ಬ್ರೇಕಿಂಗ್ ನ್ಯೂಸ್
06-06-22 10:13 pm Mangalore Correspondent ಕ್ರೈಂ
ಮಂಗಳೂರು, ಜೂನ್ 6: ಬೈಕಂಪಾಡಿ ಬಳಿಯ ಮೀನಕಳಿಯದಲ್ಲಿ ರೌಡಿಶೀಟರ್ ಒಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಯುವಕನನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಜಾ ಅಲಿಯಾಸ್ ರಾಘವೇಂದ್ರ (29) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಮೀನಕಳಿಯ ಬೀಚ್ ಬಳಿಯಿದ್ದ ರಾಜಾನನ್ನು ಬೈಕಿನಲ್ಲಿ ಬಂದಿದ್ದ ಇಬ್ಬರು ಅಟ್ಟಿಸಿಕೊಂಡು ಹೋಗಿ ತಲವಾರಿನಲ್ಲಿ ಕಡಿದಿದ್ದಾರೆ. ಕುತ್ತಿಗೆ, ಭುಜ, ಮುಖಕ್ಕೆ ಗಂಭೀರ ಗಾಯಗೊಂಡು ನೆಲಕ್ಕೆ ಬಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳೀಯರ ಪ್ರಕಾರ, ರಾಘವೇಂದ್ರನ ಹಳೆಯ ಗೆಳೆಯರೇ ಈ ಕೃತ್ಯ ನಡೆಸಿದ್ದಾರಂತೆ. ಪಣಂಬೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಕೊಲೆ ಕೃತ್ಯದ ವೈಷಮ್ಯಕ್ಕೆ ಪ್ರತೀಕಾರ
2019ರ ನವೆಂಬರ್ 29ರ ರಾತ್ರಿ 11 ಗಂಟೆಗೆ ಸಂದೇಶ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಸುರತ್ಕಲ್ ಪೇಟೆಯ ಜೀವನ್ ತಾರಾ ವೈನ್ ಶಾಪ್ ಬಳಿ ಕುಳಿತಿದ್ದಾಗ ಎರಡು ತಂಡಗಳ ನಡುವೆ ಜಗಳ ನಡೆದಿದ್ದು ಜೊತೆಗಿದ್ದ ಹಳೆಯ ಗೆಳೆಯರೇ ಸಂದೇಶನ್ನು ಕೊಲೆ ಮಾಡಿದ್ದರು. ಎರಡು ತಂಡಗಳ ಜಗಳದಿಂದಾಗಿ ಗ್ಯಾಂಗ್ ವಾರ್ ನಡೆದಿತ್ತು ಅನ್ನುವ ಮಾಹಿತಿಗಳಿದ್ದವು. ಆನಂತರ, ಅದೇ ರಾತ್ರಿ ಕೊಲೆ ನಡೆದಿದ್ದ ಜಾಗದಲ್ಲಿದ್ದ ರಾಜಾ ಅಲಿಯಾಸ್ ರಾಘವೇಂದ್ರ, ಗಣೇಶ್ ಮತ್ತು ಸೊಹೈಲ್ ಎಂಬ ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು.
ಸಂದೇಶ್ ಕೊಲೆ ಪ್ರಕರಣ ಸಂಬಂಧಿಸಿ ಒಂದು ತಿಂಗಳ ಬಳಿಕ ಮತ್ತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಮನು ಗುಡ್ಡೆಕೊಪ್ಲ(40), ಶರತ್ ಅಲಿಯಾಸ್ ಮುನ್ನ(35), ಪ್ರವೀಣ್ ಕುಂದರ್(42), ದೀಪಕ್ ರಾಜ್(33) ಮತ್ತು ಮಿಥುನ್ (40) ಎಂಬವರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಪ್ರಮುಖ ಆರೋಪಿ ಮನೋಜ್, ಕೊಲೆಯಾಗಿದ್ದ ಸಂದೇಶ್ ಪೂಜಾರಿಯ ಸ್ನೇಹಿತನೇ ಆಗಿದ್ದ. ಸಂದೇಶ್ ಮೇಲಿನ ಹಲ್ಲೆ ಸಂದರ್ಭ ಅಡ್ಡ ಬಂದಿದ್ದ ಆತನ ಇತರ ಇಬ್ಬರು ಸ್ನೇಹಿತರ ಮೇಲೂ ಹಲ್ಲೆ ನಡೆದಿತ್ತು. ಇದೀಗ ಸಂದೇಶ್ ಸ್ನೇಹಿತರೇ ರಾಜಾನ ಮೇಲೆ ತಲವಾರು ದಾಳಿ ನಡೆಸಿದ್ದು ಹಳೆ ವೈಷಮ್ಯ ತೀರಿಸಿಕೊಂಡಿದ್ದಾರೆ ಅನ್ನುವ ಮಾಹಿತಿಗಳಿವೆ.
Murder attempt on Rowdy sheeter at Panambur in Mangalore, hospitalized. Raja Raghavendra (29) (resident of Meenakali, Raghavendra alias Raju) is said to be critical after he was attacked by leathon weapons by bike borne assaliants. It may be recalled that on February 15, 2013 Sandeep Poojary (29), resident of Guddekopla in Suratkal had gone missing and later he was found dead near river side in Baikampady. His body was found in sack, with hands and legs tied. Raghavendra alias Raju was one of the prime accused in the murder case.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm