ಬ್ರೇಕಿಂಗ್ ನ್ಯೂಸ್
03-10-23 05:25 pm HK News Desk ಕರ್ನಾಟಕ
ಕೋಲಾರ, ಅ.3: ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ. ಇದು ಎಲ್ಲಾ ರೀತಿಯ ಅನುಮಾನಗಳನ್ನ ಹುಟ್ಟುಹಾಕಿವೆ. ಸಿಮಿ ಬ್ಯಾನ್ ಆಗಿ ಕಚೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಅವರ ಅಜೆಂಡಾ ತೋರಿಸುವ ಭೂಪಟ ಸಿಕ್ಕಿತ್ತು. ಅದರಲ್ಲಿ ಘಜವಾಹಿಂದ್ ಉಲ್ಲೇಖ ಮಾಡಿದ್ದರು. ದೇಶದಲ್ಲಿ ಇಸ್ಲಾಮಿ ಧರ್ಮ ಸ್ಥಾಪಿಸುವುದೇ ಉದ್ದೇಶವಾಗಿದೆ. ಅದನ್ನೀಗ ಜಾರಿಗೊಳಿಸಲು ಮತಾಂಧ ಶಕ್ತಿಗಳು ಮುಂದಾಗಿವೆ ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.
ಘಜವಾ ಹಿಂದ್ ಟಾಸ್ಕ್ ಪೂರ್ಣಗೊಳಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಮೊಘಲರು ಭಾರತದ ಯಾವ್ಯಾವ ಸ್ಥಳವನ್ನ ಆಳ್ವಿಕೆ ನಡೆಸುತ್ತಿದ್ದರು ಅದನ್ನ ಅದರಲ್ಲಿ ಉಲ್ಲೇಖ ಮಾಡಿದ್ದಾರೆ. ಘಜವಾ ಹಿಂದ್ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವವವರು ನಮ್ಮ ನಡುವೆ ಇದ್ದಾರೆ ಅನ್ನೋದಕ್ಕೆ ಶಿವಮೊಗ್ಗದ ಘಟನೆಯೆ ಸಾಕ್ಷಿ. ಇವರ ಉದ್ದೇಶ ಬರ್ಬರ ಆಳ್ವಿಕೆ ತರುವುದು.
ಔರಂಗಜೇಬ್ ಮತಾಂತರದ ಉದ್ದೇಶ ಇಟ್ಟುಕೊಂಡಿದ್ದವನು. ಸನಾತನ ಧರ್ಮ, ಭಾರತೀಯತೆ ನಾಶ ಮಾಡುವುದು ಔರಂಗಜೇಬ್ ಉದ್ದೇಶವಾಗಿತ್ತು. ಇಂತಹ ಉದ್ದೇಶಕ್ಕೆ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಅವಕಾಶ ಕೊಟ್ಟಿದೆ. ಟಿಪ್ಪು, ಔರಂಗಜೇಬ್ ಉದ್ದೇಶ ಘಜವಾಹಿಂದ್ ಸ್ಥಾಪನೆ ಮಾಡುವುದಾಗಿತ್ತು. ಟಿಪ್ಪು ಆಡಳಿತ ಮುಂದುವರೆದಿದ್ದರೆ ಈ ರಾಜ್ಯದಲ್ಲಿ ಕನ್ನಡ ಎಂಬುದನ್ನ ಉಳಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತಿತ್ತು. ಅಂತಹ ನಂಬಿಕೆ ದ್ರೋಹಿ, ಕನ್ನಡ ದ್ರೋಹಿಯನ್ನ ವಿಜೃಂಭಿಸಲು ಸರ್ಕಾರ ಸಹಾಯ ಮಾಡಿದೆ.
ಇವರೆಲ್ಲರ ಉದ್ದೇಶ ಮೊಘಲ್ ಸಾಮ್ರಾಜ್ಯ ಸ್ಥಾಪನೆ ಮಾಡುವುದೇ ಆಗಿದೆ. ಇದಕ್ಕೆ ಜಿಲ್ಲಾಡಳಿತ ಕುಮ್ಮಕ್ಕು ಕೊಟ್ಟಿದೆ, ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಪಕ್ಷ ಸಹಕಾರ ಮಾಡಿದೆ. ರಾಷ್ಟ್ರ ಮುಖ್ಯ ಎಂಬುದು ಕಾಂಗ್ರೇಸ್ ನ ಭಾವನೆಗಳಲ್ಲಿ ಕೊರತೆ ಆಗಿ ರಾಜಕೀಯ ಲಾಭಕ್ಕಾಗಿ ಮಾಡಿದ್ದಾರೆ. ನಾಳೆ ಇವರು ಬಿನ್ ಲಾಡೆನ್ ರೀತಿಯ ಭಯೋತ್ಪಾದಕರನ್ನೂ ಓಲೈಸುವಲ್ಲಿ ಅನುಮಾನವಿಲ್ಲ. ಆ ಕಾಲದಲ್ಲಿ ಬಿನ್ ಲಾಡೆನ್, ಟಿಪ್ಪು ಔರಂಗಜೇಬ್ ಆಗಿದ್ದರು. ಈಗಲೂ ಇವರ ಪರವಾಗಿ ತುಘಲಕ್ ದರ್ಬಾರು ಮಾಡುತ್ತಿದ್ದಾರೆ.
ಶಿವಮೊಗ್ಗ ಗಲಭೆಯ ನೇರ ಹೊಣೆ ರಾಜ್ಯ ಸರ್ಕಾರ. ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಅಸಮರ್ಥ ಗೃಹ ಸಚಿವರು ಖಡ್ಗ ಪ್ರದರ್ಶನ ಮಾಡಿಲ್ಲ ಎಂದು ಹೇಳ್ತಾರೆ. ಇದು ಅವರ ಸರ್ಕಾರದ ಅಸಾಮರ್ಥ್ಯವನ್ನು ಕಾಣಿಸುತ್ತಿದೆ ಎಂದು ಸಿಟಿ ರವಿ ಹೇಳಿದರು.
Stone pelting at Shivamogga CT Ravi Slams incident.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 04:21 pm
HK News Staffer
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm