ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎಂದು ಒಮ್ಮೆಯಾದ್ರೂ ಒಪ್ಪಿಕೊಂಡಿದ್ದಾರೆಯೇ? ಈ ವ್ಯಕ್ತಿಯನ್ನು ಪ್ರಶ್ನಿಸುವವರು ಯಾರೂ ಇಲ್ವಾ? ಹಿರಿಯ ನಟ ನಾಸಿರುದ್ದೀನ್ ಶಾ ಕಿಡಿ 

23-07-26 05:57 pm       HK News Desk   ದೇಶ - ವಿದೇಶ

ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಹಿರಿಯ ನಟ ನಾಸೀರುದ್ದೀನ್ ಶಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ, ಜುಲೈ 23 :  ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಹಿರಿಯ ನಟ ನಾಸೀರುದ್ದೀನ್ ಶಾ ಪ್ರಧಾನಿ  ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುವಕರ ಮೇಲೆ ಪೊಲೀಸ್ ಗೂಂಡಾಗಳು ನಡೆಸುತ್ತಿರುವ ದೌರ್ಜನ್ಯವನ್ನು ನೋಡಿ ನಾನು ಭಾವುಕನಾಗಿದ್ದೇನೆ. ನನ್ನ ರಕ್ತ ಕುದಿಯುತ್ತಿದೆ. ನಿಮ್ಮ ಮಕ್ಕಳ ಬಗ್ಗೆ ಯೋಚಿಸಿ. ಇಂದು ನೀವು ಮಾಡುತ್ತಿರುವುದಕ್ಕೆ ನಾಳೆ ನಿಮ್ಮ ಮಕ್ಕಳು ಕರ್ಮಫಲವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

"ಪ್ರಧಾನಿ ಮೋದಿ ಮೌನ ಹೊಸದೇನಲ್ಲ. ಅವರು ಯಾವ ಮಹತ್ವದ ವಿಚಾರದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ? ಯಾವಾಗಲಾದರೂ 'ನಾವು ತಪ್ಪು ಮಾಡಿದ್ದೇವೆ' ಎಂದು ಒಪ್ಪಿಕೊಂಡಿದ್ದಾರೆಯೇ? ಅವರು ತಮ್ಮನ್ನು ದೇವರಿಂದ ವಿಶೇಷ ಆಶೀರ್ವಾದ ಪಡೆದ ನಾಯಕನಂತೆ ಬಿಂಬಿಸಿಕೊಂಡಿದ್ದಾರೆ. ಆ ಭ್ರಮೆ ಅವರ ಬೆಂಬಲಿಗರ ಮೇಲೂ ಪರಿಣಾಮ ಬೀರಿದೆ. ನಮ್ಮ ಸಮಾಜಕ್ಕೆ ಏನಾಗಿದೆ? ಈ ವ್ಯಕ್ತಿಯನ್ನು ಪ್ರಶ್ನಿಸುವವರು ಯಾರೂ ಇಲ್ವಾ ?" ಎಂದು ಕಿಡಿಕಾರಿದ್ದಾರೆ. 

"ಮೋದಿ ಇದುವರೆಗೆ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ನಡೆಸಿಲ್ಲ. ಅವರು ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ಹೆದರುತ್ತಾರೆ. 2002ರ ಗುಜರಾತ್ ಗಲಭೆ, ರಾಜಕೀಯಕ್ಕೆ ಬರುವ ಮುನ್ನ ಹಿಮಾಲಯದಲ್ಲಿ ಧ್ಯಾನ ಮಾಡಿದ್ದೆ ಎನ್ನುವ ಹೇಳಿಕೆ, 35 ವರ್ಷ ಭಿಕ್ಷೆ ಬೇಡಿದ್ದೇನೆ ಎಂಬಂತಹ ಹೇಳಿಕೆಗಳ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದರೆ ಉತ್ತರಿಸಲು ಅವರಿಗೆ ಭಯವಿದೆ," ಎಂದು ಆರೋಪಿಸಿದರು.

ಜನರಿಗೆ ಪೆಟ್ರೋಲ್ ಉಳಿಸಿ ಎಂದು ಹೇಳುತ್ತಾರೆ. ಆದರೆ ತಾವೇ ಹಲವು ಎಸ್‌ಯುವಿ ವಾಹನಗಳ ಬೆಂಗಾವಲಿನಲ್ಲಿ ಸಂಚರಿಸುತ್ತಾರೆ. ವಿದೇಶ ಪ್ರವಾಸ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಾರೆ. ಆದರೆ ತಾವೇ ನಿರಂತರ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಹಾಗಾಗಿ ನಾನು ಮೋದಿ ಹೇಳುವ ಅನೇಕ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.