ಬ್ರೇಕಿಂಗ್ ನ್ಯೂಸ್
20-08-22 10:26 pm HK News Desk ಕ್ರೈಂ
ಉಡುಪಿ, ಆಗಸ್ಟ್ 20: ಮಹಿಳೆಯೊಬ್ಬರು ಆನ್ಲೈನ್ ಗಿಫ್ಟ್ ಆಸೆಗೆ ಬಿದ್ದು ಬರೋಬ್ಬರಿ 15 ಲಕ್ಷ ರೂಪಾಯಿ ಕಳಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೂರ್ಣಿಮಾ ಎಂಬ ಮಹಿಳೆ ಮೋಸಕ್ಕೊಳಗಾದವರು. ಅವರಿಗೆ ಕಳೆದ ಮೇ ತಿಂಗಳಲ್ಲಿ ನ್ಯಾಪ್ಟಾಲ್ ಹೆಸರಲ್ಲಿ ಅಂಚೆ ಲಕೋಟೆ ಬಂದಿತ್ತು. ಅದರಲ್ಲಿ ತಾವು 14.8 ಲಕ್ಷ ರೂ. ಕೂಪನ್ ಬಹುಮಾನ ಗೆದ್ದಿರುವುದಾಗಿ ಹೇಳಿದ್ದರು. ಅಲ್ಲದೆ, ಅದರಲ್ಲೊಂದು ಮೊಬೈಲ್ ನಂಬರ್ ಕೊಟ್ಟಿದ್ದು, ಅದಕ್ಕೆ ಸಂಪರ್ಕಿಸಿದಾಗ ಆನಂದ್ ಎಂದು ತನ್ನನ್ನು ಗುರುತಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ. ಬಹುಮಾನದ ಹಣ ಪಡೆಯಬೇಕಿದ್ದರೆ, ಕೆಲವೊಂದು ಸರ್ವಿಸ್ ಚಾರ್ಜ್ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅದರಂತೆ, ಸರ್ವಿಸ್ ಚಾರ್ಜ್ ಹೆಸರಲ್ಲಿ ಪೂರ್ಣಿಮಾ ಅವರು ಹಣವನ್ನು ಕೊಡುತ್ತಾ ಹೋಗಿದ್ದು, ಮೇ 20ರಿಂದ ಆಗಸ್ಟ್ 12ರ ವರೆಗೆ ಬರೋಬ್ಬರಿ 15.33 ಲಕ್ಷ ರೂಪಾಯಿ ಕಳಕೊಂಡಿದ್ದಾರೆ. ಸರ್ವಿಸ್ ಚಾರ್ಜ್, ಎನ್ಓಸಿ, ಎಲ್ ಓಸಿ, ಸರ್ಚಾರ್ಜ್, ಸೆಕ್ಯುರಿಟಿ ಡಿಪಾಸಿಟ್, ಜಿಎಸ್ಟಿ, ಸೆಂಟ್ರಲ್ ಟ್ಯಾಕ್ಸ್ ಎಂದು ಬೇರೆ ಬೇರೆ ರೀತಿಯಲ್ಲಿ ಚಾರ್ಜ್ ಅನ್ನುವ ಹೆಸರಲ್ಲಿ ಹಣವನ್ನು ಪಡೆದಿದ್ದು, ಇಷ್ಟು ಕಟ್ಟಿದ ಬಳಿಕ ಮುಂದಿನದನ್ನು ಕಟ್ಟದೇ ಹೋದರೆ ಕೊಟ್ಟಿದ್ದೂ ಹೋಗುತ್ತದೆ ಎಂಬ ಭಯದಲ್ಲಿ ಹಣ ನೀಡುತ್ತಾ ಹೋಗಿದ್ದಾರೆ.
ಮೂರು ತಿಂಗಳಲ್ಲಿ ಹಣ ಕೊಟ್ಟು ಮೋಸ ಹೋದ ಮಹಿಳೆಗೆ ಕೊನೆಗೂ ಜ್ಞಾನೋದಯವಾಗಿದ್ದು, ಆನ್ಲೈನ್ ಮೋಸಕ್ಕೆ ಬಿದ್ದು ಹಣ ಕಳಕೊಂಡ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
.
A woman was conned of lacs of rupees in a case of online fraud. Poornima received a scratch and win coupon reportedly from Naptol company through post. It was mentioned in the coupon that she has won Rs 14.8 lac. When Poornima contacted the mobile number on the coupon, a person who introduced himself as Anand made her believe in the deal.
12-08-26 06:06 pm
HK Staffer
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 02:08 pm
HK News Staffer
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm