ಗಂಡನ ಕಿರುಕುಳ ; ಬೇಕರಿ ನಡೆಸುತ್ತಿದ್ದ ಪತ್ನಿ ವಿಷ ಕುಡಿದು ಸಾವಿಗೆ ಶರಣು, ಪತಿ ಬಂಧನ, ಮಕ್ಕಳಿಬ್ಬರು ಅನಾಥ ! 

08-05-22 09:36 pm       Mangalore Correspondent   ಕರಾವಳಿ

ಗಂಡನ ಕಿರುಕುಳದಿಂದ ಬೇಸತ್ತ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದ್ರೆ ಠಾಣೆ ವ್ಯಾಪ್ತಿಯ ತೋಡಾರಿನಲ್ಲಿ ನಡೆದಿದೆ. 

ಮೂಡುಬಿದ್ರೆ, ಮೇ 8: ಗಂಡನ ಕಿರುಕುಳದಿಂದ ಬೇಸತ್ತ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದ್ರೆ ಠಾಣೆ ವ್ಯಾಪ್ತಿಯ ತೋಡಾರಿನಲ್ಲಿ ನಡೆದಿದೆ. 

ಮೂಲತಃ ಹಾಸನ ಜಿಲ್ಲೆಯ ಆಲೂರಿನ ಚೈತ್ರಾ (28) ಮೃತ ಮಹಿಳೆ. ಆರೋಪಿ ಗಂಡ ಲೋಹಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪತಿ - ಪತ್ನಿ ಇಬ್ಬರು ಸೇರಿಕೊಂಡು ತೋಡಾರಿನಲ್ಲಿ ಬೇಕರಿ ನಡೆಸುತ್ತಿದ್ದರು. ಈ ನಡುವೆ ಮನಸ್ತಾಪ ಉಂಟಾಗಿದ್ದು ಇಬ್ಬರಲ್ಲಿ ಜಗಳ ಆಗಿತ್ತು. 

ಮೂರು ದಿನಗಳ ಹಿಂದೆ ಪತ್ನಿ ಚೈತ್ರಾ ಬಾಡಿಗೆ ಮನೆಯಲ್ಲಿದ್ದಾಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಸಾವು ಕಂಡಿದ್ದಾಳೆ. ಹೀಗಾಗಿ ಗಂಡನ ವಿರುದ್ಧ ಪ್ರಕರಣ ದಾಖಲಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಮೂರು ವರ್ಷದ ಗಂಡು ಮಗು ಹಾಗೂ ಒಂದೂವರೆ ವರ್ಷದ ಹೆಣ್ಮಗು ಇತ್ತು. ಗಂಡ- ಹೆಂಡತಿ ಜಗಳದಿಂದ ಕೂಸು ಬಡವಾಯ್ತು ಎನ್ನುವ ಗಾದೆ ಇಲ್ಲಿ ಅಕ್ಷರಶಃ ನಿಜವಾಗಿದೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

Mangalore Husbands torture, wife running bakery business commits suicide, arrested by Moodbidri police. The deceased has been identified as Chitra (28) from Hassan.