ಬ್ರೇಕಿಂಗ್ ನ್ಯೂಸ್
18-11-20 07:36 pm Mangalore Correspondent ಕ್ರೈಂ
ಸುರತ್ಕಲ್, ನವೆಂಬರ್ 18: ವಿವಾಹಿತ ಮಹಿಳೆಯನ್ನು ಕೊಲೆಗೈದು ಹೂವಿನ ವ್ಯಾಪಾರಿಯ ಆತ್ಮಹತ್ಯೆ ಪ್ರಕರಣ ಸುರತ್ಕಲ್ ಭಾಗದಲ್ಲಿ ಜನರ ಕುತೂಹಲಕ್ಕೆ ಕಾರಣವಾಗಿದೆ.
ಎಂಆರ್ ಪಿಎಲ್ ನಲ್ಲಿ ಕೆಲಸಕ್ಕಿದ್ದು, ಕಾಟಿಪಳ್ಳದ ಬಾಳ ನಿವಾಸಿಯಾಗಿರುವ ಅಶೋಕ್ ಭಂಡಾರಿಯವರ ಪತ್ನಿ ರೇಖಾ ಭಂಡಾರಿ(39) ಕೊಲೆಯಾದ ಮಹಿಳೆ. ಸುರತ್ಕಲ್ ಪೇಟೆಯಲ್ಲಿ ಹೂವಿನ ವ್ಯಾಪಾರಿಯಾಗಿರುವ ವಸಂತ (42) ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ರೇಖಾ ಭಂಡಾರಿ ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದು, ತನ್ನ ಪಿಯುಸಿ ಓದುತ್ತಿದ್ದ ಮಗಳನ್ನು ಮನೆಗೆ ಬಿಟ್ಟು ಮರಳಿ ಪೇಟೆಗೆಂದು ಹೋಗಿದ್ದರು. ಆದರೆ, ಎಲ್ಲಿ ಹೋಗಿದ್ದಾರೆಂದು ಮನೆಯವರಿಗೆ ತಿಳಿದಿರಲಿಲ್ಲ. ನಿನ್ನೆ ರಾತ್ರಿ ಮನೆಗೆ ಬರದಿದ್ದರಿಂದ ಗಾಬರಿಯಾಗಿ ಇಂದು ಬೆಳಗ್ಗೆ ಪತಿ ಅಶೋಕ್ ಭಂಡಾರಿ ಸುರತ್ಕಲ್ ಠಾಣೆಗೆ ಬಂದು ಮಾಹಿತಿ ನೀಡಿದ್ದರು. ಇದೇ ವೇಳೆ, ಕುಳಾಯಿ ಬಳಿಯ ಮುಕ್ಕದ ಬಾಡಿಗೆ ಮನೆಯೊಂದರಲ್ಲಿ ಇಬ್ಬರ ಶವ ಪತ್ತೆಯಾದ ಬಗ್ಗೆ ಮಾಹಿತಿ ಬಂದಿತ್ತು. ಮನೆ ಮಾಲೀಕ ಭಾಸ್ಕರ ಸಾಲ್ಯಾನ್ ಮಾಹಿತಿ ನೀಡಿದ್ದು ಅಲ್ಲಿಗೆ ಅಶೋಕ್ ಭಂಡಾರಿಯವರ ಜೊತೆ ತೆರಳಿ ನೋಡಿದಾಗ ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು.
ಮುಂದಿನ ಬಾಗಿಲನ್ನು ಒಳಗಿಂದ ಹಾಕಿದ್ದು, ಹಿಂಬಾಗಿಲನ್ನೂ ಒಳಗಿಂದ ಲಾಕ್ ಮಾಡಲಾಗಿತ್ತು. ಬಾಗಿಲು ಒಡೆದು ನೋಡಿದಾಗ, ಚೂರಿಯಿಂದ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹದಿನೈದಕ್ಕೂ ಹೆಚ್ಚು ಬಾರಿ ಇರಿದು ಕೊಲೆಗೈದ ಸ್ಥಿತಿಯಲ್ಲಿ ರೇಖಾ ಭಂಡಾರಿಯ ಶವ ಇತ್ತು. ರೇಖಾಳ ಶವವನ್ನು ಹಿಂಬಾಗಿಲ ವರೆಗೂ ಎಳೆದೊಯ್ದ ರೀತಿ ರಕ್ತ ನೆಲದಲ್ಲಿ ಮೆತ್ತಿಕೊಂಡಿತ್ತು. ಬಳಿಕ ಒಳಗಿನ ಕೋಣೆಯಲ್ಲಿ ವಸಂತ ಪಕ್ಕಾಸಿಗೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಮೇಲ್ನೋಟಕ್ಕೆ ಇವರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದೆ. ಆದರೆ, ಅಶೋಕ್ ಭಂಡಾರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಸಂತ ಹತ್ತು ವರ್ಷಗಳಿಂದ ಪರಿಚಯ ಇದೆ. ತಿರುಪತಿ, ಮಂತ್ರಾಲಯ ಟೂರ್ ಹೋಗುತ್ತಿದ್ದಾಗ ವಸಂತನ ಕಾರಿನಲ್ಲೇ ಹೋಗುತ್ತಿದ್ದೆವು. ಹಾಗಾಗಿ ಪರಿಚಯ ಅಷ್ಟೇ.. ಆತನ ಜೊತೆ ಬೇರೆ ಯಾವುದೇ ಸಂಬಂಧ ಇಲ್ಲ ಎಂದು ಅಶೋಕ್ ಭಂಡಾರಿ ಪೊಲೀಸರಲ್ಲಿ ತಿಳಿಸಿದ್ದಾರೆ.
ವಸಂತ ಸುರತ್ಕಲ್ ನಲ್ಲಿ ಹೂವಿನ ವ್ಯಾಪಾರಿಯಾಗಿದ್ದು, ಜೊತೆಗೆ ಕಾರಿನಲ್ಲಿ ಡ್ರೈವರ್ ಆಗಿ ಹೋಗುತ್ತಿದ್ದ. ಬೇರೆಯವರ ಕಾರು ಪಡೆದು ಟೂರ್ ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ವಸಂತ ಮತ್ತು ರೇಖಾ ಕೆಲವೊಮ್ಮೆ ಆ ಮನೆಗೆ ಬರುತ್ತಿದ್ದರಂತೆ. ವಸಂತನಿಗೆ ಮದುವೆಯಾಗಿಲ್ಲ. ಇಬ್ಬರು ಸೋದರಿಯರಿದ್ದು, ತಾಯಿ ಇದ್ದಾರೆ. ಕುಳಾಯಿ ಬಳಿ ಸ್ವಂತ ಮನೆ ಇದ್ದರೂ, ಮುಕ್ಕದಲ್ಲಿ ಬಾಡಿಗೆ ಮನೆ ಹೊಂದಿದ್ದ. ಬಾಡಿಗೆ ಮನೆಗೆ ವಸಂತ, ಯಾಕಾಗಿ ಇಟ್ಟುಕೊಂಡಿದ್ದ ಎನ್ನೋದು ಗೊತ್ತಿಲ್ಲ. ಬೇರೆ ಹುಡುಗಿಯರನ್ನೂ ಅಲ್ಲಿಗೆ ಕರೆದೊಯ್ಯುತ್ತಿದ್ದನೇ ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ ವಿವಾಹಿತ ಮಹಿಳೆ ಮತ್ತು ವಸಂತನ ಶವ ಒಂದೇ ಮನೆಯಲ್ಲಿ ಸಿಕ್ಕಿರುವುದರಿಂದ ಇಬ್ಬರ ನಡುವೆ ಸಂಬಂಧ ಇತ್ತೇ ಎನ್ನುವ ಅನುಮಾನ ಬಂದಿದೆ. ಆದರೆ, ಇವರ ನಡುವೆ ವೈಮನಸ್ಸು ಯಾಕಾಯ್ತು? ಯಾಕಾಗಿ ಕೊಲೆ ನಡೆಸಿದ್ದಾನೆ ಎನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Detailed Murder Report by Headline Karnataka, In a shocking incident reported from Mukka here on Wednesday, November 18, a man killed a housewife to whom he was acquainted with and later committed suicide by hanging. It is suspected that the incident took place at about 3 pm on Tuesday, November 17. The deceased have been identified as Vasanth Kumar (36) and Rekha (42).
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
01-02-26 07:52 pm
Mangalore Correspondent
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
01-02-26 03:41 pm
HK News Staffer
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm