ಬ್ರೇಕಿಂಗ್ ನ್ಯೂಸ್
22-09-24 10:48 pm HK News Desk ಕ್ರೈಂ
ಕಾಸರಗೋಡು, ಸೆ.22: ಮನೆಯೊಂದರಲ್ಲಿ ಬಚ್ಚಿಡಲಾಗಿದ್ದ ಎಂಡಿಎಂಎ ಡ್ರಗ್ಸ್, ಕೊಕೇನ್ ಸೇರಿದಂತೆ ಸುಮಾರು ಮೂರು ಕೋಟಿ ಮೌಲ್ಯದ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಲಾಗಿದ್ದು, ಉಪ್ಪಳ ಪತ್ವಾಡಿ ನಿವಾಸಿ ಅಮೀರ್ ಎಂಬವರ ಪುತ್ರ ಅಸ್ಕರ್ ಆಲಿ(30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧಾರದಲ್ಲಿ ಮಂಜೇಶ್ವರ ತಾಲೂಕಿನ ಉಪ್ಪಳ ಕೊಂಡೆವೂರಿನ ಪತ್ವಾಡಿಯ ಎರಡು ಮಹಡಿಯ ಮನೆಯೊಂದಕ್ಕೆ ದಾಳಿ ನಡೆಸಿದ ಕಾಸರಗೋಡು ಪೊಲೀಸರು ಮನೆಯೊಳಗೆ ಇಡಲಾಗಿದ್ದ 3.4 ಕೇಜಿ ಎಂಡಿಎಂಎ, 96 ಗ್ರಾಮ್ ಕೊಕೇನ್, 640 ಗ್ರಾಮ್ ಗಾಂಜಾ, 30ರಷ್ಟು ಡ್ರಗ್ಸ್ ಮಾತ್ರೆಗಳನ್ನು ವಶಪಡಿಸಿದ್ದಾರೆ. ಬಂಧಿತ ಆರೋಪಿ ಅಸ್ಕರ್ ಆಲಿ ಬೆಂಗಳೂರಿನಿಂದ ಬೃಹತ್ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಕಾಸರಗೋಡಿಗೆ ತಂದು ಗ್ರಾಹಕರಿಗೆ ಪೂರೈಸಲು ಸಂಗ್ರಹಿಸಿಟ್ಟಿದ್ದ. ಪ್ರಕರಣದಲ್ಲಿ ಇನ್ನೂ ಅನೇಕ ಆರೋಪಿಗಳಿದ್ದು, ತನಿಖೆ ಮುಂದುವರಿಸಲಾಗಿದೆ.
ಆಗಸ್ಟ್ 30ರಂದು ಕೇರಳದ ಮೇಲ್ಪರಂಬದ ಕೈನೋತ್ ಎಂಬಲ್ಲಿ ಎಂಡಿಎಂಎ ಡ್ರಗ್ಸ್ ಜೊತೆಗೆ ಚಿಕ್ಕಮಗಳೂರು ಮೂಡಿಗೆರೆ ನಿವಾಸಿ ಅಬ್ದುಲ್ ರಹಮಾನ್ ಯಾನೆ ಬಿ.ಇ ರವಿ (28) ಎಂಬಾತನನ್ನು ಬಂಧಿಸಲಾಗಿತ್ತು. ಆತನ ಮಾಹಿತಿಯಂತೆ ಉಪ್ಪಳದ ಮನೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಸ್ಕರ್ ಆಲಿ ಮತ್ತು ಇತರರು ಈ ಮನೆಯನ್ನು ಡ್ರಗ್ಸ್ ಸಂಗ್ರಹಿಸಿಡುವುದಕ್ಕಾಗಿಯೇ ಬಳಕೆ ಮಾಡಿದ್ದರು. ಆ ಮನೆಗೆ ಕೆಲವೊಮ್ಮೆ ಮಾತ್ರ ಬಂದು ಹೋಗುತ್ತಿದ್ದು, ಉಳಿದಂತೆ ಅಲ್ಲಿ ಕುಟುಂಬಸ್ಥರು ವಾಸ ಇರಲಿಲ್ಲ. ಹೀಗಾಗಿ ಆಸುಪಾಸಿನ ಮನೆಯವರಲ್ಲಿ ಈ ಬಗ್ಗೆ ಕುತೂಹಲವೂ ಇತ್ತು. ಡ್ರಗ್ಸ್ ಪತ್ತೆಯಾಗಿದೆ ಎನ್ನುವ ಮಾಹಿತಿ ತಿಳಿದು ನೂರಾರು ಜನರು ಸ್ಥಳದಲ್ಲಿ ಸೇರಿದ್ದರು.
ಆರೋಪಿ ಅಸ್ಕರ್ ಆಲಿ ಕೆಲವು ವರ್ಷಗಳ ಹಿಂದೆ ಯುವಕರರೊಂದಿಗೆ ಸೇರಿ ಮನಿ ಚೈನ್ ಲಿಂಕ್ ಮಾಡಿದ್ದು ಅದರಲ್ಲಿ ಹಣ ಕಳಕೊಂಡಿದ್ದ. ಆನಂತರ, ಡ್ರಗ್ಸ್ ವಹಿವಾಟಿನಲ್ಲಿ ತೊಡಗಿಸಿದ್ದ ಎನ್ನಲಾಗುತ್ತಿದೆ. ಈತನ ತಂದೆ ಲಂಡನ್ ಮೂಲದ ಕಂಪನಿಯಲ್ಲಿ ಕೆಲಸಕ್ಕಿದ್ದರು. ಮೂರು ವರ್ಷಗಳ ಹಿಂದೆ ಅಸೌಖ್ಯದ ಕಾರಣಕ್ಕೆ ಊರಿಗೆ ಬಂದಿದ್ದರು. ಆನಂತರ, ಅಸ್ಕರ್ ಕಿರಿಯ ಸೋದರ ಅಲ್ಲಿಗೆ ತೆರಳಿದ್ದು ಉದ್ಯೋಗಕ್ಕೆ ಸೇರಿದ್ದ. ಅಸ್ಕರ್ ಆಲಿ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ವಹಿವಾಟು ನಡೆಸುತ್ತಿದ್ದು, ಹಲವರು ಈ ದಂಧೆಯಲ್ಲಿ ತೊಡಗಿರುವ ಸಾಧ್ಯತೆಯಿದೆ. ಆತನಿಗೆ ಸೇರಿದ ಮನೆ, ಬ್ಯಾಂಕ್ ಖಾತೆ, ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
A police team led by DYSP Manoj conducted a raid on a house in Uppala and seized narcotics worth approximately Rs 3.5 crore. The raid was carried out at a house near Patwadi in Uppala, where MDMA and other narcotics were recovered.The police have taken a man named Asgar Ali into custody in connection with the case.
11-05-26 09:36 pm
HK News Staffer
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
11-05-26 08:05 pm
HK News Staffer
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
11-05-26 04:58 pm
HK News Staffer
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm