ಬ್ರೇಕಿಂಗ್ ನ್ಯೂಸ್
06-03-26 09:50 am Giridhar Shetty, Headline Karnataka ದೇಶ - ವಿದೇಶ
ನವದೆಹಲಿ, ಮಾರ್ಚ್ 5: ಮಾರ್ಕ್ -48 ಟೊರ್ಪೆಡೋ ಹೆಸರಿನ ಈ ಜಲಾಂತರ್ಗಾಮಿ ಜಗತ್ತಿನ ಅತಿ ಬಲಿಷ್ಠ ನೌಕಾ ಶಕ್ತಿಗಳಲ್ಲಿ ಒಂದು. ಅಮೆರಿಕದ ನೌಕಾಪಡೆಯ ಪ್ರಬಲ ಅಸ್ತ್ರವಾಗಿರುವ ಈ ಜಲಾಂತರ್ಗಾಮಿ ಅಸ್ತ್ರವನ್ನು ಎರಡನೇ ಜಾಗತಿಕ ಯುದ್ಧದ ಬಳಿಕ ಮೊದಲ ಬಾರಿಗೆ ಹಿಂದು ಮಹಾಸಾಗರದಲ್ಲಿ ಸ್ಫೋಟಿಸಿ ಇರಾನಿನ ಯುದ್ಧ ಹಡಗನ್ನು ನಿರ್ನಾಮ ಮಾಡಿದೆ.
ಮಾರ್ಚ್ 4ರಂದು ಶ್ರೀಲಂಕಾ ಬಳಿಯ ಹಿಂದು ಮಹಾಸಾಗರದಲ್ಲಿ ಸಾಗುತ್ತಿದ್ದ ಇರಾನ್ ಯುದ್ಧ ನೌಕೆಯತ್ತ ಈ ಮಾರ್ಕ್ 48 ಟೊರ್ಪೆಡೋ ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿತ್ತು. 1972ರಲ್ಲಿ ತನ್ನ ಬತ್ತಳಿಕೆ ಸೇರಿಸಿಕೊಂಡಿದ್ದ ಈ ಮಾರ್ಕ್ 48 ಅನ್ನು ಆನಂತರ ಹಲವು ಆಧುನಿಕ ತಂತ್ರಜ್ಞಾನದೊಂದಿಗೆ ಮಾರ್ಪಡಿಸಲಾಗಿತ್ತು. ಸದ್ಯ ಜಗತ್ತಿನ ಹಲವು ಕಡೆಗಳಲ್ಲಿ ಅಮೆರಿಕ ಈ ಅಸ್ತ್ರವನ್ನು ಸನ್ನದ್ಧವಾಗಿರಿಸಿದೆ.




19 ಅಡಿ ಉದ್ದ ಮತ್ತು 21 ಇಂಚ್ ವ್ಯಾಸ, ಒಂದು ಬದಿ ಡೂಮ್ ಮತ್ತೊಂದು ಬದಿ ದೊಡ್ಡ ಸಿಗರೇಟ್ ಮಾದರಿಯಲ್ಲಿರುವ ಈ ಕ್ಷಿಪಣಿ ರೂಪದ ಸ್ಫೋಟಕ ಅಂದಾಜು 1700 ಕೇಜಿ ಭಾರ ಇರುತ್ತದೆ. ಇದನ್ನು ಸಮುದ್ರದಾಳದಲ್ಲಿ ಪ್ರಯೋಗಿಸಲು ಅನುವಾಗುವಂತೆ ಆವಿಷ್ಕರಿಸಲಾಗಿತ್ತು. ಜಲಾಂತರ್ಗಾಮಿ ಹಡಗಿನಲ್ಲಿ ಇದನ್ನು ಕೊಂಡೊಯ್ದು 15-20 ಕಿಮೀ ದೂರದಿಂದ ನಿಗದಿತ ಗುರಿಯೆಡೆಗೆ ಉಡಾಯಿಸಲಾಗುತ್ತದೆ. ನೀರಿನಡಿಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಈ ಅಸ್ತ್ರ ಮಿಸೈಲ್ ಮಾದರಿಯಲ್ಲೇ ಬಂದು ವಿರುದ್ಧ ದಿಕ್ಕಿನಲ್ಲಿರುವ ಹಡಗಿನೊಳಗೆ ನುಗ್ಗಿ ಅದನ್ನು ಸ್ಫೋಟಿಸುತ್ತದೆ. ಮಾರ್ಕ್ 48 ಸ್ಫೋಟದ ತೀವ್ರತೆ ಭೂಮಿಯ ಮೇಲ್ಭಾಗದಲ್ಲಿ 500 ಪೌಂಡ್ಸ್ ಟಿಎನ್ ಟಿ ಮಾದರಿಯ ಬಾಂಬ್ ಸ್ಫೋಟಕ್ಕೆ ಸಮವಾಗುತ್ತದೆ. ಎಷ್ಟೇ ಸಾಮರ್ಥ್ಯದ ಹಡಗಾಗಿದ್ದರೂ ಈ ಸ್ಫೋಟಕ್ಕೆ ಎರಡಾಗಿ ವಿಭಜನೆಗೊಂಡು ಒಮ್ಮೆಲೇ ನೀರಿನಲ್ಲಿ ಮುಳುಗುತ್ತದೆ. ಹೀಗಾಗಿ ಇದನ್ನು ಕ್ವಿಕ್ ಡೆತ್ ಎಂದು ಅಮೆರಿಕದ ರಕ್ಷಣಾ ಸಚಿವ ಹಗ್ಸೆತ್ ಬಣ್ಣಿಸಿದ್ದಾರೆ.
ಐರಿಸ್ ದೇನಾ ಹೆಸರಿನ ಇರಾನ್ ಹಡಗು ಭಾರತದ ವಿಶಾಖಪಟ್ಟಣದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿತ್ತು. ಅದರಲ್ಲಿ ಒಟ್ಟು 148 ಸಿಬಂದಿ ಇದ್ದರು. ಶ್ರೀಲಂಕಾದ ಗಾಲೆ ದ್ಪೀಪದಿಂದ 40 ಕಿಮೀ ದೂರದಲ್ಲಿ ಘಟನೆ ಸಂಭವಿಸಿದ್ದು, ಲಂಕಾ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿದ್ದ 32 ಮಂದಿಯನ್ನು ರಕ್ಷಣೆ ಮಾಡಿದೆ. 88 ಶವಗಳನ್ನು ಪತ್ತೆ ಮಾಡಿದ್ದರೆ, ಉಳಿದವರು ನಾಪತ್ತೆಯಾಗಿದ್ದರು. ಅಮೆರಿಕ ತನ್ನಿಂದ ಸಾವಿರಾರು ಕಿಮೀ ದೂರದ ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿಯ ದೌರ್ಜನ್ಯ ಎಸಗಿದ್ದು ವಿಶ್ವ ರಾಷ್ಟ್ರಗಳ ಖಂಡನೆಗೆ ಕಾರಣವಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಘಟನೆಯನ್ನು ತೀವ್ರ ಖಂಡಿಸಿದ್ದಲ್ಲದೆ, ಇದಕ್ಕಾಗಿ ಅಮೆರಿಕ ವಿಷಾದ ಪಡಬೇಕಾಗುತ್ತದೆ. ಅಂತಹ ದಿನ ಬಂದೇ ಬರುತ್ತದೆ. ಯಾಕಂದ್ರೆ, ಅಮೆರಿಕವು ಸಮುದ್ರದಲ್ಲಿ ಅಮಾನುಷ ರೀತಿಯ ದೌರ್ಜನ್ಯದ ಕೃತ್ಯ ಎಸಗಿದೆ ಎಂದಿದ್ದಾರೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm