ಬ್ರೇಕಿಂಗ್ ನ್ಯೂಸ್
12-03-23 03:23 pm Headline Karnataka Staffer ಕರ್ನಾಟಕ
ಬೆಂಗಳೂರು: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಬಳಿಕ ಮದ್ದೂರಿನ ಗೆಜ್ಜಲಗೆರೆಯಲ್ಲಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿಯವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊಗಳಿ ಕೊಂಡಾಡಿದರು.
ಪ್ರಧಾನಿಯವರಿಗೆ ವಿಶ್ವನಾಯಕರು ಅನ್ನುತ್ತೇವೆ. ಅದಕ್ಕೆ ಕಾರಣ, ಮಿತ್ರದೇಶದವರೆಲ್ಲರೂ ಅವರನ್ನು ನಾಯಕರನ್ನಾಗಿ ಒಪ್ಪಿದ್ದಾರೆ. ವಿರೋಧಿ ದೇಶಗಳೂ ಪ್ರಧಾನಿಯವರನ್ನು ನಾಯಕರೆಂದು ಒಪ್ಪಿದ್ದಾರೆ. ಪಾಕಿಸ್ತಾನ, ಚೀನಾದಲ್ಲೂ, ಅಮೇರಿಕಾದಲ್ಲೂ ಅತ್ಯಂತ ಬುದ್ಧಿವಂತ ನಾಯಕ, ಆಡಳಿತಗಾರ ಎಂದು ಹೊಗಳಿದ್ದಾರೆ. ಹೀಗಾಗಿ G20 ಯ ನಾಯಕತ್ವ ಭಾರತಕ್ಕೆ ಬರಲು ಪ್ರಧಾನಿ ಮೋದಿಯವರು ಕಾರಣ ಎಂದರು.
ಬಳಿಕ ಮಾತನಾಡಿದ ಅವರು, "ಬೆಂಗಳೂರು- ಮೈಸೂರು ವಾಹನ ದಟ್ಟಣೆ ಎಲ್ಲರಿಗೂ ಗೊತ್ತು. ಅನೇಕ ವರ್ಷಗಳ ಬೇಡಿಕೆ ಇದು. ನೈಸ್ ರಸ್ತೆ ಬರುತ್ತದೆಯೆಂದು ಇದನ್ನು ನಿಲ್ಲಿಸಿ ಬಿಟ್ಟಿದ್ದರು. 2014 ರಲ್ಲಿ ಪ್ರಧಾನಿ ಮೋದಿ ಬಂದ ಮೇಲೆ ಈ ಯೋಜನೆಗೆ ಚಾಲನೆ ಕೊಟ್ಟರು. ಡಿಪಿಆರ್ 2016 ರಲ್ಲಿ ಸಿದ್ಧವಾಯ್ತು. ನ್ಯಾಷನಲ್ ಹೈವೇ ಅಥಾರಿಟಿಗೆ ವರ್ಗ ಆಯ್ತು. ಹೆಚ್ಚುವರಿ ಹಣ ಬೇಕಾಗುತ್ತದೆ ಎಂದಾಗ, ಪ್ರಧಾನಿ ಮೋದಿಯವರು 4 ಸಾವಿರ ಕೋಟಿ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ಕೊಟ್ಟರು. 2019 ರಲ್ಲಿ ಕೆಲಸ ಪ್ರಾರಂಭ ಆಯಿತು. 2023 ರಲ್ಲಿ ಈ ಕೆಲಸ ಮುಗಿದಿದೆ. ಹೆದ್ದಾರಿಯ ಡಿಪಿಆರ್ ಮಾಡಿದ್ದಾಗಲೂ, ಈಗ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದೂ ಪ್ರಧಾನಿ ನರೇಂದ್ರ ಮೋದಿಯವರು ಎಂದು ಸಾರಿ ಸಾರಿ ಹೇಳಿದರು.
ಪಕ್ಕದ ಮನೆಯಲ್ಲಿ ಗಂಡು ಹಡೆದ್ರೆ ತಾನು ಪೇಡ ಕೊಟ್ಟೆ ಎಂಬ ಹಾಗೆ ಕೆಲವರು ಹೇಳಿಕೆ ಕೊಡುತ್ತಾರೆ ಎಂದು ವಿಪಕ್ಷಕ್ಕೆ ಟಾಂಗ್ ನೀಡಿದರು. ಇದು ನರೇಂದ್ರ ಮೋದಿಯವರು ಮಾಡುವ ಕೆಲಸದ ಗತಿ. ಅತಿ ವೇಗದ ಕೆಲಸ. ಡಬಲ್ ಇಂಜಿನ್ ಸರ್ಕಾರ ಇದ್ದಿದ್ದರಿಂದ ಈ ಕಾಮಗಾರಿಗೆ ವೇಗ ಸಿಕ್ಕಿ ಚಾಲನೆ ಆಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರದಿಂದಾದ ಕೆಲಸಗಳು:
ಎಲ್ಲರನ್ನೂ ಪರೀಕ್ಷೆ ಮಾಡಿದ್ದೀರಿ. ಬಿಜೆಪಿ ಕಳೆದ 4 ವರ್ಷ ಮಾಡಿರುವ ಕೆಲಸ ನೋಡಿ, ರಿಪೋರ್ಟ್ ಕಾರ್ಡ್ ನೋಡಿ ಎಂದರು. ಮಂಡ್ಯದ ಜನ ಮಾತು ಕೊಟ್ಟರೆ ತಪ್ಪುವುದಿಲ್ಲ. ಕಳೆದ ಮೂವತ್ತು ವರ್ಷ ನೀವು ಕೊಟ್ಟ ಅಧಿಕಾರದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಬಿಜೆಪಿಗೆ ಶಕ್ತಿಕೊಡಿ, ದೇಶದಲ್ಲೇ ನಂಬರ್ 1 ಜಿಲ್ಲೆ ಮಾಡಲಾಗುವುದು ಎಂದರು.
ಸಮಾವೇಶದಲ್ಲಿ ಪ್ರಧಾನಿ, ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಘಟ್ಕರಿ, ಕೇಂದ್ರ ಸಚಿವರು ಪ್ರಹ್ಲಾದ್ ಜೋಷಿ, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಸಚಿವರಾದ ಗೋಪಾಲಯ್ಯ, ನಾರಾಯಣಗೌಡ, ಸೋಮಶೇಖರ್ ಭಾಗಿಯಾಗಿದ್ದರು.
Mandya is India, will make Mandya No 1 says CM Bommai, Modi in Karnataka. Karnataka Chief Minister Basvaraj Bommai on Sunday said that even Pakistanis have claimed that they want a leader like Prime Minister Narendra Modi.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
03-07-25 10:50 pm
Mangalore Correspondent
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
Mangalore Police, Task Force: ಕೋಮು ಗಲಭೆ ನಿಗ್ರ...
03-07-25 10:50 am
03-07-25 11:03 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm
Massive Scam, Mangalore City Corporation, Fak...
02-07-25 12:24 pm