ಬ್ರೇಕಿಂಗ್ ನ್ಯೂಸ್
28-06-22 05:45 pm Mangalore Correspondent ಕರಾವಳಿ
ಮಂಗಳೂರು, ಜೂನ್ 28: ನಗರದ ಪಂಪ್ವೆಲ್ ಮೇಲ್ಸೇತುವೆಯ ಅಡಿಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಹಠಾತ್ತಾಗಿ ರಸ್ತೆ ಕುಸಿದು ನೀರು ಚಿಮ್ಮತೊಡಗಿದ್ದು ಸ್ಥಳೀಯರು ಏನಾಗುತ್ತಿದೆ ಎಂದು ತಿಳಿಯದೆ ಗಲಿಬಿಲಿ ಒಳಗಾಗಿದ್ದಾರೆ. ಕೆಲವು ಜನರು ಸ್ಥಳದಲ್ಲಿ ಭೂಕುಸಿತ ಆಗುತ್ತೋ ಅನ್ನುವ ಭಯಕ್ಕೆ ಒಳಗಾಗಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಕೂಡಲೇ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದಾರೆ. ಬಳಿಕ ಮಹಾನಗರ ಪಾಲಿಕೆಯ ನೀರು ಸರಬರಾಜು ಇಲಾಖೆಯ ಸಿಬಂದಿಗೆ ವಿಷಯ ತಿಳಿಸಿದ್ದಾರೆ.
ತುಂಬೆ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ನೀರಿನ ಪೈಪ್ ಲೈನ್ ಪಂಪ್ವೆಲ್ ರಸ್ತೆಯ ಅಡಿ ಭಾಗದಿಂದ ಬೆಂದೂರುವೆಲ್ ಪಂಪ್ ಹೌಸ್ ಗೆ ಸಂಪರ್ಕ ಹೊಂದಿದೆ. ಅದರಲ್ಲಿ ಒಂದು 38 ಇಂಚ್ ವ್ಯಾಸದ ನೀರಿನ ಪೈಪ್ ಲೈನ್ ಆಗಿದ್ದರೆ, ಇನ್ನೊಂದು ಪಡೀಲ್ ಪಂಪ್ ಹೌಸ್ ನಿಂದ ಸಬ್ ಆಗಿ ಲೇಡಿಹಿಲ್ ಪಂಪ್ ಹೌಸ್ಗೆ ಪೂರೈಕೆಯಾಗುತ್ತಿರುವ 18 ಇಂಚು ವ್ಯಾಸದ ನೀರಿನ ಪೈಪ್ ಲೈನ್. ಮಳೆಯಿಂದಾಗಿ ರಸ್ತೆ ಸಡಿಲಗೊಂಡು ಹೆದ್ದಾರಿಯಲ್ಲಿ ಭಾರದ ವಾಹನಗಳು ಸಾಗುತ್ತಿದ್ದಾಗ ಅಡಿಭಾಗದಲ್ಲಿ ಸಾಗಿದ್ದ 18 ಇಂಚು ವ್ಯಾಸದ ಪೈಪ್ ಲೈನ್ ಒಡೆದು ಹೋಗಿದ್ದು, ನೀರಿನ ರಭಸಕ್ಕೆ ರಸ್ತೆಯನ್ನೇ ಮೇಲಕ್ಕೆ ಚಿಮ್ಮುತ್ತಾ ನೀರು ಹೊರಬಂದಿದೆ.
ಕಂಕನಾಡಿ ಕಡೆಯಿಂದ ಬರುವ ವಾಹನಗಳು ಸೇತುವೆಯ ಅಡಿಭಾಗದಿಂದಾಗಿ ಗರೋಡಿಯತ್ತ ಸಾಗಲು ನಡುವಿನ ಸರ್ಕಲ್ ದಾಟುವಲ್ಲಿಯೇ ನಾಲ್ಕೈದು ಮೀಟರ್ ವ್ಯಾಪ್ತಿಯಲ್ಲಿ ನೀರು ಚಿಮ್ಮತೊಡಗಿತ್ತು. ಆನಂತರ, ನೀರಿನ ಪೈಪ್ ಲೈನನ್ನು ಬಂದ್ ಮಾಡಿದ್ದು, ಪೈಪ್ ಒಡೆದಿರುವುದು ಎಲ್ಲಿ ಅನ್ನುವುದನ್ನು ಪತ್ತೆ ಹಚ್ಚಲು ಕಾಮಗಾರಿ ಆರಂಭಿಸಿದ್ದಾರೆ. ಹಿಂದೆ ಈ ಭಾಗದಲ್ಲಿ ನೀರಿನ ತೋಡು ಇತ್ತು. ಅದರ ಬದಿಯಲ್ಲೇ ನೀರಿನ ಪೈಪ್ ಲೈನ್ ಹಾಕಲಾಗಿತ್ತು. ಆನಂತರ ರಸ್ತೆ ವಿಸ್ತರಣೆಯಾದ ಸಂದರ್ಭದಲ್ಲಿ ಅದರ ಮೇಲ್ಗಡೆ ಮಣ್ಣು ಮುಚ್ಚಿ ರಸ್ತೆ ಮಾಡಲಾಗಿತ್ತು. ರಸ್ತೆಯಾಗಿ ಎರಡು ವರ್ಷ ಆಗುತ್ತಲೇ ನೀರಿನ ಪೈಪ್ ಲೈನ್ ಒಡೆದು ಹೋಗಿದೆ.
ಸದ್ಯಕ್ಕೆ ಲೇಡಿಹಿಲ್ ಪಂಪ್ ಹೌಸ್ ಗೆ ಪೂರೈಕೆಯಾಗುವ 18 ಇಂಚು ವ್ಯಾಸದ ನೀರಿನ ಪೈಪ್ ಲೈನನ್ನು ಮಾತ್ರ ಕಡಿತ ಮಾಡಲಾಗಿದೆ. ಇದರಿಂದ ಸುಲ್ತಾನ್ ಬತ್ತೇರಿ, ಉರ್ವಾ, ಮಣ್ಣಗುಡ್ಡ, ಲೇಡಿಹಿಲ್, ಕಾಪಿಕಾಡು, ಚಿಲಿಂಬಿ, ಕೋಡಿಕಲ್ ಆಸುಪಾಸಿನ ವ್ಯಾಪ್ತಿಯ ಏಳು ಕಾರ್ಪೊರೇಟರ್ ಏರಿಯಾಗಳಿಗೆ ನೀರಿನ ಪೂರೈಕೆ ಸ್ಥಗಿತ ಆಗಿದೆ. ಪೈಪ್ ಒಡೆದಿದ್ದು ಎಲ್ಲಿ ಅನ್ನೋದು ಪತ್ತೆಯಾದಲ್ಲಿ ಇಂದು ರಾತ್ರಿಯೇ ಸರಿಪಡಿಸಲಾಗುವುದು, ಇಲ್ಲದೇ ಹೋದಲ್ಲಿ ಒಂದು ದಿನ ವಿಳಂಬ ಆಗಬಹುದು ಎಂದು ಕಾಮಗಾರಿ ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಸಿಬಂದಿ ತಿಳಿಸಿದ್ದಾರೆ.
As the water pipeline connecting from Thumbe to Bendorewell got damaged at Pumpwell, heavy water spillage and traffic snarl was witnessed near the flyover here on Tuesday June 28.The incident created inconvenience to the vehicular movement. Due to the incident, water is flowing on the road which led to cracks on the tar road under the flyover.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm