ಬ್ರೇಕಿಂಗ್ ನ್ಯೂಸ್
09-03-26 07:29 pm HK News Staffer ಕರಾವಳಿ
ಮಂಗಳೂರು, ಮಾ.9: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರ ಇನ್ನೂ ಸರಿಯಾಗಿಲ್ಲ. ಮಾರ್ಚ್ 9ರ ಸೋಮವಾರವೂ ಹಲವು ಅಂತರಾಷ್ಟ್ರೀಯ ವಿಮಾನಗಳ ಸೇವೆಯನ್ನು ರದ್ದುಪಡಿಸಿತ್ತು. ಇದರಿಂದ ದುಬೈ, ಜೆದ್ದಾ ಮತ್ತು ದಮಾಮ್ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಕಿ ಸೋಮವಾರ ಬೆಳಗ್ಗೆ 5:20ಕ್ಕೆ ತೆರಳಬೇಕಿದ್ದ ಮಂಗಳೂರು–ಜೆದ್ದಾ (ಐಎಕ್ಸ್ 845) ವಿಮಾನ ಹಾಗೂ ಸಂಜೆ 18:20ಕ್ಕೆ ಜೆದ್ದಾ–ಮಂಗಳೂರು (ಐಎಕ್ಸ್ 846) ವಿಮಾನ ಪ್ರಯಾಣ ರದ್ದುಗೊಂಡಿದೆ. ಅದೇ ರೀತಿ ಮಧ್ಯಾಹ್ನ 13:20ಕ್ಕೆ ತೆರಳಬೇಕಿದ್ದ ಮಂಗಳೂರು–ದುಬೈ (ಐಎಕ್ಸ್ 831) ಹಾಗೂ ರಾತ್ರಿ 22:10ಕ್ಕೆ ದುಬೈ–ಮಂಗಳೂರು (ಐಎಕ್ಸ್ 832) ವಿಮಾನ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.
ರಾತ್ರಿ 20:15ಕ್ಕೆ ಹೋಗಬೇಕಿದ್ದ ಮಂಗಳೂರು–ದುಬೈ (ಐಎಕ್ಸ್ 813) ಮತ್ತು ಮಾ.10ರಂದು ಬೆಳಗ್ಗೆ 4:55ಕ್ಕೆ ದುಬೈ–ಮಂಗಳೂರು (ಐಎಕ್ಸ್ 814) ವಿಮಾನಗಳೂ ರದ್ದಾಗಿವೆ. ಮಾ.9ರಂದು ರಾತ್ರಿ 23:10ಕ್ಕೆ ತೆರಳಬೇಕಿದ್ದ ಮಂಗಳೂರು– ದಮಾಮ್ (ಐಎಕ್ಸ್ 847) ಮತ್ತು ಮಾ.10ರಂದು ಬೆಳಗ್ಗೆ 9:25ಕ್ಕೆ ದಮಾಮ್–ಮಂಗಳೂರು ವಿಮಾನ ಸೇವೆಯೂ ಸ್ಥಗಿತಗೊಂಡಿದೆ. ಇದಲ್ಲದೆ ಮಾ.9ರಂದು ರಾತ್ರಿ 23:20ಕ್ಕೆ ಹೊರಡಬೇಕಿದ್ದ ಮಂಗಳೂರು–ದುಬೈ (ಎಯುಎಚ್) (ಐಎಕ್ಸ್ 815) ಮತ್ತು ಮಾ.10ರಂದು ಬೆಳಗ್ಗೆ 8:15ಕ್ಕೆ ದುಬೈ (ಎಯುಎಚ್)–ಮಂಗಳೂರು (ಐಎಕ್ಸ್ 816) ವಿಮಾನಗಳನ್ನೂ ರದ್ದುಗೊಳಿಸಲಾಗಿದೆ.
ಇದರ ಜೊತೆಗೆ ಇಂಡಿಗೊ ವಿಮಾನಗಳಲ್ಲೂ ವ್ಯತ್ಯಯ ಉಂಟಾಗಿದೆ. ಮಾ.9ರಂದು ಬೆಳಗ್ಗೆ 5:20ಕ್ಕೆ ದುಬೈ–ಮಂಗಳೂರು (6ಇ 1437) ಮತ್ತು ರಾತ್ರಿ 21:15ಕ್ಕೆ ಮಂಗಳೂರು–ದುಬೈ (6ಇ 1438) ವಿಮಾನಗಳು ರದ್ದಾಗಿವೆ. ಜೊತೆಗೆ ಸಂಜೆ 19:35ಕ್ಕೆ ಹೊರಡಬೇಕಿದ್ದ ಬೆಂಗಳೂರು–ಮಂಗಳೂರು (6ಇ 578) ವಿಮಾನವೂ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮಂಗಳೂರು ವಿಮಾನ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ವಿಮಾನಗಳ ಸಂಚಾರ ರದ್ದುಗೊಂಡಿದ್ದರಿಂದ ವಿದೇಶಿ ಪ್ರಯಾಣಕ್ಕೆ ಕಾಯುತ್ತಿದ್ದ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಬೇಕಿದ್ದ ಹಾಗೂ ಅಲ್ಲಿಂದ ಬರಬೇಕಿದ್ದ ಒಟ್ಟು 19 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ವಿವಿಧ ದೇಶಗಳಿಂದ ಆಗಮಿಸಬೇಕಿದ್ದ 9 ವಿಮಾನಗಳನ್ನು ರದ್ದುಗೊಳಿಸಿದ್ದರೆ, ಬೆಂಗಳೂರಿನಿಂದ ಹೊರ ದೇಶಗಳಿಗೆ ತೆರಳಬೇಕಿದ್ದ 10 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವ ಸ್ಥಿತಿಯಾಗಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am