ಬ್ರೇಕಿಂಗ್ ನ್ಯೂಸ್
26-12-20 12:23 pm Mangalore Correspondent ಕರಾವಳಿ
ಮಂಗಳೂರು, ಡಿ.26: ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ಜನರ ಗಮನ ಸೆಳೆದಿದ್ದ ಎತ್ತಿನ ಬಂಡಿಯ ಕಾರು ಈಗ ರಾಷ್ಟ್ರದ ಗಮನ ಸೆಳೆದಿದೆ. ಧರ್ಮಸ್ಥಳದ ಬಂಡಿಯ ಕಾರಿನ ಚಿತ್ರವವನ್ನು ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂಧನ ಮಿತವ್ಯಯದ ಕಾರು ಇದಕ್ಕಿಂತ ಶ್ರೇಷ್ಠವಾದ್ದು ಇನ್ನೊಂದಿಲ್ಲ ಎಂದಿದ್ದಾರೆ.
ಧರ್ಮಸ್ಥಳದಲ್ಲಿ ಅಂಬಾಸಿಡರ್ ಕಾರಿನ ಹಿಂಭಾಗದ ರಚನೆಯ ರೀತಿಯಲ್ಲಿ ಬಂಡಿಯನ್ನು ತಯಾರಿಸಿ, ಅದನ್ನು ಎತ್ತಿನ ಗಾಡಿಯ ರೀತಿ ಪರಿವರ್ತಿಸಿದ್ದು ಜನರ ಗಮನ ಸೆಳೆದಿತ್ತು. ಎರಡು ಎತ್ತುಗಳನ್ನು ಕಟ್ಟಿಕೊಂಡು ರೈತನೊಬ್ಬ ಬಂಡಿ ಚಲಾಯಿಸುತ್ತಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಬಂಡಿಯ ಕಾರಿನ ವಿಡಿಯೋ ಜೊತೆಗೆ ಟಿಪ್ಪಣಿಯನ್ನೂ ಬರೆದಿದ್ದಾರೆ.
ಇದಕ್ಕಿಂತ ಕಡಿಮೆ ಖರ್ಚಿನಲ್ಲಿ ಕಾರನ್ನು ಮಾಡಬಹುದೆಂದು ಅನಿಸುತ್ತಿಲ್ಲ. ನವೀಕರಿಸಬಹುದಾದ ಇಂಧನ ಹೊಂದಿರುವ ಕಾರು ಇದಾಗಿದ್ದು ಮಿಥೇನ್ ಗೆ ಹೋಲಿಸಿದರೆ ಇದರಲ್ಲಿ ಹೊಗೆ ಉಗುಳುವುದಿಲ್ಲ ಎಂದು ಇಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿರುವ ಟೆಲ್ಸಾ ಕಂಪನಿಯ ಸಿಇಓ ಅಲಾನ್ ಮಸ್ಕ್ ಅವರನ್ನು ಹಾಸ್ಯಧಾಟಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
ದೆಹಲಿಯಲ್ಲಿ ವಿಪರೀತ ಮಾಲಿನ್ಯದ ವಿಚಾರ ಚರ್ಚೆಯ ವಸ್ತುವಾಗಿರುವಾಗಲೇ ಆನಂದ್ ಮಹೀಂದ್ರಾ ಬರೆದ ಸಾಲುಗಳು ದೇಶದ ಗಮನ ಸೆಳೆಯುವಂತೆ ಮಾಡಿದೆ.
I don’t think @elonmusk & Tesla can match the low cost of this renewable energy-fuelled car. Not sure about the emissions level, though, if you take methane into account... pic.twitter.com/C7QzbEOGys
— anand mahindra (@anandmahindra) December 23, 2020
Anand Mahindra director of the giant Mahindra company tweets looking at the video of Dharmasthalas Invention of renewable energy fuelled the car.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm