ಬ್ರೇಕಿಂಗ್ ನ್ಯೂಸ್
06-01-26 04:09 pm Mangalore Correspondent ಕರಾವಳಿ
ಮಂಗಳೂರು, ಜ.6 : ಕೋಳಿ ಅಂಕ ಎಂಬುದು ಚರ್ಚಾರ್ಹ ವಿಷಯವೇ ಆಗಿರಬಹುದು. ಆದರೆ ಅದಕ್ಕೂ ಜಾಸ್ತಿ, ಕೋಗಿಲು ಲೇಔಟ್ನಲ್ಲಿ ಬೀದಿಗೆ ಬಿದ್ದ ವೃದ್ದರು, ಮಕ್ಕಳು, ಬಾಣಂತಿಯರು, ರೋಗಿಗಳ ಬದುಕು ಮುಖ್ಯವಾಗಿದೆ. ಇವರ್ಯಾರೂ ಕೋಳಿ ಅಂಕದ ಬಗ್ಗೆ ಪ್ರತಿಕ್ರಿಯಿಸುವವರ ಕಣ್ಣಿಗೆ ಬಿದ್ದಿಲ್ಲವೇ? ಅದೇ ಸಮುದಾಯದ ವೋಟ್ ಪಡೆದವರು ಈ ರೀತಿಯಾಗಿ ಸಮುದಾಯದ ಮಂದಿಯನ್ನು ಕಡೆಗಣಿಸುತ್ತಾರೆ ಅಂತಾದರೆ ಇಂತಹ ಜನಪ್ರತಿನಿಧಿಗಳು ನಮಗೆ ಬೇಕೇ ಎಂದು ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ ಪ್ರಶ್ನಿಸಿದ್ದಾರೆ.
ಪಕ್ಷ ಯಾವುದೇ ಇರಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತದ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸದ ಶಾಸಕರುಗಳು ನಮಗೆ ಬೇಕಿಲ್ಲ. ಅನ್ಯಾಯ ಯಾವುದೇ ಧರ್ಮದವರಿಗೆ ಆಗಲಿ ಅದು ಅನ್ಯಾಯ ಅಲ್ಲವೇ ? ಒಬ್ಬ ಜನಪ್ರಧಿನಿಧಿ ಆದವನು ಧರ್ಮ ನೋಡದೆ ಧ್ವನಿ ಎತ್ತಬೇಕು ಅನ್ನುವಷ್ಟು ಜ್ಞಾನವಿಲ್ಲವೇ? ತನ್ನ ಸಮುದಾಯವನ್ನು ಹೇಗೆ ಬೇಕು ಹಾಗೆ ನಡೆಸಿಕೊಂಡರೆ ನಡೆಯುತ್ತದೆ ಅನ್ನುವ ಭ್ರಮೆ ಇನ್ಮುಂದೆ ಇಟ್ಟುಕೊಳ್ಳಬೇಡಿ. ಅಂತಹ ರಾಜಕೀಯ ಆಟ ಇನ್ನು ನಡೆಯುವುದಿಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯವಾದಾಗ ತುಟಿ ಪಿಟಿಕ್ ಅನ್ನದ ಇವರಿಂದ ಈ ಸಮಾಜಕ್ಕೆ ಏನು ಲಾಭವಿದೆ ಅನ್ನೋದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯ ಇಂತಹ ಜನಪ್ರಧಿನಿಧಿಗಳಿಂದ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಮುದಾಯದ ವಿರುದ್ಧ ಮುಸ್ಲಿಂ ಜನಪ್ರತಿನಿಧಿಗಳ ಇದೇ ರೀತಿ ನಿರ್ಲಕ್ಷ್ಯತನ ಮುಂದುವರೆದಲ್ಲಿ ಅಂತಹ ಜನಪ್ರಧಿನಿಧಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಪ್ರತಿಭಟಿಸಬೇಕಾಗುತ್ತದೆ ಎಂದು ಬಜ್ಪೆ ಪ.ಪಂ. ನೂತನ ಸದಸ್ಯರೂ ಆಗಿರುವ ಸಿರಾಜ್ ಬಜ್ಪೆ ಪರೋಕ್ಷವಾಗಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಎಚ್ಚರಿಕೆ ಮಾತುಗಳನ್ನಾಡಿದ್ದಾರೆ. ಸುದ್ದಿಗೋಷ್ಟಿ ಸಂದರ್ಭದಲ್ಲಿ ಎದುರಾದ ಕೋಳಿ ಅಂಕ ನಿಷೇಧ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಖಾದರ್, ಕೋಳಿ ಅಂಕ ಈ ಭಾಗದ ಸಂಪ್ರದಾಯ ಹೌದು. ಹಿಂದೆ ಕಂಬಳಕ್ಕು ಇಂತದ್ದೇ ತೊಂದರೆ ಬಂದಿತ್ತು. ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಕಾನೂನು ಸಚಿವರ ಜೊತೆಗೆ ಚರ್ಚಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರಲ್ಲು ಮಾತನಾಡುತ್ತೇನೆ ಎಂದು ಹೇಳಿದ್ದರು.
Siraj Bajpe, President of the Dakshina Kannada Muslim Elected Representatives’ Forum, sharply criticized Speaker U.T. Khader for expressing concern over the Koli Anka tradition while allegedly ignoring the plight of families evicted from Kogilu Layout. He questioned how elderly people, children, new mothers, and patients suffering on the streets fail to draw attention from leaders who won votes from the same community.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am