ಬ್ರೇಕಿಂಗ್ ನ್ಯೂಸ್
30-04-22 04:15 pm HK Desk News ದೇಶ - ವಿದೇಶ
ಮುಂಬೈ, ಎ.30: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುವ ಟಿಪ್ಸ್ ಕುರಿತಾಗಿ ಸ್ಪೆಷಲ್ ಎಪಿಸೋಡ್ ನಡೆಸಿಕೊಡುತ್ತಿದ್ದಾರೆ. ‘’ಷೇಪ್ ಆಫ್ ಯು’’ ಹೆಸರಿನ ವಿಶೇಷ ಕಾರ್ಯಕ್ರಮದಲ್ಲಿ ಈ ಬಾರಿ ಚಿತ್ರನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತನ್ನ ಖಾಸಗಿ ಜೀವನ, ಲೈಂಗಿಕತೆ ಬಗ್ಗೆ ತಾಹಿರಾ ಕಶ್ಯಪ್ ಮಾತನಾಡಿದ್ದು ಬೊಜ್ಜು ಕರಗಿಸಲು ಸೆಕ್ಸ್ ನಡೆಸುವುದು ಅತ್ಯುತ್ತಮ ವರ್ಕೌಟ್ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಆಯುಷ್ಮಾನ್ ಖುರಾನ ಮತ್ತು ತಾಹಿರಾ ಕಶ್ಯಪ್ ಬಾಲಿವುಡ್ ಜಗತ್ತಿನ ರೊಮ್ಯಾಂಟಿಕ್ ತಾರಾ ಜೋಡಿ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ನಡೆಸಿಕೊಡುವ ಮಿರ್ಚೀಸ್ ಷೇಪ್ ಆಫ್ ಯು ಕಾರ್ಯಕ್ರಮದಲ್ಲಿ ತಾಹಿರಾ ಕಷ್ಯಪ್ ಪಾಲ್ಗೊಂಡಿದ್ದರು. ಅಲ್ಲದೆ, ಶಿಲ್ಪಾ ಶೆಟ್ಟಿ ಪ್ರಶ್ನೆಗಳಿಗೆ ತಾಹಿರಾ ತುಂಬ ಬೋಲ್ಡ್ ಆಗಿ ಉತ್ತರಿಸಿದ್ದಲ್ಲದೆ, ಖಾಸಗಿ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ನೀವು ಲೇಖಕಿ, ನಿರ್ದೇಶಕಿಯಾಗಿ ಲೈಂಗಿಕತೆಯನ್ನು ಹೇಗೆ ನಿರ್ಭಿಡೆಯಾಗಿ ಬರೆಯುತ್ತೀರಿ ಎಂಬ ಶಿಲ್ಪಾ ಶೆಟ್ಟಿಯ ಪ್ರಶ್ನೆಗೆ, ಸೆಕ್ಸ್ ಅನ್ನುವುದು ಅತ್ಯಂತ ಶ್ರೇಷ್ಠ. ದೇಹಕ್ಕೆ ಅತ್ಯುತ್ತಮ ವ್ಯಾಯಾಮ. ಯಾಕೆ ಅದನ್ನು ಹಾಗೆಯೇ ಹೇಳಿಕೊಳ್ಳಬಾರದು ಎಂದು ತಾಹಿರಾ ಕಶ್ಯಪ್ ಮರು ಪ್ರಶ್ನೆ ಹಾಕಿದ್ದಾರೆ.
ದೇಹದ ಬೊಜ್ಜು ಕರಗಿಸಲು ಸೆಕ್ಸ್ ಅತ್ಯುತ್ತಮ ವರ್ಕೌಟ್ ಗಳಲ್ಲಿ ಒಂದು ಎಂದು ತಾಹಿರಾ ನಿರ್ಭಿಡೆಯಾಗಿ ಉತ್ತರಿಸಿದ್ದಾರೆ. ಅಲ್ಲದೆ, ಪ್ರೇಕ್ಷಕರು ಕೇಳಿದ ಪ್ರಶ್ನೆಗೆ ತನ್ನ ಪತಿ ಆಯುಷ್ಮಾನ್ ಖುರಾನ ಪಾರದರ್ಶಕ ವ್ಯಕ್ತಿತ್ವದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕಾರ್ಯಕ್ರಮದಲ್ಲಿ ಬಾಲಿವುಡ್ ಇಂಡಸ್ಟ್ರಿಯ ಸೆಲೆಬ್ರಿಟಿಗಳನ್ನೇ ಮುಂದಿಟ್ಟು ಅವರ ದೇಹ, ಆರೋಗ್ಯದ ಗುಟ್ಟಿನ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅವರ ಬಾಯಿಂದಲೇ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಟಿಪ್ಸ್ ಗಳನ್ನು ಕೇಳುತ್ತಾರೆ. ಹೀಗಾಗಿ ಕೆಲವು ಎಪಿಸೋಡ್ ಗಳು ತುಂಬಾ ರೊಮ್ಯಾಂಟಿಕ್ ಆಗಿರುತ್ತವೆ. ಅಲ್ಲದೆ, ಕೆಲವೊಮ್ಮೆ ಸುದ್ದಿಗೂ ಗ್ರಾಸವಾಗುತ್ತವೆ.
Shilpa Shetty is hosting a show titled Shape of You, which is solely based on physical and mental wellness. Her latest guest on the show was Ayushmann Khurrana's wife Tahira Kashyap. Things soon turned raunchy as Tahira talked about her sex life and called it the best workout ever. She revealed how 'quickies' burn a lot of calories. Well, we can only ask now - Ayushmann, are you listening?
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm