ಬ್ರೇಕಿಂಗ್ ನ್ಯೂಸ್
10-06-22 08:52 pm Mangalore Correspondent ಕ್ರೈಂ
ಮಂಗಳೂರು, ಜೂನ್ 10: ಷೇರು ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದರೆ, ಕೆಲವೇ ದಿನಗಳಲ್ಲಿ ಡಬಲ್ ಆಗುತ್ತದೆ, ಗರಿಷ್ಠ ಲಾಭ ಬರುತ್ತದೆಯೆಂದು ಹೇಳಿ ಮಹಿಳೆ ಮತ್ತು ಆಕೆಯ ಮಗಳನ್ನು ಯಾಮಾರಿಸಿ 45 ಲಕ್ಷದ 50 ಸಾವಿರ ರೂಪಾಯಿ ಪೀಕಿಸಿದ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರೀನ್ ವಿಲ್ ವಾಸ್, ಲಾವಣ್ಯ, ಲಾಯ್ಡ್ ಮಾರ್ಟಿಸ್, ಫ್ಲೋರಾ ಮಾರ್ಟಿಸ್, ರೊನಾಲ್ಡ್ ಮತ್ತು ಮೆಲಿಸಾ ಪಿರೇರಾ ವಂಚನೆ ಎಸಗಿದ ಆರೋಪಿಗಳು ಎಂಬುದಾಗಿ ತಾಯಿ, ಮಗಳು ದೂರಿನಲ್ಲಿ ತಿಳಿಸಿದ್ದಾರೆ. ಮದುವೆ ಸಮಾರಂಭ ಒಂದರಲ್ಲಿ ಮೆಲಿಸಾ ಪಿರೇರಾ ಮತ್ತು ಲಾಯ್ಡ್ ಭೇಟಿಯಾಗಿದ್ದು, ಅದೇ ಸಂದರ್ಭದಲ್ಲಿ ಗ್ರೀನ್ ವಿಲ್ ವಾಸ್ ನನ್ನು ಪರಿಚಯ ಮಾಡಿಸಿದ್ದರು.
ಗ್ರೀನ್ ವಿಲ್ ಮುಂಬೈ ನಗರದ ಮೀರಾ ರೋಡ್ ನಲ್ಲಿ ಗೋಲ್ಡ್ ಹಿಲ್ ಸ್ಟಾಕ್ ಟ್ರೇಡಿಂಗ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾರೆ. ಅಲ್ಲದೆ, ಸದ್ಯದಲ್ಲೇ ಗೋಲ್ಡ್ ಹಿಲ್ ಸ್ಟಾಕ್ ಎಕ್ಸ್ ಚೇಂಜ್ ಕಚೇರಿ ಮಂಗಳೂರಿನಲ್ಲಿ ಆರಂಭವಾಗಲಿದ್ದು ಅದರ ಸಂಪೂರ್ಣ ಹೊಣೆಯನ್ನು ಲಾಯ್ಡ್ ಮಾರ್ಟಿಸ್ ಅವರಿಗೆ ವಹಿಸುವುದಾಗಿ ತಿಳಿಸಿದ್ದಾರೆ.
ಗ್ರೀನ್ ವಿಲ್ ಮತ್ತು ಲಾಯ್ಡ್ ಸೇರಿಕೊಂಡು ಗೋಲ್ಡ್ ಹಿಲ್ ಬಗ್ಗೆ ವಿವರಣೆ ನೀಡಿದ್ದು, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಕೇವಲ 37 ದಿನಗಳಲ್ಲಿ 30 ಶೇಕಡಾ ಹಣ ಬಡ್ಡಿ ರೂಪದಲ್ಲಿ ತಿರುಗಿ ಬರುತ್ತದೆ ಎಂದು ಹೇಳಿದ್ದಾರೆ. ಅದರಂತೆ, ಬಣ್ಣನೆಯ ಮಾತುಗಳನ್ನು ನಂಬಿದ ಮಹಿಳೆಯ ಪುತ್ರಿ ತಾನು ದುಡಿದು ಕೂಡಿಟ್ಟಿದ್ದ 45,50,000 ರೂಪಾಯಿ ಹಣವನ್ನು 2020ರಲ್ಲಿ ವಿವಿಧ ಸಂದರ್ಭಗಳಲ್ಲಿ ಗೋಲ್ಡ್ ಹಿಲ್ ಹೆಸರಲ್ಲಿ ಹೂಡಿಕೆ ಮಾಡಿದ್ದಾರೆ.
ಗ್ರೀನ್ ವಿಲ್ ವಾಸ್ ಮತ್ತು ಲಾಯ್ಡ್ ಮಾರ್ಟಿಸ್ ಅವರು ಸೂಚಿಸಿದ ಬ್ಯಾಂಕು ಖಾತೆಗಳಿಗೆ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆನಂತರ ಯಾವುದೇ ಬಡ್ಡಿ ಹಣವನ್ನು ನೀಡಲಿಲ್ಲ. ಬಡ್ಡಿ ಬದಲು ಅಸಲನ್ನಾದರೂ ಕೊಡಿ ಎಂದು ದುಂಬಾಲು ಬಿದ್ದರೂ, ಹಣವನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ. ಇವರ ಮೋಸದ ಜಾಲದಲ್ಲಿ ಮಾರ್ಟಿಸ್ ಮತ್ತು ಫ್ಲೋರಾ ಸಹಕಾರ ನೀಡಿದ್ದು, ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ದೂರು ದಾಖಲಿಸಿದ್ದರೂ, ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಿಲ್ಲ.
A 57-year-old woman has filed a police complaint against six persons for cheating her and her daughter of Rs 45,50,000 by asking them to invest in the name of Stock Trading Goldhil. The accused are Grenville Vas, Lavanya, Lloyd Martiz, Flora Martiz, Ronald and Melissa Pereira.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm