ಒಂಬತ್ತನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ ; ದಿಢೀರ್ ಉಸಿರಾಟದ ಸಮಸ್ಯೆಗೀಡಾಗಿ ಸಾವು ! 

18-05-22 02:15 pm       Mangalore Correspondent   ಕರಾವಳಿ

ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ನಡೆದಿದೆ. 

ಬಂಟ್ವಾಳ, ಮೇ 18 : ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ನಡೆದಿದೆ. 

ಅಳಿಕೆ ಗ್ರಾಮದ ಚಂದಾಡಿ ನಿವಾಸಿಗಳಾದ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಯ ಪುತ್ರಿ ಅನ್ವಿತಾ (14) ಮೃತ ಬಾಲಕಿ. ಮಂಗಳವಾರ ರಾತ್ರಿ ದಿಢೀರ್ ಆಗಿ ಎದೆ ನೋವು ಕಾಣಿಸಿಕೊಂಡು ಸಾವಿಗೀಡಾಗಿದ್ದಾಳೆ. ಅನ್ವಿತಾಗೆ ಕೆಲವು ಸಮಯದಿಂದ ಅಸ್ತಮಾ ರೀತಿಯ ಸಮಸ್ಯೆ ಇತ್ತು. ಇದರಿಂದಾಗಿ ಶೀತ ಆದಕೂಡಲೇ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಮಂಗಳವಾರ ರಾತ್ರಿ ಉಸಿರಾಟದ ತೊಂದರೆ ಎದುರಾಗಿದ್ದು ಯಾವಾಗಿನಂತೆ ಮನೆಯಲ್ಲಿದ್ದ ಔಷಧಿ ನೀಡಿದ್ದರು. 

ಆದರೆ ರಾತ್ರಿ 1 ಗಂಟೆ ಸುಮಾರಿಗೆ ಉಸಿರಾಡಲು ಕಷ್ಟವಾಗಿದ್ದು ಮನೆಯಲ್ಲಿಯೇ ದುರಂತ ಸಾವು ಕಂಡಿದ್ದಾಳೆ. ಅಬಳಿಕ ವೈದ್ಯರು ಬಂದು ಪರಿಶೀಲಿಸಿ ಬಾಲಕಿ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ. ಸಾಯಿಗೀತಾ ಅವರದ್ದು ಅಳಿಕೆ ಗುತ್ತಿನ ಮನೆಯಾಗಿದ್ದು ಬಾಲಕಿಯ ಸಾವು ಮನೆಯವರನ್ನು ದಿಗ್ಭ್ರಾಂತಗೊಳಿಸಿದ್ದು ಆಸುಪಾಸಿನ ಜನರನ್ಜು ಶೋಕ ಸಾಗರದಲ್ಲಿ ಮುಳುಗಿಸಿದೆ. 

ಅನ್ವಿತಾ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಸಾವಿನ ಕಾರಣ ಜೇಸೀಸ್ ಶಾಲೆಗೆ ರಜೆ ನೀಡಲಾಗಿದೆ.

Mangalore 9th std student dies of Heart Attack in Vitla. The deceased has been identified as Anwitha (14). It said she was suffering from Astama for a long while.