ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ನಾಯಕರ ಮಕ್ಕಳನ್ನು ನಾವು ಕೇಳಿಲ್ಲ ; ನಳಿನ್ ಕುಮಾರ್ ಟಾಂಗ್ 

25-06-22 03:38 pm       Mangalore Correspondent   ಕರಾವಳಿ

ಗ್ನಿಪಥ್ ಯೋಜನೆಗೆ ನಾವು ಕಾಂಗ್ರೆಸ್ ನಾಯಕರ ಮಕ್ಕಳನ್ನು ಕೇಳಿಲ್ಲ. ಸೇನೆಗೆ ಸೇರ್ಪಡೆ ಆಗಬೇಕು, ದೇಶಸೇವೆ ಮಾಡಬೇಕು ಎನ್ನುವವರಿಗೆ ಅಷ್ಟೇ ಅವಕಾಶ.

Photo credits : Representation Image

ಮಂಗಳೂರು, ಜೂನ್ 25 : ಅಗ್ನಿಪಥ್ ಯೋಜನೆಗೆ ನಾವು ಕಾಂಗ್ರೆಸ್ ನಾಯಕರ ಮಕ್ಕಳನ್ನು ಕೇಳಿಲ್ಲ. ಸೇನೆಗೆ ಸೇರ್ಪಡೆ ಆಗಬೇಕು, ದೇಶಸೇವೆ ಮಾಡಬೇಕು ಎನ್ನುವವರಿಗೆ ಅಷ್ಟೇ ಅವಕಾಶ. ಕಾಂಗ್ರೆಸಿನವರಿಗೆ ಮೋದಿ ಸರಕಾರದ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ ಮಾನಸಿಕತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟೀಕಿಸಿದ್ದಾರೆ.

ದೇಶದಲ್ಲಿ ಯಾವುದೆಲ್ಲ ಒಳ್ಳೆಯದಾಗುತ್ತದೋ ಅದನ್ನೆಲ್ಲ ವಿರೋಧ ಮಾಡುವುದು ಕಾಂಗ್ರೆಸಿಗರ ಮಾನಸಿಕತೆ. ಅದರಲ್ಲಿ ಅಗ್ನಿಪಥ್ ಕೂಡ. ಒಳ್ಳೆಯ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಸುದ್ದಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.‌

Rohit Chakratitrha reacts on his viral post mrq | Rohit Chakratirtha: ನಾನು  ನಾಡಗೀತೆಗೆ ಅವಮಾನ ಮಾಡಿಲ್ಲ ಎಂದ ಚಕ್ರತೀರ್ಥ; ಇತ್ತ ಗಡಿಪಾರಿಗೆ ಆಗ್ರಹಿಸಿ ಕರವೇ  ಪ್ರತಿಭಟನೆ– News18 Kannada

ರೋಹಿತ್ ಚಕ್ರತೀರ್ಥ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್, ಕಾಂಗ್ರೆಸ್ ಅಧಿಕಾರ ಕೈತಪ್ಪಿದ ಬಳಿಕ ಗಲಭೆಗೆ ಪ್ರಚೋದನೆ ನೀಡುತ್ತಿದೆ. ಕಾನೂನು ಕೈಗೆತ್ತಿಕೊಳ್ಳುವ ಎಲ್ಲ ಘಟನೆಗಳಲ್ಲಿ ಸೂತ್ರಧಾರರಂತೆ ವರ್ತಿಸುತ್ತಿದೆ. ಡಿಜೆ ಹಳ್ಳಿ - ಕೆಜಿ ಹಳ್ಳಿ ಗಲಭೆ, ಶಿವಮೊಗ್ಗ, ಹುಬ್ಬಳ್ಳಿ ಗಲಭೆಗಳ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತದೆ. ದ್ವೇಷದ ರಾಜಕಾರಣವನ್ನು ಮಾಡುತ್ತಿದೆ ಎಂದು ಹೇಳಿದರು.

ಪಠ್ಯಪುಸ್ತಕ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ಏನು ಹೇಳಿದ್ದಾರೆ. ಪಠ್ಯದಲ್ಲಿ ಏನಿದೆ ಎಂಬುದನ್ನು ತಿಳಿಯದೆ ಮೂರ್ಖತನ ತೋರುತ್ತಿದೆ. ಕಾಂಗ್ರೆಸ್ ನವರು ಕ್ಷಮೆ ಕೇಳುತ್ತಾರೆಂದು ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ. ವಿರೋಧ ಪಕ್ಷದವರು ಕೇಳುತ್ತಾರೆಂದು ಎಲ್ಲದಕ್ಕೂ ಕ್ಷಮೆ ಕೇಳಲು ಸಾಧ್ಯವಿಲ್ಲ. ನಾವು ಆಡಳಿತ ನಡೆಸುವವರು, ಹೇಗೆ ನಡೆಸಬೇಕೆಂದು ನಮಗೆ ಗೊತ್ತು.  ನಿರ್ದಿಷ್ಟ ಸಿದ್ಧಾಂತವನ್ನು ಈ ದೇಶದಲ್ಲಿ ಜಾರಿಗೆ ತಂದಿರೋದೇ ಕಾಂಗ್ರೆಸ್. ಸಾಹಿತಿಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ. ಮೊದಲಿಗೆ ಪುಸ್ತಕದ ಒಳಗೆ ಏನಿದೆ ಎಂದು ತಿಳಿದುಕೊಳ್ಳಲಿ ಎಂದು ನಳಿನ್ ಕುಮಾರ್ ಹೇಳಿದರು.

We never asked congress leaders children to join Agnipath scheme slams Nalin Kumar Kateel in Mangalore. Congress only protest against Modi that's their only aim and goal he added.