ಬ್ರೇಕಿಂಗ್ ನ್ಯೂಸ್
23-12-20 02:49 pm Headline Karnataka News Network ಕ್ರೈಂ
ತಿರುವನಂತಪುರಂ, ಡಿ. 23: ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯವು ಡಿಸೆಂಬರ್ 23ರಂದು ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಪ್ರಮುಖ ಆರೋಪಿಗಳಾದ ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರೂ ತಪ್ಪಿತಸ್ಥರು ಎಂದು ಮಂಗಳವಾರದಂದು ತೀರ್ಪು ನೀಡಿದ್ದ ನ್ಯಾಯಾಲಯವು ಇಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರಿಗೂ ಐಪಿಸಿ ಸೆಕ್ಷನ್ 302 ಅಡಿಯಲ್ಲಿ 5 ಲಕ್ಷ ರು ವಿಧಿಸಲಾಗಿದೆ ಹಾಗೂ ಸೆಕ್ಷನ್ 449 ಐಪಿಸಿಯಡಿಯಲ್ಲಿ ಹೆಚ್ಚುವರಿ 1 ಲಕ್ಷ ರು ದಂಡ ಹಾಕಲಾಗಿದೆ.
ಐಪಿಸಿ ಸೆಕ್ಷನ್ 201 ಯಡಿಯಲ್ಲಿ 7 ವರ್ಷ ಶಿಕ್ಷೆ, 50,000ರು ದಂಡ ಹಾಕಲಾಗಿದೆ. ಪಾದ್ರಿ ಕೊಟ್ಟೂರ್ ಅವರು ಕ್ಯಾನ್ಸರ್ ಪೀಡಿತರಾಗಿದ್ದು, 71ವರ್ಷವಾಗಿದೆ. ಸೆಫಿ ಅವರು ವಯೋವೃದ್ಧ ತಂದೆ ತಾಯಿ ನೋಡಿಕೊಳ್ಳಬೇಕ, ಹೀಗಾಗಿ ಜೀವಾವಧಿ ಶಿಕ್ಷೆ ವಿಧಿಸಬೇಡಿ ಎಂದು ಅವರ ಪರ ವಕೀಲರು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

ಸಿಸ್ಟರ್ ಅಭಯಾ ಪಾಲಕರಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪಾದ್ರಿ ಥಾಮಸ್ ಹಾಗೂ ಸೆಫಿ ಅವರು ಐಪಿಸಿ ಸೆಕ್ಷನ್ 302, 449, 201 ಅಡಿಯಲ್ಲಿ ಎದುರಿಸುತ್ತಿರುವ ದೋಷಾರೋಪಣ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಜಡ್ಜ್ ಕೆ ಸನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಏನಿದು ಪ್ರಕರಣ?
ಕೆಥೋಲಿಕ್ ಚರ್ಚ್ ನಡೆಸುತ್ತಿದ್ದ ಕಾನ್ವೆಂಟ್ ನಲ್ಲಿ 1992ರ ಮಾರ್ಚ್ 27ರಂದು ಪ್ರಕರಣ ನಡೆದಿತ್ತು. ಕಾನ್ವೆಂಟಿನಲ್ಲಿ 22 ನನ್ ಗಳು ಸೇರಿದಂತೆ 123 ಮಂದಿ ವಿದ್ಯಾರ್ಥಿನಿಯರಿದ್ದರು. ಅದರಲ್ಲಿ ಅಭಯಾ ಎಂಬ 19 ವರ್ಷದ ಯುವತಿ ನನ್ ಆಗಿದ್ದುಕೊಂಡೇ ಪಿಯುಸಿ ಓದುತ್ತಿದ್ದ ಹೆಣ್ಮಗಳು. ಮಾರ್ಚ್ 27ರಂದು ಪರೀಕ್ಷೆ ಇದ್ದುದರಿಂದ ನಸುಕಿನ ಜಾವ ನಾಲ್ಕು ಗಂಟೆಗೆ ಹುಡುಗಿಯನ್ನು ಕಾನ್ವೆಂಟ್ ನೋಡಿಕೊಳ್ಳುತ್ತಿದ್ದ ಸಿಸ್ಟರ್ ಶೆರ್ಲೀ ಎಬ್ಬಿಸಿದ್ದರು. ಹೀಗಾಗಿ ಚಾಪೆಯಿಂದ ಎದ್ದು ಮುಖ ತೊಳೆದುಕೊಂಡು ನೀರು ಕುಡಿಯುವುದಕ್ಕೆಂದು ಅಭಯಾ ಕಿಚನ್ ರೂಮಿಗೆ ಹೋಗಿದ್ದಳು. ಆದರೆ, ಕಿಚನ್ ಹೋದ ಹುಡುಗಿಗೆ ಅಲ್ಲಿನ ದೃಶ್ಯ ನೋಡಿ ಶಾಕ್ ಆಗಿತ್ತು.
ಚರ್ಚಿನ ಇಬ್ಬರು ಫಾದರ್ ಗಳು ಒಬ್ಬಳು ಸಿಸ್ಟರ್ ಆಗಿದ್ದ ಯುವತಿಯ ಜೊತೆಗೆ ಕಾಮದಾಟದಲ್ಲಿ ತೊಡಗಿದ್ದರು. ಕೂಡಲೇ ಹುಡುಗಿ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಳು. ಆದರೆ, ಫಾದರ್ ಗಳಿಬ್ಬರು ಹುಡುಗಿಯ ಕುತ್ತಿಗೆ ಹಿಡಿದು ಅಮುಕಿದ್ದಾರೆ. ಸಿಸ್ಟರ್ ಸೆಫಿ, ಅಲ್ಲಿದ್ದ ಕತ್ತಿಯಿಂದ ಹೊಟ್ಟೆಗೆ ತಿವಿದಿದ್ದಾಳೆ. ಆನಂತರ ಮೂವರು ಸೇರಿ ಹುಡುಗಿಯನ್ನು ಜೀವಂತವಾಗೇ ಅಲ್ಲೇ ಹೊರಗಿದ್ದ ಬಾವಿಗೆ ಎಸೆದಿದ್ದಾರೆ. ಇದ್ಯಾವುದಕ್ಕೂ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದುದರಿಂದ ಆತ್ಮಹತ್ಯೆ ಎಂದೇ ಚರ್ಚ್ ಆಡಳಿತ ಬಿಂಬಿಸಿತ್ತು. ಆದರೆ, ಕಾನ್ವೆಂಟ್ ನೋಡಿಕೊಳ್ಳುತ್ತಿದ್ದ ಸಿಸ್ಟರ್, ಹುಡುಗಿಯ ದೇಹದಲ್ಲಿ ಇರಿತದ ಗಾಯಗಳಿದ್ದುದರಿಂದ ಇದು ಆತ್ಮಹತ್ಯೆ ಅಲ್ಲ, ಕೊಲೆಯೆಂದು ಪೊಲೀಸ್ ದೂರು ನೀಡಿದ್ದರು.
A special CBI court in Kerala capital Thiruvananthapuram today sentenced to life imprisonment a Catholic priest and a nun for the murder of Sister Abhaya, 28 years after the crime.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am