Mangalore Robbery, Crime: ಕಳವಾರಿಗೆ ಮೆಹಂದಿ ಹೋಗಿದ್ದಾಗ ಮನೆಯಿಂದ 23 ಲಕ್ಷದ ಚಿನ್ನಾಭರಣ ಕಳವು ; ಸಂಬಂಧಿಕ ಮತ್ತು ಕದ್ದು ವಿದೇಶಕ್ಕೆ ಹೋಗಿದ್ದವ ಸೆರೆ, 27 ಲಕ್ಷದ ಬಂಗಾರ ಪೊಲೀಸ್ ವಶಕ್ಕೆ ! 

08-02-26 12:37 pm       Mangalore Correspondent   ಕ್ರೈಂ

ಕಳವಾರು ಚರ್ಚ್ ಬಳಿಯ ನಿವಾಸಿಯೊಬ್ಬರ ಮನೆಯಿಂದ ಸಂಬಂಧಿಕರೇ ಸೇರಿಕೊಂಡು 23 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದ್ದು ಪ್ರಕರಣದಲ್ಲಿ ತನಿಖೆ ನಡೆಸಿದ ಬಜ್ಪೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ‌

ಮಂಗಳೂರು, ಫೆ.8: ಕಳವಾರು ಚರ್ಚ್ ಬಳಿಯ ನಿವಾಸಿಯೊಬ್ಬರ ಮನೆಯಿಂದ ಸಂಬಂಧಿಕರೇ ಸೇರಿಕೊಂಡು 23 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದ್ದು ಪ್ರಕರಣದಲ್ಲಿ ತನಿಖೆ ನಡೆಸಿದ ಬಜ್ಪೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ‌

ಅಬ್ದುಲ್‌ ನಾಸರ್ ಅಲಿಯಾಸ್ ನಾಸಿರ್‌ ಅಲಿಯಾಸ್ ನಾಚಿ (31) ಹಾಗೂ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್‌ ಅಲಿಯಾಸ್ ಇಮ್ಮು (37) ಬಂಧಿತರು. 
2025ರ ಸೆ.23ರಂದು ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ಅವರು ತನ್ನ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋದಾಗ ರಾತ್ರಿ ಮನೆಯಲ್ಲಿದ್ದ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1,25,000/- ರೂಪಾಯಿ ನಗದು ಹಣ ಕಳ್ಳತನವಾಗಿತ್ತು. 

ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 176/2025 ಕಲಂ ಕಲಂ 331(3), 331(4), 305 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ. ತನಿಖೆ ನಡೆಸಿದ ಬಜಪೆ ಪೊಲೀಸರು ಆರೋಪಿ ನಾಸಿರ್ ಕಳ್ಳತನಗೈದು ಬಳಿಕ ವಿದೇಶಕ್ಕೆ ಪರಾರಿಯಾಗಿದ್ದನ್ನು ತಿಳಿದು ಲುಕೌಟ್‌ ನೊಟೀಸ್‌ ಹೊರಡಿಸಿ ಆತನನ್ನು ಬಂಧಿಸಿದ್ದಾರೆ. ಬಳಿಕ ಆತನ ವಿಚಾರಣೆ ನಡೆಸಿದ ವೇಳೆ ಮೊಹಮ್ಮದ್ ಷರೀಫ್ ಅವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತರಿಂದ 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/- ರೂಪಾಯಿ ನಗದು ಹಣ, ಸುಮಾರು 50,000/- ರೂಪಾಯಿ ಮೌಲ್ಯದ ಸ್ಕೂಟರ್ ವಶಕ್ಕೆ ಪಡೆಯಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

A case of gold theft worth ₹23 lakh has come to light from a house near Kalavaru Church, where relatives were allegedly involved in the crime. Bajpe police have arrested two accused in connection with the case and recovered gold ornaments worth ₹27 lakh. The arrested persons have been identified as Abdul Nasser alias Nasir alias Nachi (31) and Mayyaddi Imran alias Immu (37), a resident of Kalavaru.