ಬ್ರೇಕಿಂಗ್ ನ್ಯೂಸ್
17-12-25 05:05 pm Mangalore Correspondent ಕರಾವಳಿ
ಮಂಗಳೂರು, ಡಿ.17 : ಮಂಗಳೂರು ಜೈಲಿನಲ್ಲಿ ಹಿಂದು- ಮುಸ್ಲಿಂ ಕೈದಿಗಳ ಮಧ್ಯೆ ವಾಗ್ವಾದ- ಸಂಘರ್ಷ- ಗದ್ದಲ ನಡೆದಿದ್ದು, ಸಿಸಿಬಿ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ ಎರಡೂ ಕಡೆಯ ಗುಂಪುಗಳಿಗೆ ಥಳಿಸಿ ಚೆನ್ನಾಗಿ ಬೆಂಡೆತ್ತಿದ್ದಾರೆ.
ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಸೋಮವಾರ ಸಂಜೆ ಕೋಕಾ ಆಕ್ಟಿನಡಿ ಬಂಧಿತನಾಗಿರುವ ಭರತ್ ಕುಮ್ಡೇಲ್ ಜೊತೆಗೆ ಮಾತನಾಡಲು ಸಂಬಂಧಿಕರು ಬಂದಿದ್ದರು. ಆತ ಮಾತನಾಡಲು ಹೊರಗಡೆ ಬಂದು ಹಿಂದೆ ತೆರಳುವ ಸಂದರ್ಭದಲ್ಲಿ ಎ ಬ್ಯಾರಕ್ ನಲ್ಲಿರುವ ಕೈದಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಆನಂತರ, ಈ ವಿಷಯ ತಿಳಿದ ಬಿ ಬ್ಯಾರಕಿನ ಹಿಂದು ಕೈದಿಗಳು ರಂಪ ಮಾಡಿದ್ದು ಎರಡೂ ಕಡೆಯಿಂದ ಅವಾಚ್ಯ ನಿಂದನೆ, ಜೋರು ಗದ್ದಲ ಎಬ್ಬಿಸಿದ್ದಾರೆ. ವಿಷಯ ತಿಳಿದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ರಾತ್ರಿ ವೇಳೆ ಸಿಸಿಬಿ ತಂಡದೊಂದಿಗೆ ಜೈಲಿಗೆ ಬಂದಿದ್ದು, ಗಲಾಟೆ ನಡೆಸಿದ ಎರಡೂ ಕಡೆಯವರಿಗೆ ಲಾಠಿ ರುಚಿ ನೀಡಿದ್ದಾರೆ.
ಘಟನೆ ಬಗ್ಗೆ ಜೈಲು ಸುಪರಿಡೆಂಟ್ ಶರಣಬಸಪ್ಪ ಬರ್ಕೆ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಎ ಬ್ಯಾರಕಿನ ಮೊಯ್ದೀನ್ ಪರಾದ್, ಸರ್ಫರಾಜ್, ಮಹಮ್ಮದ್ ಅಲ್ತಾಫ್, ಇಮ್ತಿಯಾಜ್, ಅಬ್ದುಲ್ ನೌಶಾದ್, ಮಹಮ್ಮದ್ ಸಾಹಿಲ್, ಮಹಮ್ಮದ್ ಹನೀಫ್ ಮತ್ತು ಬಿ ಬ್ಯಾರಕಿನ ಲತೀಶ್ ಜೋಗಿ, ಮಂಜುನಾಥ್, ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ್, ಗುರುರಾಜ್, ಸುಮಂತ್ ಎಂಬ ಕೈದಿಗಳ ಮೇಲೆ ಕೇಸು ದಾಖಲಾಗಿದೆ.
ಇದೇ ವೇಳೆ, ಪೊಲೀಸರು ಜೈಲಿನ ಒಳಗಡೆ ತಪಾಸಣೆ ನಡೆಸಿದ್ದು ಮೂರು ಆಂಡ್ರಾಯ್ಡ್ ಮೊಬೈಲ್ ಮತ್ತು ಇನ್ನೊಂದು ಸಣ್ಣ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ.
A tense situation erupted at Mangaluru Jail following a clash between Hindu and Muslim inmates, prompting the City Crime Branch (CCB) police to conduct an overnight crackdown inside the prison.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am