ಬ್ರೇಕಿಂಗ್ ನ್ಯೂಸ್
14-10-24 07:31 pm HK News Desk ಕ್ರೈಂ
ರಾಮನಗರ, ಅ 14: ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತವೆ ಎಂದು ಮಹಿಳೆಯೊಬ್ಬಳು ಪ್ರಿಯಕರನ ಜೊತೆಗೂಡಿ ವಾರದ ಅಂತರದಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೇ ಅಂತ್ಯಕ್ರಿಯೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಮಸಣದಲ್ಲಿ ಕಾವಲುಗಾರ ನೀಡಿದ ಸುಳಿವಿನ ಮೇರೆಗೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪತ್ತೆ ಹಚ್ಚಿದ ನಗರದ ಐಜೂರು ಠಾಣೆ ಪ್ರಭಾರ ಪಿಎಸ್ಐ ದುರಗಪ್ಪ ನೇತೃತ್ವದ ತಂಡವು ಮಕ್ಕಳ ಕೊಲೆ ರಹಸ್ಯ ಬೇಧಿಸಿ ಹಂತಕರನ್ನು ಬಂಧಿಸಿದ್ದಾರೆ.
ಎರಡು ವರ್ಷದ ಕಬೀಲ ಮತ್ತು 11 ತಿಂಗಳ ಕೂಸು ಕಬೀಲನ್ ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ಮಕ್ಕಳು. ಮಕ್ಕಳ ತಾಯಿ ಸ್ವೀಟಿ (24) ಹಾಗೂ ಆಕೆಯ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ (27) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸ್ವೀಟಿ ಬೆಂಗಳೂರಿನ ಬಿಬಿಎಂಪಿಯಲ್ಲಿ ಪೌರ ಕಾರ್ಮಿಕನಾಗಿರುವ ಟ್ಯಾನರಿ ರಸ್ತೆಯ ಎ.ಕೆ. ಕಾಲೊನಿಯ ಶಿವ ಎಂಬುವರನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದರು.
ಮನೆ ಕೆಲಸ ಮಾಡುತ್ತಿದ್ದ ಸ್ವೀಟಿ ಆರು ತಿಂಗಳಿಂದ ಕಾಲ್ ಸೆಂಟರ್ ಉದ್ಯೋಗಿ ಗ್ರೆಗೋರಿ ಫ್ರಾನ್ಸಿಸ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
ಸೆಪ್ಟೆಂಬರ್ 15ರಂದು ಪತಿ ಕೆಲಸಕ್ಕೆ ಹೋದಾಗ ಸ್ವೀಟಿ, ಮಕ್ಕಳನ್ನು ಕರೆದುಕೊಂಡು ಪ್ರಿಯಕರನೊಂದಿಗೆ ರಾಮನಗರಕ್ಕೆ ಬಂದಿದ್ದಳು. ಇಲ್ಲಿನ ಜಾಲಮಂಗಲ ರಸ್ತೆಯ ಮಂಜುನಾಥ ಬಡಾವಣೆಯಲ್ಲಿ ದಂಪತಿ ಎಂದು ಸುಳ್ಳು ಹೇಳಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದರು.
ಪತ್ನಿ ಮತ್ತು ಮಕ್ಕಳನ್ನು ಹುಡುಕಾಡಿದ್ದ ಶಿವ, ತನ್ನ ಪತ್ನಿ, ಮಕ್ಕಳು ಕಾಣೆಯಾಗಿದ್ದಾರೆ ಎಂದು ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆ.17ರಂದು ದೂರು ಕೊಟ್ಟಿದ್ದರು.
ಮಕ್ಕಳು ಅಡ್ಡಿಯಾಗುತ್ತಿವೆ ಎಂದು ಎರಡು ವರ್ಷದ ಕಬೀಲನನ್ನು ಅಕ್ಟೋಬರ್ 1ರಂದು ರಾತ್ರಿ ಹೊಡೆದು ಸಾಯಿಸಿದ್ದರು. ರಾಮನಗರದ ಎಪಿಎಂಸಿ ಬಳಿ ಮಸಣಕ್ಕೆ ಬೆಳಗ್ಗೆ ಶವ ತಂದಿದ್ದ ಜೋಡಿ, ಅನಾರೋಗ್ಯದಿಂದ ಮಗು ತೀರಿಕೊಂಡಿದೆ ಎಂದು ಕಾವಲುಗಾರನಿಗೆ ಸುಳ್ಳು ಹೇಳಿ ಅಂತ್ಯಕ್ರಿಯೆ ನಡೆಸಿದ್ದರು.
ಫೋಟೊ ತೆಗೆದಿದ್ದ ಕಾವಲುಗಾರ: ಅದಾದ ವಾರದ ಬಳಿಕ ಅ.7ರಂದು 11 ತಿಂಗಳ ಕೂಸು ಕಬೀಲನ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಶವವನ್ನು ಮತ್ತೇ ಅದೇ ಮಸಣಕ್ಕೆ ತಂದು ಮೊದಲ ಮಗುವನ್ನು ಹೂತಿದ್ದ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಿದ್ದರು.
ಈ ಬಾರಿ ‘ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಶಸ್ತ್ರಚಿಕಿತ್ಸೆ ಮಾಡಿಸಿದರೂ ಉಳಿಯಲಿಲ್ಲ’ ಎಂದು ಕಾವಲುಗಾರನಿಗೆ ಸುಳ್ಳು ಹೇಳಿದ್ದರು ಎಂದು ಪೊಲೀಸರು ತಿಳಿಸಿದರು.
ವಾರದ ಅಂತರದಲ್ಲಿಯೇ ಎರಡು ಮಕ್ಕಳು ಸಾವನ್ನಪ್ಪಿದ ಬಗ್ಗೆ ಅನುಮಾನಗೊಂಡಿದ್ದ ಮಸಣದ ಕಾವಲುಗಾರ ಮಗುವಿನ ಶವದ ಜೊತೆಗೆ ಆರೋಪಿಗಳ ಫೋಟೊವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ. ಅದನ್ನು ಪೊಲೀಸರಿಗೆ ಕಳಿಸಿ ಕೊಟ್ಟಿದ್ದ. ಈ ಸುಳಿವು ಆಧರಿಸಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ ಎಂದು ಮಕ್ಕಳನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಸೋಮವಾರ ಮಕ್ಕಳಿಬ್ಬರ ಶವವನ್ನು ಹೊರ ತೆಗೆದು ಪರೀಕ್ಷೆ ನಡೆಸಲಾಗುವುದು. ಸದ್ಯ ಆರೋಪಿಗಳಿಬ್ಬರು ಪೊಲೀಸ್ ವಶದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
Staff at a crematorium have helped the Ijoor police crack a double-murder case, which led to the arrest of a 25-year-old woman and her male friend on the charge of killing her two minor children in Ramanagara recently.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
ಆಸ್ತಿ ವಿಚಾರದಲ್ಲಿ ಗಲಾಟೆ ; ಬಾವನಿಗೆ ಕತ್ತಿಯೇಟು, ಅ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm