ಬ್ರೇಕಿಂಗ್ ನ್ಯೂಸ್
15-12-20 02:43 pm Bangalore Correspondent ಕ್ರೈಂ
ಬೆಂಗಳೂರು, ಡಿ.15: ದೇವರಿಗೆ ಕೈಮುಗಿಯುವ ನೆಪದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಯುವಕನೊಬ್ಬ ದೇವರ ವಿಗ್ರಹವನ್ನೇ ಹೊತ್ತೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕಜಾಲ ಠಾಣೆ ವ್ಯಾಪ್ತಿಯ ಹುಣಸೆಮಾರನಹಳ್ಳಿಯಲ್ಲಿ ಘಟನೆ ನಡೆದಿದ್ದು, ದೇವಸ್ಥಾನದಲ್ಲಿದ್ದ ಪ್ರಾಚೀನ ಪಂಚಲೋಹದ ವಿಗ್ರಹ ಕಳವಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಚೀನ ಪಂಚಲೋಹದ ವಿಗ್ರಹಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಇದ್ದು, ರೈಸ್ ಪುಲ್ಲಿಂಗ್ ಜಾಲದ ಖದೀಮರು ಇದನ್ನು ಕೋಟಿಗಟ್ಟಲೆ ದರಕ್ಕೆ ಮಾರುತ್ತಾರೆ. ಈ ಬಗ್ಗೆ ತಿಳಿದಿದ್ದ ರಘು ಎಂಬಾತ ಹುಣಸೆಮಾರನಹಳ್ಳಿಯ ಚಂದ್ರಮೌಳೇಶ್ವರನ ಮಠಕ್ಕೆ ಭಕ್ತನ ಸೋಗಿನಲ್ಲಿ ತೆರಳಿದ್ದ. ಮುಖ ಕಾಣದಂತೆ ಹೆಲ್ಮೆಟ್ ಧರಿಸಿಕೊಂಡೇ ಒಳಗೆ ನುಗ್ಗಿದ್ದ ಆರೋಪಿ, ಗರ್ಭಗುಡಿಗೆ ತೆರಳಿ ಅಲ್ಲಿಂದ ವಿಗ್ರಹವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಯಾರೂ ಇಲ್ಲದ ಸಂದರ್ಭ ಘಟನೆ ನಡೆದಿದ್ದು, ಸ್ಥಳೀಯರಿಗೆ ಗೊತ್ತಾಗದಂತೆ ಕೃತ್ಯ ನಡೆಸಿದ್ದ.
ನಾಲ್ಕು ಅಡಿ ಎತ್ತರದ ಚಂದ್ರಮೌಳೇಶ್ವರನ ವಿಗ್ರಹವಾಗಿದ್ದು, ಗರ್ಭಗುಡಿಯಿಂದ ಹೊರಗೊಯ್ದು ಬೈಕಿನಲ್ಲಿ ಪರಾರಿಯಾಗಿದ್ದ. ಹೀಗೆ ಎತ್ತಿಕೊಂಡು ಹೋಗುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳವು ಕೃತ್ಯದ ಬಗ್ಗೆ ತಿಳಿದ ಮಠದ ಗುರು ನಂಜೇಶ್ವರ ಸ್ವಾಮೀಜಿ ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಆಧರಿಸಿ, ಬೆನ್ನತ್ತಿದ ಪೊಲೀಸರು ಆರೋಪಿಯನ್ನು ವಿಗ್ರಹ ಸಹಿತ ಬಂಧಿಸಿದ್ದಾರೆ. ಆರೋಪಿ ರಘು ರೈಸ್ ಪುಲ್ಲಿಂಗ್ ಜಾಲದ ಖದೀಮರಿಗೆ ಮಾರಾಟ ಮಾಡಲು ಯೋಜನೆ ಹಾಕಿದ್ದ. ಹೀಗಿರುವಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪುರಾತನ ವಿಗ್ರಹಗಳಿಗೆ ನಿಗೂಢ ಶಕ್ತಿ ಇರುತ್ತದೆ. ಇದಕ್ಕೆ ವಿದೇಶದಲ್ಲಿ ಕೋಟ್ಯಂತರ ಬೆಲೆಬಾಳುತ್ತದೆ ಎಂದು ಶ್ರೀಮಂತರನ್ನು ನಂಬಿಸಿ, ಹಣ ಪಡೆಯುವ ಜಾಲ ಇದೆ. ಇದಕ್ಕಾಗೇ ಆರೋಪಿ ರಘು ವಿಗ್ರಹವನ್ನು ಕದ್ದು ಮಾರಾಟ ಮಾಡಲು ಯೋಜನೆ ರೂಪಿಸಿದ್ದ. ಆದರೆ, ಸಿಸಿಟಿವಿಯ ಜಾಲ ಆತನ ಕೃತ್ಯವನ್ನು ಬಯಲು ಮಾಡಿದೆ.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
19-06-25 10:08 pm
Mangalore Correspondent
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm