ಬ್ರೇಕಿಂಗ್ ನ್ಯೂಸ್
13-09-24 09:08 pm Mangalore Correspondent ಕ್ರೈಂ
ಬಂಟ್ವಾಳ, ಸೆ.13: ನಿವೃತ್ತ ಸೈನಿಕರೊಬ್ಬರು ಕಾರ್ಯ ನಿಮಿತ್ತ ಬ್ಯಾಂಕಿನಿಂದ ಹಣ ಡ್ರಾ ಮಾಡಿ ನಗದು ಇದ್ದ ಬ್ಯಾಗನ್ನು ಇರಿಸಿ ಪಾಸ್ ಬುಕ್ ಎಂಟ್ರಿ ಮಾಡುತ್ತಿದ್ದಾಗಲೇ 1.30 ಲಕ್ಷ ರೂ. ಇದ್ದ ಬ್ಯಾಗನ್ನು ಕಳ್ಳರು ಎಗರಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಈ ಬಗ್ಗೆ ಹಣ ಕಳಕೊಂಡ ಅಡ್ಯಾರ್ ನಿವಾಸಿ ಅಂಬ್ರೋಸ್ ಡಿ’ಸೋಜ( 72) ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಸೆ.4ರಂದು ಬೆಳಗ್ಗೆ 30,000 ನಗದು ಹಾಗೂ ರೂ. 20,000 ನಗದು ಹಣವಿದ್ದ ತನ್ನ ಪರ್ಸನ್ನು ಹ್ಯಾಂಡ್ ಬ್ಯಾಗ್ ನಲ್ಲಿರಿಸಿ ಮನೆಯಿಂದ ಹೊರಟಿದ್ದು, ಬಿ.ಸಿ ರೋಡ್ ನಲ್ಲಿ ಸದ್ರಿಯವರ ಖಾತೆಯಿರುವ ಬ್ಯಾಂಕ್ ಗೆ ತೆರಳಿ, ಬ್ಯಾಂಕ್ ನಿಂದ ರೂ. 80,000/- ಹಣವನ್ನು ಡ್ರಾ ಮಾಡಿದ್ದು, ಅದೇ ಹ್ಯಾಂಡ್ ಬ್ಯಾಗ್ ನಲ್ಲಿ ಇರಿಸಿದ್ದರು. ಬಳಿಕ ಸದ್ರಿ ಹ್ಯಾಂಡ್ ಬ್ಯಾಗ್ ಅನ್ನು ಬ್ಯಾಂಕಿನ ಟೇಬಲ್ ಮೇಲೆ ಇರಿಸಿ, ಪಾಸ್ ಬುಕ್ ಎಂಟ್ರಿ ಮಾಡಿಸಿ ಮರಳಿ ಹ್ಯಾಂಡ್ ಬ್ಯಾಗ್ ತೆಗೆದುಕೊಳ್ಳಲು ಬಂದಾಗ, ಅವರು ಇರಿಸಿದ್ದ ಸ್ಥಳದಲ್ಲಿ ಹ್ಯಾಂಡ್ ಬ್ಯಾಗ್ ಕಾಣದಾಗಿತ್ತು.
ಬ್ಯಾಂಕ್ ಕಚೇರಿಯ ಒಳಗಡೆ ಎಲ್ಲ ಕಡೆ ಹುಡುಕಾಡಿ ವಿಚಾರಿಸಿದ್ದು ಬ್ಯಾಗ್ ಸಿಕ್ಕಿರುವುದಿಲ್ಲ. ಅವರ ಬಾಬ್ತು ಹಣ ಇದ್ದ ಹ್ಯಾಂಡ್ ಬ್ಯಾಗ್ ಅನ್ನು ಯಾರಾದರೂ ಕೈ ತಪ್ಪಿನಿಂದ ಹಿಡಿದುಕೊಂಡು ಹೋಗಿರಬಹುದು, ಅದನ್ನು ಮರಳಿ ಕೊಡಬಹುದೆಂದು ಭಾವಿಸಿ ಮನೆಗೆ ಹಿಂತಿರುಗಿದ್ದರು. ಈ ನಡುವೆ ಹಣ, ಪಾಸ್ ಬುಕ್ ಹಾಗೂ ಇತರೆ ದಾಖಲೆಗಳಿದ್ದ ಹ್ಯಾಂಡ್ ಬ್ಯಾಗ್ ಬಿ.ಸಿ ರೋಡು ಕೈಕುಂಜೆಗೆ ಹೋಗುವ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಆದರೆ ಅದರಲ್ಲಿದ್ದ ನಗದು ಹಣ ಸಿಕ್ಕಿರುವುದಿಲ್ಲ. ಪಿರ್ಯಾದಿದಾರರ ಬಾಬ್ತು ಒಟ್ಟು ರೂ. 1,30,000/- ನಗದು ಹಣವಿದ್ದ ಹ್ಯಾಂಡ್ ಬ್ಯಾಗ್ ಅನ್ನು ಯಾರೋ ಕಳ್ಳರು ಕಳವು ಮಾಡಿದ್ದು ಅದರಲ್ಲಿದ್ದ ಹಣವನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Thieves flee with 1lakh 30 thousand bag from bank from customer at Bantwal in Mangalore.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm