ಬ್ರೇಕಿಂಗ್ ನ್ಯೂಸ್
04-06-22 09:31 pm Mangalore Correspondent ಕ್ರೈಂ
ಮಂಗಳೂರು, ಜೂನ್ 4: ಇಎಸ್ಐ ಪಣಂಬೂರು ವಿಭಾಗದ ಡಿಸ್ಪೆನ್ಸರಿ ಘಟಕದಲ್ಲಿ ಫಾರ್ಮಸಿಸ್ಟ್ ಆಗಿದ್ದುಕೊಂಡು ಕಾರ್ಮಿಕರ ಚಿಕಿತ್ಸೆಗೆ ಹಣ ಪಾವತಿಸಲು ಲಂಚ ಕೇಳಿದ ಆರೋಪದಲ್ಲಿ ಅಧಿಕಾರಿಯೊಬ್ಬರನ್ನು ಎಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ವಿಷ್ಣುಮೂರ್ತಿ ಭಟ್ ಎಸಿಬಿ ಬಲೆಗೆ ಬಿದ್ದ ಫಾರ್ಮಸಿ ಅಧಿಕಾರಿ. ಪ್ರಕರಣದಲ್ಲಿ ಎಸಿಬಿಗೆ ದೂರು ನೀಡಿದ್ದ ಪ್ರಶಾಂತ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದು ಬೇಕರಿ ಒಂದರಲ್ಲಿ ನೌಕರಿಯಾಗಿದ್ದ ಪತ್ನಿಯ ಇಎಸ್ಐ ಸೌಲಭ್ಯ ಬಳಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆನಂತರ, ಖಾಸಗಿ ವೈದ್ಯರು ಬರೆದುಕೊಟ್ಟಿದ್ದ ಔಷಧಿ ಚೀಟಿಯಲ್ಲಿದ್ದ ಔಷಧಿಗಳು ಇಎಸ್ಐ ಡಿಸ್ಪೆನ್ಸರಿ ಘಟಕದಲ್ಲಿ ಸಿಕ್ಕಿರಲಿಲ್ಲ. ಹಾಗಾಗಿ ಬೇರೆ ಖಾಸಗಿ ಮೆಡಿಕಲ್ ನಿಂದ ಔಷಧಿಯನ್ನು ಪಡೆದುಕೊಂಡಿದ್ದರು.
ಆನಂತರ, ಔಷಧಿಯ ಬಿಲ್ ಮೊತ್ತವನ್ನು ಇಎಸ್ಐ ಡಿಸ್ಪೆನ್ಸರಿ ವಿಭಾಗಕ್ಕೆ ಕೊಟ್ಟು ಅಲ್ಲಿಂದ ಹಣವನ್ನು ಇಎಸ್ಐ ಸೌಲಭ್ಯ ಹೊಂದಿದ್ದ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಿತ್ತು. ಆದರೆ, ಬಿಲ್ ಮೊತ್ತವನ್ನು ಪಾವತಿ ಮಾಡಬೇಕಿದ್ದಲ್ಲಿ ಎರಡು ಸಾವಿರ ರೂಪಾಯಿ ಲಂಚ ನೀಡುವಂತೆ ಅಲ್ಲಿನ ಅಧಿಕಾರಿ ಕೇಳಿದ್ದರು. ಈ ಬಗ್ಗೆ ಪ್ರಶಾಂತ್ ಕುಮಾರ್ ಎಸಿಬಿಗೆ ದೂರು ನೀಡಿದ್ದು, ಶನಿವಾರ ಮಧ್ಯಾಹ್ನ ಪೊಲೀಸರ ಸೂಚನೆಯಂತೆ ಹಣವನ್ನು ನೀಡುತ್ತಿದ್ದಾಗಲೇ ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ಕೆ.ಸಿ.ಪ್ರಕಾಶ್, ಇನ್ಸ್ ಪೆಕ್ಟರ್ ಶ್ಯಾಮಸುಂದರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
Sleuths of the Anti-Corruption Bureau (ACB) apprehended a staff of ESI Hospital in Panambur accepting a bribe for releasing money to a patient.
The arrested has been identified as Vishnumurthi, who works as a senior pharmacist at the ESI Hospital in Panambur.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm