ಬ್ರೇಕಿಂಗ್ ನ್ಯೂಸ್
12-03-23 03:23 pm Headline Karnataka Staffer ಕರ್ನಾಟಕ
ಬೆಂಗಳೂರು: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಬಳಿಕ ಮದ್ದೂರಿನ ಗೆಜ್ಜಲಗೆರೆಯಲ್ಲಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿಯವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊಗಳಿ ಕೊಂಡಾಡಿದರು.
ಪ್ರಧಾನಿಯವರಿಗೆ ವಿಶ್ವನಾಯಕರು ಅನ್ನುತ್ತೇವೆ. ಅದಕ್ಕೆ ಕಾರಣ, ಮಿತ್ರದೇಶದವರೆಲ್ಲರೂ ಅವರನ್ನು ನಾಯಕರನ್ನಾಗಿ ಒಪ್ಪಿದ್ದಾರೆ. ವಿರೋಧಿ ದೇಶಗಳೂ ಪ್ರಧಾನಿಯವರನ್ನು ನಾಯಕರೆಂದು ಒಪ್ಪಿದ್ದಾರೆ. ಪಾಕಿಸ್ತಾನ, ಚೀನಾದಲ್ಲೂ, ಅಮೇರಿಕಾದಲ್ಲೂ ಅತ್ಯಂತ ಬುದ್ಧಿವಂತ ನಾಯಕ, ಆಡಳಿತಗಾರ ಎಂದು ಹೊಗಳಿದ್ದಾರೆ. ಹೀಗಾಗಿ G20 ಯ ನಾಯಕತ್ವ ಭಾರತಕ್ಕೆ ಬರಲು ಪ್ರಧಾನಿ ಮೋದಿಯವರು ಕಾರಣ ಎಂದರು.
ಬಳಿಕ ಮಾತನಾಡಿದ ಅವರು, "ಬೆಂಗಳೂರು- ಮೈಸೂರು ವಾಹನ ದಟ್ಟಣೆ ಎಲ್ಲರಿಗೂ ಗೊತ್ತು. ಅನೇಕ ವರ್ಷಗಳ ಬೇಡಿಕೆ ಇದು. ನೈಸ್ ರಸ್ತೆ ಬರುತ್ತದೆಯೆಂದು ಇದನ್ನು ನಿಲ್ಲಿಸಿ ಬಿಟ್ಟಿದ್ದರು. 2014 ರಲ್ಲಿ ಪ್ರಧಾನಿ ಮೋದಿ ಬಂದ ಮೇಲೆ ಈ ಯೋಜನೆಗೆ ಚಾಲನೆ ಕೊಟ್ಟರು. ಡಿಪಿಆರ್ 2016 ರಲ್ಲಿ ಸಿದ್ಧವಾಯ್ತು. ನ್ಯಾಷನಲ್ ಹೈವೇ ಅಥಾರಿಟಿಗೆ ವರ್ಗ ಆಯ್ತು. ಹೆಚ್ಚುವರಿ ಹಣ ಬೇಕಾಗುತ್ತದೆ ಎಂದಾಗ, ಪ್ರಧಾನಿ ಮೋದಿಯವರು 4 ಸಾವಿರ ಕೋಟಿ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ಕೊಟ್ಟರು. 2019 ರಲ್ಲಿ ಕೆಲಸ ಪ್ರಾರಂಭ ಆಯಿತು. 2023 ರಲ್ಲಿ ಈ ಕೆಲಸ ಮುಗಿದಿದೆ. ಹೆದ್ದಾರಿಯ ಡಿಪಿಆರ್ ಮಾಡಿದ್ದಾಗಲೂ, ಈಗ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದೂ ಪ್ರಧಾನಿ ನರೇಂದ್ರ ಮೋದಿಯವರು ಎಂದು ಸಾರಿ ಸಾರಿ ಹೇಳಿದರು.
ಪಕ್ಕದ ಮನೆಯಲ್ಲಿ ಗಂಡು ಹಡೆದ್ರೆ ತಾನು ಪೇಡ ಕೊಟ್ಟೆ ಎಂಬ ಹಾಗೆ ಕೆಲವರು ಹೇಳಿಕೆ ಕೊಡುತ್ತಾರೆ ಎಂದು ವಿಪಕ್ಷಕ್ಕೆ ಟಾಂಗ್ ನೀಡಿದರು. ಇದು ನರೇಂದ್ರ ಮೋದಿಯವರು ಮಾಡುವ ಕೆಲಸದ ಗತಿ. ಅತಿ ವೇಗದ ಕೆಲಸ. ಡಬಲ್ ಇಂಜಿನ್ ಸರ್ಕಾರ ಇದ್ದಿದ್ದರಿಂದ ಈ ಕಾಮಗಾರಿಗೆ ವೇಗ ಸಿಕ್ಕಿ ಚಾಲನೆ ಆಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರದಿಂದಾದ ಕೆಲಸಗಳು:
ಎಲ್ಲರನ್ನೂ ಪರೀಕ್ಷೆ ಮಾಡಿದ್ದೀರಿ. ಬಿಜೆಪಿ ಕಳೆದ 4 ವರ್ಷ ಮಾಡಿರುವ ಕೆಲಸ ನೋಡಿ, ರಿಪೋರ್ಟ್ ಕಾರ್ಡ್ ನೋಡಿ ಎಂದರು. ಮಂಡ್ಯದ ಜನ ಮಾತು ಕೊಟ್ಟರೆ ತಪ್ಪುವುದಿಲ್ಲ. ಕಳೆದ ಮೂವತ್ತು ವರ್ಷ ನೀವು ಕೊಟ್ಟ ಅಧಿಕಾರದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಬಿಜೆಪಿಗೆ ಶಕ್ತಿಕೊಡಿ, ದೇಶದಲ್ಲೇ ನಂಬರ್ 1 ಜಿಲ್ಲೆ ಮಾಡಲಾಗುವುದು ಎಂದರು.
ಸಮಾವೇಶದಲ್ಲಿ ಪ್ರಧಾನಿ, ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಘಟ್ಕರಿ, ಕೇಂದ್ರ ಸಚಿವರು ಪ್ರಹ್ಲಾದ್ ಜೋಷಿ, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಸಚಿವರಾದ ಗೋಪಾಲಯ್ಯ, ನಾರಾಯಣಗೌಡ, ಸೋಮಶೇಖರ್ ಭಾಗಿಯಾಗಿದ್ದರು.
Mandya is India, will make Mandya No 1 says CM Bommai, Modi in Karnataka. Karnataka Chief Minister Basvaraj Bommai on Sunday said that even Pakistanis have claimed that they want a leader like Prime Minister Narendra Modi.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 10:55 am
HK News Staffer
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm