ಬ್ರೇಕಿಂಗ್ ನ್ಯೂಸ್
25-01-26 10:11 pm HK staffer ಕ್ರೈಂ
ಬೆಂಗಳೂರು, ಜ.24: 400 ಕೋಟಿ ಮೌಲ್ಯದ ಅಮಾನ್ಯಗೊಂಡ 2000 ರೂ. ನೋಟುಗಳಿದ್ದ ಕಂಟೈನರ್ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಗುಜರಾತ್ ಮೂಲದ ಹವಾಲಾ ಏಜೆಂಟ್ ವಿರಾಟ್ ಗಾಂಧಿ ಸಹಿತ ಐದು ಮಂದಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ವಿಶೇಷ ತನಿಖಾ ತಂಡ ಜ.23 ರಂದು ತಡರಾತ್ರಿ ಮುಂಬೈನ ಡೊಂಬಿವಿಲಿಯಲ್ಲಿ ವಿರಾಟ್ ಗಾಂಧಿಯನ್ನು ಬಂಧಿಸಿದೆ. ಈತ ಅಹ್ಮದಾಬಾದ್ ಮೂಲದ ನಟೋರಿಯಸ್ ಹವಾಲಾ ಏಜಂಟ್ ಆಗಿದ್ದು ಮುಂಬೈನಲ್ಲಿ ನೆಲೆಸಿದ್ದ. ಜಯೇಶ್ ಕದಂ, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ಜನಾರ್ದನ್ ಧಾಯ್ಗುಡೆ ಇತರ ಬಂಧಿತರು. ಇವರೆಲ್ಲ ಮುಂಬೈ ನಿವಾಸಿಗಳಾಗಿದ್ದು ಸಂದೀಪ್ ಪಾಟೀಲ್ ನನ್ನು ಅಪಹರಿಸಿ ಕಿರುಕುಳ ನೀಡಿದವರು ಎನ್ನಲಾಗಿದೆ.
ಪ್ರಮುಖ ಆರೋಪಿಗಳು ಎನ್ನಲಾದ ಅಝರ್ ಮತ್ತು ಥಾಣೆಯ ದೊಡ್ಡ ಉದ್ಯಮಿ ಕಿಶೋರ್ ಸಾವ್ಲಾ ತಲೆಮರೆಸಿಕೊಂಡಿದ್ದಾರೆ. ವಿರಾಟ್ ಗಾಂಧಿ ಹವಾಲಾ ಆಪರೇಟರ್ ಆಗಿದ್ದಲ್ಲದೆ, ರಾಜಸ್ಥಾನ ಮೂಲದ ಧಾರ್ಮಿಕ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ನಾಶಿಕ್ ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಗೋವಾದಿಂದ ಕರ್ನಾಟಕದ ಒಂದು ಧಾರ್ಮಿಕ ಸಂಸ್ಥೆಗೆ ಎರಡು ಟ್ರಕ್ ಕಂಟೈನರ್ಗಳಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರದ್ದಾದ ಹಳೆಯ 2000 ರೂಪಾಯಿ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಈ ಕಂಟೈನರ್ಗಳು ಕರ್ನಾಟಕದ ಚೋರಲಾ ಘಾಟ್ನಲ್ಲಿ ಕಳ್ಳತನವಾಗಿದ್ದವು. ಹೀಗಾಗಿ ಬೆಳಗಾವಿ ಪೊಲೀಸರನ್ನೂ ತನಿಖೆಗೆ ಸೇರಿಸಿಕೊಳ್ಳಲಾಗಿದೆ.
In connection with the robbery of container trucks carrying invalidated ₹2000 currency notes worth nearly ₹400 crore, Maharashtra Police have arrested five persons, including a Gujarat-based hawala agent identified as Virat Gandhi.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am