ಬ್ರೇಕಿಂಗ್ ನ್ಯೂಸ್
16-05-22 10:27 am Mangalore Correspondent ಕರಾವಳಿ
ಮಂಗಳೂರು, ಮೇ 16 : ರಾಜ್ಯ ಸರಕಾರ ಎಂದಿಗಿಂತ ಮೊದಲೇ ಶಾಲೆ ಆರಂಭಿಸಲು ಸೂಚನೆ ನೀಡಿರುವುದರಿಂದ ಈ ಬಾರಿ ಮೇ 16ರಿಂದಲೇ ಎಲ್ಲ ಕಡೆ ಚಿಣ್ಣರ ಕಲರವ ಕೇಳಿಬಂದಿದೆ. ಅತ್ತ ಬೇಸಿಗೆ ಮುಗಿಯದಿದ್ದರೂ, ಅಷ್ಟಿಷ್ಟು ಮಳೆಯೂ ಶುರುವಾಗಿದ್ದರಿಂದ ಮಕ್ಕಳು ನಿಧಾನಕ್ಕೆ ಶಾಲೆಯ ಮೆಟ್ಟಿಲು ಹತ್ತಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಶಾಲೆ ವಿಳಂಬವಾಗಿದ್ದರಿಂದ ಅದನ್ನು ಸರಿತೂಗಿಸಲು ಮತ್ತು 15 ದಿನ ಮೊದಲೇ ಶಾಲೆ ತೆರೆದು ಮಕ್ಕಳು ಹಿಂದಿನದನ್ನು ಪುನರ್ಮನನ ಮಾಡಿಕೊಳ್ಳುವ ಉದ್ದೇಶದಿಂದ ಅವಧಿಗೆ ಮೊದಲೇ ಶಾಲೆ ಆರಂಭಿಸುವುದೆಂಬುದು ಸಮಜಾಯಿಷಿ. ಆದರೆ ಇನ್ನೂ ಬೇಸಗೆಯ ಬಿಸಿಲ ಬೇಗೆ ಕರಗಿಲ್ಲ. ಮಳೆಯೂ ಶುರುವಾಗಿಲ್ಲ. ಮಕ್ಕಳು ರಜೆಯಲ್ಲಿ ಅಜ್ಜಿ ಮನೆಯಲ್ಲೋ ಇನ್ನೆಲ್ಲೋ ರಜೆಯ ಗುಂಗಿನಲ್ಲಿ ಇರುತ್ತಾರೆ. ಅಂಥ ಸಂದರ್ಭದಲ್ಲಿ 15 ದಿನಗಳ ಮೊದಲೇ ಶಾಲೆ ಆರಂಭಿಸಿದ್ದು ಬಹಳಷ್ಟು ಮಕ್ಕಳಿಗೆ ಮತ್ತು ಹೆತ್ತವರಿಗೆ ಅಸಮಾಧಾನ ಮೂಡಿಸಿತ್ತು. ಹಾಗಾಗಿ ಹೆಚ್ಚಿನ ಶಾಲೆಗಳಲ್ಲಿ ಮೊದಲ ದಿನ ಹಾಜರಾತಿ ಕಡಿಮೆ ಇತ್ತು.



ರಾಜ್ಯ ಸರಕಾರ ಅವಧಿಗೆ ಮೊದಲೇ ಶಾಲೆ ಆರಂಭಿಸುವುದಕ್ಕೆ ಬಹಳಷ್ಟು ಆಕ್ಷೇಪವೂ ಕೇಳಿಬಂದಿತ್ತು. ಆದರೆ ಖಾಸಗಿ ಶಾಲಾಡಳಿತಗಳು ಬೇಗನೆ ಶಾಲೆ ತೆರೆಯಲು ಹೆಚ್ಚು ಹುಮ್ಮಸ್ಸು ತೋರಿದ್ದವು. ರುಪ್ಸಾ ವತಿಯಿಂದ ರಾಜ್ಯ ಸರಕಾರಕ್ಕೆ ಒತ್ತಡವನ್ನು ಹೇರಿದ್ದವು. ಸರಕಾರಿ ನೌಕರರು ಅವಧಿಗೆ ಮೊದಲೇ ಶಾಲೆ ಬೇಡ ಎನ್ನುತ್ತಿದ್ದರೂ, ಶಿಕ್ಷಣ ಸಚಿವ ನಾಗೇಶ್ ಶಾಲೆ ಬೇಗ ಆರಂಭಿಸುವುದರ ಪರವಾಗಿಯೇ ಇದ್ದರು. ಹೀಗಾಗಿ ಮೇ 16 ರಿಂದ ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ತರಗತಿ ಆರಂಭಗೊಂಡಿದ್ದು ಭಾರದ ಹೆಜ್ಜೆಗಳನ್ನಿಡುತ್ತಾ ಮಕ್ಕಳು ಹೆತ್ತವರ ಜೊತೆಗೆ ಶಾಲೆಯತ್ತ ಆಗಮಿಸಿದ್ದಾರೆ.
Mangalore After 35 days of summer vacation, students in Karnataka will be heading back to classes as all schools — State and Central boards — reopen for the academic year 2022-23 on Monday. It is going to be a festive atmosphere in many schools. As per the instructions of the Department of Public Instruction (DPI), all government and aided schools are planning to welcome the students with midday meals, sweets, and even cultural events. The schools will be decorated with flowers and rangoli.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
07-02-26 10:53 pm
HK News Desk
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
08-02-26 02:07 pm
Mangalore Correspondent
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm