ಬ್ರೇಕಿಂಗ್ ನ್ಯೂಸ್
09-06-22 02:15 pm HK News Desk ಕ್ರೈಂ
ಹೈದರಾಬಾದ್, ಜೂನ್ 9: 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದ ಶಾಸಕನ ಮಗ ಸೇರಿದಂತೆ ಪ್ರಭಾವಿ ರಾಜಕೀಯ ನಾಯಕರ ಆರು ಮಂದಿ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪೈಕಿ ನಾಲ್ವರು 18 ವರ್ಷದ ಒಳಗಿನವರಾಗಿದ್ದು ಆರೋಪಿಗಳು ಅಪ್ರಾಪ್ತರು ಅನ್ನುವ ಕಾರಣಕ್ಕೆ ಕಾನೂನು ಕುಣಿಕೆಯಿಂದ ಬಚಾವ್ ಆಗದಂತೆ ನೋಡಿಕೊಳ್ಳಲು ಪೊಲೀಸರು ಜುವೆನಿಲ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಆರೋಪಿಗಳ ಬಗ್ಗೆ ಕರುಣೆ ತೋರಬಾರದು, 18ರ ಆಸುಪಾಸಿನಲ್ಲಿರುವ ಯುವಕರನ್ನು ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ.
ಓಮರ್ ಖಾನ್ ಮತ್ತು ಅಸಾದುದ್ದೀನ್ ಮಲಿಕ್ ಇಬ್ಬರು ಪ್ರಬುದ್ಧರಾಗಿದ್ದು, ಇಬ್ಬರು ಕೂಡ ಪ್ರಭಾವಿ ರಾಜಕೀಯ ಸಂಪರ್ಕ ಇದ್ದವರು. ಅಪ್ರಾಪ್ತರೆಂದು ಗುರುತಿಸಲ್ಪಟ್ಟ ನಾಲ್ವರಲ್ಲಿ ಒಬ್ಬಾತ ಟಿಆರ್ ಎಸ್ ಪಕ್ಷದ ರಾಜಕಾರಣಿಯ ಮಗ. ಇನ್ನೊಬ್ಬ ಹೈದ್ರಾಬಾದ್ ನಗರ ಪಾಲಿಕೆಯ ಕಾರ್ಪೋರೇಟರ್ ಪುತ್ರ, ಮತ್ತೊಬ್ಬ ಸಂಗಾರೆಡ್ಡಿಯ ಕಾರ್ಪೊರೇಟರ್ ಮಗ. ಇನ್ನೊಬ್ಬ ಎಐಎಂಐಎಂ ಪಕ್ಷದ ಶಾಸಕನ ಮಗನಾಗಿದ್ದು, ಆತನಿಗೆ ಆಧಾರ್ ಕಾರ್ಡ್ ಪ್ರಕಾರ ಜುಲೈ 7ಕ್ಕೆ 18 ತುಂಬುತ್ತದೆ. ಎಲ್ಲರನ್ನೂ ಬಂಧಿಸಿ ಸದ್ಯ ರಿಮ್ಯಾಂಡ್ ಹೋಮಲ್ಲಿ ಇರಿಸಲಾಗಿದೆ. ಹುಡುಗಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಇವರದ್ದು ಗಂಭೀರ ಅಪರಾಧವಾಗಿದ್ದು, ಆರೋಪಿಗಳಿಗೆ ಅಪ್ರಾಪ್ತರು ಅನ್ನುವ ಕಾರಣಕ್ಕೆ ದಯೆ ನೀಡಬಾರದು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಮೇ 28ರಂದು 17 ವರ್ಷದ ಯುವತಿ ಪಬ್ ಒಂದಕ್ಕೆ ಪಾರ್ಟಿಗೆ ಹೋಗಿದ್ದು, ಅಲ್ಲಿ ಪರಿಚಿತರಾಗಿದ್ದ ಯುವಕರು ಕಾರಿನಲ್ಲಿ ಮನೆಗೆ ಬಿಡುತ್ತೇವೆಂದು ಹೇಳಿ ಸಂಜೆ 6 ಗಂಟೆಗೆ ಕರೆದೊಯ್ದಿದ್ದರು. ಆನಂತರ, ಬೇರೆ ದಾರಿ ಮೂಲಕ ಕರೆದೊಯ್ದು ಅಲ್ಲಿಂದ ಬಂಜಾರ ಹಿಲ್ಸ್ ಪ್ರದೇಶಕ್ಕೆ ಒಯ್ದು ಕಾರ್ ಪಾರ್ಕ್ ಮಾಡಿ ಅತ್ಯಾಚಾರ ಎಸಗಿದ್ದರು. ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ಸರಕಾರಿ ನೋಂದಣಿ ಹೊಂದಿದ್ದು, ವಕ್ಫ್ ಬೋರ್ಡ್ ಆಡಳಿತಕ್ಕೆ ಸೇರಿದ್ದಾಗಿತ್ತು. ಇನ್ನೊಂದು ಮರ್ಸಿಡಿಸ್ ಬೆಂಜ್ ಕಾರು ಶಾಸಕರ ಹೆಸರಲ್ಲಿ ನೋಂದಣಿಯಾಗಿತ್ತು. ಪಬ್ ಪಾರ್ಟಿಯಿಂದ ಬೆಂಜ್ ಕಾರಿನಲ್ಲಿ ಕರೆದೊಯ್ದು ಬಳಿಕ ಇತರೇ ಯುವಕರು ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿದ್ದರು. ಕೃತ್ಯ ನಡೆಸಿದ ಬಳಿಕ ಯುವತಿಯನ್ನು ಪಬ್ ನಡೆಯುತ್ತಿದ್ದ ಜಾಗಕ್ಕೇ ಕರೆದೊಯ್ದು ಬಿಟ್ಟಿದ್ದರು.
Hyderabad police on Thursday began questioning the only major accused in Jubilee Hills gang rape case after taking him into custody.A day after a city court granted police custody of Saduddin Malik, Jubilee Hills police took him into their custody from Chanchalguda Central Prison.Though police sought custody of the accused for seven days, the court on Wednesday granted three-day custody.The 18-year-old was being grilled at an undisclosed location. The investigators are looking to gather more information in the sensational case, which has triggered national outrage.
26-06-25 10:37 pm
HK News Desk
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
26-06-25 10:22 pm
HK News Desk
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm