ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳುಂ ; ಹುಕ್ಕೇರಿ ಉಪ ನೋಂದಣಾಧಿಕಾರಿ ಸೇರಿ ಒಂಬತ್ತು ಆರೋಪಿಗಳ ಬಂಧನ 

11-02-26 09:10 pm       HK News Desk   ಕ್ರೈಂ

ನಕಲಿ ದಾಖಲೆ ಸೃಷ್ಟಿಸಿ ಎರಡು ಕೋಟಿಗೂ ಅಧಿಕ ಬೆಲೆಯ ಜಮೀನು ಕಬಳಿಸಿದ ಆರೋಪದಲ್ಲಿ ಹುಕ್ಕೇರಿ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಳಗಾವಿ, ಫೆ.11 : ನಕಲಿ ದಾಖಲೆ ಸೃಷ್ಟಿಸಿ ಎರಡು ಕೋಟಿಗೂ ಅಧಿಕ ಬೆಲೆಯ ಜಮೀನು ಕಬಳಿಸಿದ ಆರೋಪದಲ್ಲಿ ಹುಕ್ಕೇರಿ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ, ಸಿಬ್ಬಂದಿ ಆನಂದ ಎಂ. ದಡ್ಡಿಮನಿ ಹಾಗೂ ಕುರಣಿ ಗ್ರಾಮದ ನಿವಾಸಿಗಳಾದ ರೇಣುಕಾ ಶಂಕರ ಮಾಳಿ, ಶಿವರುದ್ರ ಪ್ರಧಾನಿ ಕುದ್ನೂರಿ, ಕಾಶವ್ವ ಶಿವರುದ್ರ ಕುದ್ನೂರಿ, ನೀಲಕಂಠ ಶೆಟ್ಟೆಪ್ಪ ಮುದುಪಾಕಿ, ಸಿದ್ದಯ್ಯ ನಿರುಪಾದಯ್ಯ ಹಿರೇಮಠ, ವಿಜಯ ಶಿವಶಂಕರ ಮಠದ, ಅಶೋಕ ಸೂರ್ಯವಂಶಿ ಬಂಧಿತರು. 

ಇದೇ ಊರಿನ ಶಿವಾನಂದ ಮಾರುತಿ ಕುದ್ನೂರಿ ಎನ್ನುವವರು ಪ್ರಕರಣದಲ್ಲಿ ದೂರು ನೀಡಿದ್ದರು. ಆರೋಪಿಗಳು ತಂಡ ಮಾಡಿಕೊಂಡು ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಮಾಹಿತಿ ನೀಡಿದ್ದಾರೆ.

2025ರ ಮೇ ತಿಂಗಳಲ್ಲಿ ನಕಲಿ ಆಧಾರ್‌ ಕಾರ್ಡ್‌, ನಕಲು ಪಾನ್‌ಕಾರ್ಡ್‌ ಹಾಗೂ ಜಮೀನು ದಾಖಲೆಗಳನ್ನು ಸೃಷ್ಟಿಸಿದ್ದರು. ಕೊಳ್ಳುವವರು ಹಾಗೂ ಮಾರುವವರು ತಾವೇ ಎಂದು ಹೇಳಿಕೊಂಡು ಹುಕ್ಕೇರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವ್ಯವಹಾರ ಕುದುರಿಸಿದ್ದರು. ಜಮೀನಿನ ಮಾಲೀಕರ ಹೆಸರಲ್ಲಿ ನಕಲಿ ಆಧಾರ್‌ ಕಾರ್ಡ್ ಹಾಗೂ ಮತದಾರರ ಕಾರ್ಡ್‌ ಮಾಡಿ, ಅವರ ಭಾವಚಿತ್ರದ ಜಾಗದಲ್ಲಿ ಆರೋಪಿಯೊಬ್ಬನ ಭಾವಚಿತ್ರ ಅಂಟಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Belagavi police have arrested nine accused, including Hukkeri Sub-Registrar Madivallayya Basavaraj Banamath, for allegedly creating forged documents to illegally acquire land worth over ₹2 crore. The accused reportedly fabricated fake Aadhaar, PAN, and voter ID cards, posing as both buyers and sellers to register the property at the sub-registrar’s office.