ಬ್ರೇಕಿಂಗ್ ನ್ಯೂಸ್
21-09-24 10:24 pm Bangalore Correspondent ಕ್ರೈಂ
ಬೆಂಗಳೂರು, ಸೆ.21: ನಗರದ ವೈಯ್ಯಾಲಿ ಕಾವಲ್ ನ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಾಲಕ್ಷ್ಮೀ (26) ಎಂಬ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಳೆದ 19 ದಿನಗಳ ಹಿಂದೆಯೇ ಆಕೆಯನ್ನು ಹತ್ಯೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಂತಕರು ಆಕೆಯ ದೇಹವನ್ನು 30 ತುಂಡುಗಳಾಗಿ ಕತ್ತರಿಸಿ, ಆ ತುಂಡುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಹೋಗಿದ್ದಾರೆ. ಆಕೆಯ ದೇಹದ ತುಂಡುಗಳಿಂದ ಬಂದ ರಕ್ತ ಫ್ರಿಡ್ಜ್ ನಿಂದ ಸೋರಿಕೆಯಾಗಿ ಮನೆಯ ತುಂಬೆಲ್ಲಾ ಹರಡಿತ್ತು. ಶುಕ್ರವಾರದಂದು ಆಕೆಯಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಮೊದಮೊದಲಿಗೆ, ಯಾವುದೋ ಹೆಗ್ಗಣ ಸತ್ತಿರುವ ವಾಸನೆ ಇರಬಹುದು ಎಂದು ನೆರೆಯವರು ತಿಳಿದಿದ್ದರು.
ಆದರೆ, ದಿನಗಳೆದಂತೆ ವಾಸನೆ ಮಹಾಲಕ್ಷ್ಮಿಯಿದ್ದ ಮನೆಯಿಂದಲೇ ಬರುತ್ತಿದ್ದ ಕಾರಣಕ್ಕೆ ನೆರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಬಂದು ಪರಿಶೀಲಿಸಿ ಬಾಗಿಲು ಒಡೆದು ಹೋದಾಗ ಮನೆಯಲ್ಲಿ ಹರಡಿದ್ದ ರಕ್ತದಲ್ಲಿ ಅದಾಗಲೇ ಹುಳ ಬಿದ್ದಿದ್ದವು. ರಕ್ತ ಎಲ್ಲಿಂದ ಸೋರಿದೆ ಎಂದು ಪರಿಶೀಲಿಸಿದಾಗ ಆ ರಕ್ತ ಪೊಲೀಸರನ್ನು ಮನೆಯಲ್ಲಿದ್ದ ಫ್ರಿಡ್ಜ್ ಕಡೆಗೆ ಕರೆದೊಯ್ದಿದೆ. ಫ್ರಿಡ್ಜ್ ಬಾಗಿಲು ತೆಗೆದಾಗ ಪೊಲೀಸರು ಫ್ರಿಡ್ಜ್ ನಲ್ಲಿದ್ದ ಯುವತಿಯ ದೇಹದ 30 ಪೀಸ್ ಗಳನ್ನು ನೋಡಿ ದಂಗಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆಕೆ ನೇಪಾಳದವಳು ಎಂದು ಹೇಳಲಾಗಿದೆ. ಆಕೆಯು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿ ದಿನ ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಹೋದರೆ ರಾತ್ರಿ 9 ಗಂಟೆಗೆ ಮನೆಗೆ ಬರುತ್ತಿದ್ದಳು. ಒಮ್ಮೆ ಮನೆಯೊಳಗೆ ಹೋದರೆ ಪುನಃ ಆಕೆ ಹೊರಕ್ಕೆ ಬರುತ್ತಿದ್ದುದು ಮರುದಿನ ಡ್ಯುಟಿಗೆ ಹೋಗಬೇಕಾದಾಗ ಮಾತ್ರ ಎಂದು ನೆರೆಯವರು ಹೇಳಿದ್ದಾರೆ.
ಮತ್ತೊಂದು ಮೂಲದ ಪ್ರಕಾರ, ಆಕೆಯು ನೇಪಾಳದವಳಾಗಿದ್ದು ವಿವಾಹಿತೆಯಾಗಿದ್ದಳು. ದಂಪತಿಯಿಬ್ಬರೂ ಮುನೇಶ್ವರನಗರದಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಆಕೆ, ಹುಕುಂ ಸಿಂಗ್ ಎಂಬಾತನನ್ನು ಮದುವೆಯಾಗಿದ್ದಳು. ಆ ದಂಪತಿಗೊಂದು ಮಗುವೂ ಇದೆ. ಆದರೆ, ಆಕೆ ತನ್ನ ಪತಿ ಹಾಗೂ ಮಗುವನ್ನು ತೊರೆದಿದ್ದಳು. ಪತಿ ಹಾಗೂ ಮಗುವನ್ನು ತೊರೆದ ನಂತರ ಆಕೆ ವೈಯ್ಯಾಲಿ ಕಾವಲ್ ನಲ್ಲಿ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ.
In a shocking incident, a 26-year-old home-alone woman was murdered and her body parts cut into several pieces and stuffed in the fridge of the house she was living in at Vinayaka Nagar in Vyalikaval here on Saturday.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm