ಬ್ರೇಕಿಂಗ್ ನ್ಯೂಸ್
13-09-22 12:59 pm Mangalore Correspondent ಕ್ರೈಂ
ಪುತ್ತೂರು, ಸೆ.13: 8800 ರೂಪಾಯಿ ಮೌಲ್ಯದ ಮೊಬೈಲ್ ಪಾರ್ಸೆಲ್ ಇದೆಯೆಂದು ಹೇಳಿ ವ್ಯಕ್ತಿಯೊಬ್ಬರಿದೆ ಫುಡ್ ಪ್ಯಾಕೆಟ್ ಪಾರ್ಸೆಲ್ ಕಳುಹಿಸಿ ಮೋಸಗೈದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗೆ ಕುಟುಂಬಸ್ಥರಿಗೆಂದು ಮೂರು ವಿವೋ ಮೊಬೈಲ್ ಖರೀದಿಸಿದ್ದರು. ಆನಂತರ, ವ್ಯಕ್ತಿಯೊಬ್ಬ ಫೋನ್ ಮಾಡಿ ತನ್ನನ್ನು ವಿವೋ ಕಂಪನಿಯ ಪ್ರತಿನಿಧಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ನೀವು ಮೂರು ವಿವೋ ಮೊಬೈಲ್ ಖರೀದಿಸಿದ್ದರಿಂದ ಲಕ್ಕಿ ವಿನ್ನರ್ ಆಗಿದ್ದೀರಿ, ಕಂಪನಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದೇವೆ ಎಂದು ತಿಳಿಸಿದ್ದ.
8800 ರೂಪಾಯಿ ಮೌಲ್ಯದ ಮೊಬೈಲನ್ನು ಕೇವಲ 1785 ರೂ.ಗೆ ನೀಡುತ್ತಿದ್ದೇವೆ. ಇದು ಕಂಪನಿ ಕಡೆಯಿಂದ ಆಫರ್ ಎಂದು ಹೇಳಿದ್ದ. ಇದನ್ನು ಸಹಜವಾಗಿಯೇ ನಂಬಿದ್ದ ಭವಾನಿಶಂಕರ್, ಪೋಸ್ಟ್ ಮೂಲಕ ಬರುವ ಪಾರ್ಸೆಲನ್ನು ನಂಬಿದ್ದ. ಕೆಲವು ದಿನಗಳಲ್ಲಿ ಪೋಸ್ಟ್ ಮೂಲಕ ಪಾರ್ಸೆಲ್ ಬಂದಿದ್ದು, 1785 ರೂಪಾಯಿ ಚಾರ್ಜ್ ಕೊಟ್ಟು ಪಡೆದಾಗ, ಅದರಲ್ಲಿ ಫುಡ್ ಪ್ಯಾಕೆಟ್ ಮಾತ್ರ ಇತ್ತು. ಮೊಬೈಲ್ ಇರಲಿಲ್ಲ. ಹಣ ಕೊಟ್ಟು ಮೋಸ ಹೋಗಿದ್ದರು.
ವಿವೋ ಮೊಬೈಲ್ ಪಡೆದಿರುವುದನ್ನು ತಿಳಿದ ಕಂಪನಿ ಕಡೆಯವರೇ ಈ ರೀತಿ ಮೋಸ ಮಾಡಿದ್ದಾರೆಯೇ ಅಥವಾ ಮೊಬೈಲ್ ಖರೀದಿಯ ಮಾಹಿತಿ ಲೀಕ್ ಆಗಿ ಸೈಬರ್ ವಂಚಕರು ಮೋಸ ಎಸಗಿದ್ದಾರೆಯೇ ಎನ್ನುವ ಶಂಕೆ ಮೂಡಿದೆ. ಬೆಂಗಳೂರಿನ ಆಕಾಂಕ್ಷ ಮಾರ್ಕೆಟಿಂಗ್ ಕಂಪನಿ ಹೆಸರಲ್ಲಿ ಕರೆ ಬಂದಿತ್ತು ಎನ್ನಲಾಗುತ್ತಿದೆ.
A man got stale food packet in parcel against the promised mobile phone worth Rs 8,800 at Uppinangady near here. Bhavani Shankar, who works as security guard in a temple in Uppinangady had recently purchase three VIVO mobile phones for his family members.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 02:08 pm
HK News Staffer
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
12-08-26 07:47 pm
HK News Staffer
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm