ಬ್ರೇಕಿಂಗ್ ನ್ಯೂಸ್
16-05-22 01:19 pm Udupi Correspondent ಕರಾವಳಿ
ಉಡುಪಿ, ಮೇ 16 : ಲೌಡ್ ಸ್ಪೀಕರ್ ಅಳವಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿದೆ. ಕೋರ್ಟ್ ಆದೇಶ ಪಾಲನೆಗೆ ಎಲ್ಲಾ ಮಸೀದಿಗಳಿಗೆ ಸುತ್ತೋಲೆ ಕಳುಹಿಸಿದ್ದೇವೆ. ಸಿದ್ದಲಿಂಗ ಸ್ವಾಮೀಜಿ, ತರಳಬಾಳು ಸ್ವಾಮೀಜಿ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋರ್ಟ್ ಆದೇಶ ಪಾಲನೆಯಾದರೆ ನಮಗೆ ತೊಂದರೆ ಆಗುತ್ತದೆ ಎಂದು ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮಗೇನು ಕೋರ್ಟ್ ಆದೇಶ ಪಾಲಿಸುವುದು ಹೊರೆಯಾಗಲ್ಲ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸ ಅದಿ ಹೇಳಿದ್ದಾರೆ.
ಮಸೀದಿಯಲ್ಲಿ ಬೆಳಗ್ಗಿನ ಪ್ರಾರ್ಥನೆ ಬಗ್ಗೆ ವಕ್ಫ್ ಬೋರ್ಡ್ ನಿರ್ಧಾರ ಮಾಡುವುದಿಲ್ಲ. ಆಜಾನ್ ಕೂಗುವುದು ಷರಿಯತ್ ವಿಚಾರವಾಗಿದ್ದು ಉಲಮಾಗಳು, ಧಾರ್ಮಿಕ ಮುಖಂಡರು ಅಭಿಪ್ರಾಯ ಹೇಳಬೇಕು. ಬೆಂಗಳೂರಿನಲ್ಲಿ ಮುಖಂಡರು ಸೇರಿ ಒಗ್ಗಟ್ಟಿನ ತೀರ್ಮಾನ ತೆಗೆದುಕೊಂಡಿದ್ದಾರೆ. ಕರಾವಳಿ ಭಾಗದ ಉಲಮಾಗಳು ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನೆರಡು ದಿನದಲ್ಲಿ ಕರಾವಳಿ ಭಾಗದ ಉಲಮಾಗಳ ಸಭೆ ನಡೆಯಲಿದ್ದು ಅದರಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಕರ್ನಾಟಕದ ಮದರಸಾದಲ್ಲಿ ರಾಷ್ಟ್ರಗೀತೆ ಹಾಡಬೇಕೆಂಬ ಹಿಂದು ಸಂಘಟನೆಗಳ ಒತ್ತಾಯದ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿರುವ ಎಸ್ಸೆಸ್ಸೆಫ್, ಜಮಾಅತ್ ಅಧೀನದ 2000 ಮದರಸಗಳಲ್ಲಿ ರಾಷ್ಟ್ರಗೀತೆಯನ್ನು ಸಿಲೆಬಸ್ ನಲ್ಲಿ ಅಳವಡಿಸಿದ್ದೇವೆ. ವಕ್ಫ್ ಅಧೀನದಲ್ಲಿ 1,900 ಮದರಸಗಳಿದ್ದು ಅಲ್ಲಿಯೂ ರಾಷ್ಟ್ರಗೀತೆ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ರಾಷ್ಟ್ರಗೀತೆಯನ್ನು ಮದರಸದಲ್ಲಿ ಹೇಳಲಾಗುತ್ತಿದೆ. ಇನ್ನೂ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುತ್ತೇವೆ.
ರಾಷ್ಟ್ರಗೀತೆಗಿಂತ ದೊಡ್ಡದು ಯಾವುದು ಇಲ್ಲ. ನೀನು ಜನ್ಮಪಡೆದ ರಾಷ್ಟ್ರವನ್ನು ಪ್ರೀತಿಸು ಎಂದು ಇಸ್ಲಾಮ್ ಹೇಳುತ್ತದೆ. ಎಲ್ಲಾ ಮುಸಲ್ಮಾನ ಮಕ್ಕಳು ರಾಷ್ಟ್ರಗೀತೆಯನ್ನು ಕಡ್ಡಾಯ ಹಾಡಲೇಬೇಕು. ಕಡ್ಡಾಯವಾಗಿ ಇದನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ವಕ್ಫ್ ಮಂಡಳಿಯ ಸಭೆ ಮೇ 25ರಂದು ನಡೆಯಲಿದ್ದು ಅಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಯಾರೂ ಅಭಿಯಾನ ಮಾಡಬೇಕಾಗಿಲ್ಲ. ಯಾರು ಯಾರ ಮೇಲೆ ಏನನ್ನು ಹೇರಲು ಸಾಧ್ಯವಿಲ್ಲ. ಅಭಿಯಾನ ಮಾಡುವವರಿಗೆ ರಾಷ್ಟ್ರಪ್ರೇಮದ ಗಂಭೀರತೆ ಎಷ್ಟಿದೆ ಗೊತ್ತಿಲ್ಲ. ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರು ಈಗ ರಾಷ್ಟ್ರಪ್ರೇಮದ ಪಾಠ ಮಾಡುತ್ತಿದ್ದಾರೆ ಎಂದು ಶಾಫಿ ಟೀಕಿಸಿದರು.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಮಸೀದಿ, ದೇವಸ್ಥಾನ, ಗುಂಬಜ್ ಗಳನ್ನು ಕಟ್ಟಿಸಿದ್ದಾನೆ. ಟಿಪ್ಪು ಮೈಸೂರಿನ ಹುಲಿ ಎಂದು ಪಾಠದಿಂದ ಕಲಿತಿದ್ದೇವೆ. ವ್ಯತಿರಿಕ್ತವಾದ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಲಿ. ಇತಿಹಾಸದ ಕಳಂಕಗಳ ಬಗ್ಗೆ ಆಲೋಚನೆ ಮಾಡಬಾರದು. ಇತಿಹಾಸದ ಒಳ್ಳೆಯ ವಿಚಾರಗಳು ಚರ್ಚೆಯಾಗಲಿ. ಇತಿಹಾಸದ ಚರ್ಚೆಗಳಿಂದ ಹಿಂದು ಮತ್ತು ಮುಸಲ್ಮಾನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಮದರಸದ ಸಿಲೆಬಸ್ 13 ಭಾಷೆಗಳಲ್ಲಿ ಇದೆ. ದೇಶವನ್ನು ಪ್ರೀತಿಸುವುದು, ಭಾಷೆ, ಬಹು ಸಂಸ್ಕೃತಿಯ ಬಗ್ಗೆ ಪಠ್ಯ ಇದೆ ಎಂದು ಮೌಲಾನ ಶಾಫಿ ಸ-ಅದಿ ಹೇಳಿದ್ದಾರೆ.
Karnataka Waqf Board chairman N K Mohammed Shafi Saadi called for action against divisive forces in society. He said he welcomed singing of the national anthem in madrasas although this demand had come from individuals. However, he said nationalism and patriotism should come from within and people who are divisive should be kept aside.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm