಕಾರನ್ನು ಹಗ್ಗ ಕಟ್ಟಿ ಮೇಲಕ್ಕೆತ್ತಿದ್ದಾರೆ. ದಿನೇಶ್ ಗಂಗೊಳ್ಳಿ, ಇಬ್ರಾಹಿಂ ಗಂಗೊಳ್ಳಿ, ನದೀಮ್ ಅವರಿದ್ದ ಮುಳುಗು ತಜ್ಞರ ತಂಡ ರೋಶನ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಸರ್ಕಲ್ ಇನ್ ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಾರು ಅಪಘಾತದ ಬಗ್ಗೆ ಶಂಕೆ
ವೀರಜ್, ಬೀಜಾಡಿಯ ಗೋಳಿಬೆಟ್ಟು ನಿವಾಸಿ ವಿಲಾಸ್ ಮಾರ್ಬಲ್ ಸಂಸ್ಥೆಯ ಮಾಲಕ ರಮೇಶ್ ಆಚಾರ್ಯ ನೇರಂಬಳ್ಳಿ ಎಂಬವರ ಪುತ್ರನಾಗಿದ್ದು, ಸೀಟ್ ಬೆಲ್ಟ್ ಹಾಕಿದ ರೀತಿಯಲ್ಲೇ ಕಾರಿನಲ್ಲಿ ಉಳಿದುಕೊಂಡಿರುವುದು ಅಪಘಾತದ ಬಗ್ಗೆ ಸಂಶಯಕ್ಕೂ ಕಾರಣವಾಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದರೇ ಅನ್ನುವ ಶಂಕೆಯೂ ತಲೆದೋರಿದೆ. ಸಹಜ ಸ್ಥಿತಿಯಲ್ಲಿ ಕಾರು ಸಮುದ್ರ ದಂಡೆಗೆ ಇಳಿದರೂ ಚಾಲಕ ಸೀಟ್ ಬೆಲ್ಟ್ ಹಾಕಿದ ರೀತಿಯಲ್ಲೇ ಉಳಿದುಕೊಂಡಿರುವುದು ಮತ್ತು ಅದೇ ಸ್ಥಿತಿಯಲ್ಲಿ ಸಾವು ಕಂಡಿರುವುದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ಮರವಂತೆ ಹೆದ್ದಾರಿಯಲ್ಲಿ ಕಾರು ಬದಿಗೆ ಇಳಿದರೂ, ನೇರವಾಗಿ ಸಮುದ್ರಕ್ಕೆ ಬೀಳುವ ಸ್ಥಿತಿ ಇಲ್ಲ. ಬಂಡೆಕಲ್ಲುಗಳು ಇವೆ. ಆ ಜಾಗಕ್ಕೆ ಕಾರು ಬಿದ್ದರೂ, ನೀರಿನಲ್ಲಿ ಕೊಚ್ಚಿ ಹೋಗುವ ಮೊದಲು ಮೇಲೆ ಬರಬಹುದಿತ್ತು. ಅಪಘಾತದ ಸ್ಥಿತಿ ನೋಡಿದರೆ ಬೇರೆ ಏನಾದರೂ ಆಯಾಮ ಇದ್ದಿರುವ ಶಂಕೆ ವ್ಯಕ್ತವಾಗುತ್ತದೆ.
In a shocking incident, a person was killed and another has gone missing as the driver of a car lost control over his vehicle and the car fell into the sea on National Highway 166, late night on Saturday, July 2 at Maravanthe under the Gangolli Police Station limits. The car, moving from Koteshwar to Byndoor on National Highway 66, veered off the road and fell into the sea. At the time of the accident, there were 4 persons travelling in the car. One among them, Viraj, was killed. Another person, Roshan, is said to be washed away by the waves and is missing.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm