ಬ್ರೇಕಿಂಗ್ ನ್ಯೂಸ್
01-09-23 06:13 pm HK News Desk ಕರ್ನಾಟಕ
ಕೋಲಾರ, ಸೆಪ್ಟೆಂಬರ್ 1: ಮಾನವ ಹಕ್ಕು ಸಂಘಟನೆ ಹೆಸರಲ್ಲಿ ವಿಧವೆ ಮಹಿಳೆಯೊಬ್ಬರಿಗೆ 15 ಲಕ್ಷ ರೂಪಾಯಿ ಹಣ ವಂಚನೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಈ ಕುರಿತು ವಂಚನೆಗೊಳಗಾದ ಬೆಂಗಳೂರು ಕಾಡುಗೋಡಿ ಮೂಲದ ಮಹಿಳೆ ಶಾಂತಕುಮಾರಿ ಎಂಬುವರು 15 ಲಕ್ಷ lರೂಪಾಯಿ ವಂಚನೆ ಮಾಡಿರುವ ನ್ಯಾಷನಲ್ ಆ್ಯಂಟಿ ಕ್ರೈಂ ಮತ್ತು ಹ್ಯೂಮನ್ ರೈಟ್ಸ್ ಸಂಘಟನೆಯ ರಾಜ್ಯಾಧ್ಯಕ್ಷ ಜಾನ್ ಸಾಮುವೆಲ್ ಕಿಮ್, ಜೆ ವಿರುದ್ಧ ಕೋಲಾರ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಸಂಘಟನೆ ಹೆಸರಲ್ಲಿ ಅಮಾಯಕ ಜನರನ್ನು ವಂಚಿಸುತ್ತಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡು ನಮ್ಮ ಹಣ ವಾಪಸ್ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಂಚನೆಗೊಳಗಾದ ಮಹಿಳೆ ಶಾಂತಕುಮಾರಿ, ಜಾನ್ ಸಾಮುವೆಲ್ ಎಂಬುವರು ಹ್ಯೂಮನ್ ರೈಟ್ಸ್ ಸಂಘಟನೆ ಹೆಸರಲ್ಲಿ ಅಮಾಯಕ ಜನರನ್ನು ಯಾಮಾರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಸೇರಿದಂತೆ ಹಲವಾರು ಜನ ಇವನ ವಂಚನೆಗೆ ಒಳಗಾಗಿದ್ದು ಮತ್ತಷ್ಟು ಜನ ಜಾನ್ ಸಾಮುವೆಲ್ ಮೋಸದ ಜಾಲಕ್ಕೆ ಸಿಲಕಬಾರದು ಎಂದು ಪೋಲಿಸರಿಗೆ ದೂರ ನೀಡಲಾಗಿದೆ ಹಾಗೆಯೇ ಇವರ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕೆಂದು ಹೋರಾಟ ಮಾಡಲು ಮುಂದೆ ಬಂದಿದ್ದೇನೆ ಎಂದರು.
ಪರಿಚಯಸ್ಥರ ಮೂಲಕ ಇವರು ಸಂಘಟನೆ ಸೇರಿದ ವೇಳೆ ನನಗೆ ಪೊಲೀಸ್ ಹಿರಿಯ ಅಧಿಕಾರಿಗಳು, ಸಚಿವರು, ಅಧಿಕಾರಿಗಳು, ನ್ಯಾಯಾಧೀಶರು ಪರಿಚಯ ಇದ್ದಾರೆಂದು ನಮ್ಮನ್ನು ನಂಬಿಕೆ ಬರುವಂತೆ ಮಾತನಾಡಿದ ವೇಳೆ ತಕರಾರು ಇದ್ದ ನಮ್ಮ ಜಮೀನಿನ ಸಮಸ್ಯೆ ಹೇಳಿದಾಗ ನನಗೆ ತಹಸೀಲ್ದಾರ್ ಗೊತ್ತು ಕೂಡಲೇ ಬಗೆಹರಿಸುತ್ತೇನೆ ಎಂದು ಹೇಳಿದ್ದನ್ನು ನಂಬಿ ತನ್ನ ಮನೆಯ ದಾಖಲೆಗಳನ್ನು ಬ್ಯಾಂಕ್ ನಲ್ಲಿಟ್ಟು ಸಾಲ ಪಡೆದು ಏಳು ಲಕ್ಷ ಹಣ ಕೊಟ್ಟಿದೆ.
ನಂತರ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಡಿಕೊಡುತ್ತೇನೆ ಎಂದು ಹೇಳಿ ಮತ್ತೆ 5 ಲಕ್ಷ ರೂಪಾಯಿ ಹಣ ಪಡೆದುಕೊಂಡ. ನಂತರ ತಮ್ಮ ಮನೆಯ ಪತ್ರಗಳ ಮೇಲೆ ಸಹಿ ಹಾಕಿಸಿಕೊಂಡು ಇದೀಗ ನಾವು ವಾಸವಿರುವ ಮನೆಯನ್ನು ಯಾರಿಗೋ ಮಾರಾಟ ಮಾಡಲು ಸಂಚು ರೂಪಿಸಿದ್ದಾರೆ.
ಹಲವರು ಈತನಿಂದ ಮೋಸ ;
ಅನುಮಾನ ಬಂದ ಜಾನ್ ಸಾಮುವೆಲ್ ವಿರುದ್ಧ ಪರಿಶೀಲನೆ ನಡೆಸಿದಾಗ ಹಲವಾರು ಮಹಿಳೆಯರು ಇವನಿಂದ ಮೋಸ ಹೋಗಿದ್ದಾರೆ ಎಂಬುದು ತಿಳಿದು ಬಂದಿದೆ. ವಂಚನೆಗೊಳಗಾದವರು ಇವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದಾನೆ ಎಂದು ಆಪಾದಿಸಿದರು. ಸಂಘಟನೆ ಹೆಸರಲ್ಲಿ ಜನರು ಮೋಸ ಹೋಗಬಾರದು ಅದು ನಿಜವಾದ ಹ್ಯೂಮನ್ ರೈಟ್ಸ್ ಸಂಘಟನೆ ಅಲ್ಲ ನಕಲಿ ಸಂಘಟನೆ ಎಂದು ಮನವಿ ಮಾಡಿದರು.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಕಿರಣಬಾಬು, ಸುಂದರ್ ರಾಜು ಉಪಸ್ಥಿತರಿದ್ದರು.
National Anti crime and Human rights of india president John Samuel Kim from Kolar alleged of fraud of 15 lakhs, case filed in Bangalore. Shanthakumari from Bangalore has filed a cheating case in the name of Human rights against John Samuel.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 10:52 pm
HK News Desk
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm