₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ಆರೋಪ ; ಚಿನ್ನಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಹೋರಾಟಗಾರರಿಗೆ ನಿರಾಳ !

22-07-26 10:53 am       HK News Staffer   ಕ್ರೈಂ

ಸೌಜನ್ಯಾ ಪರ ಹೋರಾಟಗಾರರು ಮತ್ತು ಚಿತ್ರ ನಟ ಪ್ರಕಾಶ್ ರಾಜ್ ಜೊತೆಗೆ ಸೇರಿಕೊಂಡು ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು 200 ಕೋಟಿ ಫಂಡಿಂಗ್ ಮಾಡಿ ಭಾರೀ ಸಂಚು ಹೆಣೆದಿದ್ದಾರೆಂದು ಚಿನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಇದಲ್ಲದೆ, ಇಂತಹ ದೂರುಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದಾಗಿಯೂ ಅಭಿಪ್ರಾಯ ಪಟ್ಟಿದೆ.

ಮಂಗಳೂರು, ಜುಲೈ 22: ಸೌಜನ್ಯಾ ಪರ ಹೋರಾಟಗಾರರು ಮತ್ತು ಚಿತ್ರ ನಟ ಪ್ರಕಾಶ್ ರಾಜ್ ಜೊತೆಗೆ ಸೇರಿಕೊಂಡು ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು 200 ಕೋಟಿ ಫಂಡಿಂಗ್ ಮಾಡಿ ಭಾರೀ ಸಂಚು ಹೆಣೆದಿದ್ದಾರೆಂದು ಚಿನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಇದಲ್ಲದೆ, ಇಂತಹ ದೂರುಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದಾಗಿಯೂ ಅಭಿಪ್ರಾಯ ಪಟ್ಟಿದೆ. 

ಗಿರೀಶ ಮಟ್ಟೆಣ್ಣವರ, ಮಹೇಶ್ ತಿಮರೋಡಿ ಅವರು ತನಗೆ ಬೆದರಿಕೆ ಕೊಟ್ಟು ಹೇಳಿಕೆ ಕೊಡಿಸಿದ್ದಾರೆ. ಇದರ ಹಿಂದೆ 200 ಕೋಟಿ ವೆಚ್ಚದಲ್ಲಿ ಫಂಡಿಂಗ್ ಆಗಿದೆ ಇತ್ಯಾದಿ ಕಪೋಲಕಲ್ಪಿತ ಅರ್ಜಿಯನ್ನು ಹೈಕೋರ್ಟ್ ವಜಾ ಗೊಳಿಸಿ ಆದೇಶ ಮಾಡಿದೆ.  ಚಿತ್ರದುರ್ಗದ ಹಿರಿಯ ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ್ ಸಲ್ಲಿಸಿದ ಅರ್ಜಿ ವಿಚಾರಣೆ ಕುರಿತು ಮಾನ್ಯ ಹೈಕೋರ್ಟ್ ಈ ಅಭಿಪ್ರಾಯ ನೀಡಿದೆ. ಅಲ್ಲದೇ ಪ್ರಕರಣ ತನಿಖೆ ನಡೆಸುತ್ತಿರುವ SIT ಕೂಡ ಚಿನ್ನಯ್ಯ ಆರೋಪಗಳಿಗೆ ವಿರೋಧ ವ್ಯಕ್ತಪಡಿಸಿ “ ನಮ್ಮ ತನಿಖೆ ನಾವು ಮಾಡಿದ್ದೇವೆ,  ವರದಿಯನ್ನು ಸಲ್ಲಿಸಿದ್ದೇವೆ ” ಎಂದು ತಿಳಿಸಿದ್ದು ವಿಶೇಷವಾಗಿತ್ತು. 

ಸಾಮಾಜಿಕ ಹೋರಾಟವನ್ನು ಹತ್ತಿಕ್ಕಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ರಮಾ ನಾಗರಾಜ್ ಪರ ಹಿರಿಯ ದೆಹಲಿಯ ವಕೀಲ ವೃಂದಾ ಗ್ರೋವರ್ ಮತ್ತು ನಿತಿನ್, ಹಿರಿಯ ವಕೀಲ ಬಾಲನ್ ಅವರ ನ್ಯಾಯವಾದಿ ತಂಡ ಜಯಂತ್ T ಅವರ ಪರವಾಗಿ ವಾದ ಮಂಡಿಸಿತ್ತು. ಇದರಿಂದ ಚಿನ್ನಯ್ಯನ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ಸಲ್ಲಿಸಿದ್ದ ₹ 200 ಕೋಟಿ ಷಡ್ಯಂತ್ರದ ಅರ್ಜಿ ಸುಳ್ಳು ಮತ್ತು ಅಪಪ್ರಚಾರ ಮಾಡಿ ಹೋರಾಟಗಾರರನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರ ಎಂದು ಸಾಬೀತಾಗಿದೆ ಎಂದು ಹೋರಾಟಗಾರ ಗಿರೀಶ್ ಮಟ್ಟಣ್ವರ್ ಹೇಳಿದ್ದಾರೆ.