ಬ್ರೇಕಿಂಗ್ ನ್ಯೂಸ್
25-12-20 11:07 am Mangalore Correspondent ಕರಾವಳಿ
ಮಂಗಳೂರು, ಡಿ.25: ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವ ವಾಹನಗಳನ್ನು ಪೊಲೀಸರು ಟೋಯಿಂಗ್ ಮಾಡಿಕೊಂಡು ಹೋಗುವುದು, ದಂಡ ಕಟ್ಟಿಸುವುದು, ಚೌಕಾಸಿ ಮಾಡಿ ಬಿಡುವುದು ಹೀಗೆಲ್ಲ ನಡೆದುಬಂದಿದೆ. ಆದರೆ, ಇಲ್ಲೊಂದು ಪೊಲೀಸರ ತಂಡ ಮಗು ಮಲಗಿದ್ದಾಗಲೇ ಕಾರನ್ನು ಟೋಯಿಂಗ್ ವಾಹನದಲ್ಲಿ ಎತ್ತಿಕೊಂಡು ಹೋಗಿ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಮೂಡುಬಿದ್ರೆಯ ಮಿಜಾರಿನ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಮಂಗಳೂರಿಗೆ ಶಾಪಿಂಗ್ ಬಂದಿದ್ದರು. ಐದು ವರ್ಷದ ಮಗು ಮಲಗಿದ್ದಕ್ಕಾಗಿ ಆ ಮಗುವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು. ಕಾರಿನಲ್ಲಿ ಡ್ರೈವರ್ ಕೂಡ ಇದ್ದರು. ಆದರೆ, ಕಾರಿನ ಡ್ರೈವರ್ ಮಹಿಳೆಯ ಮೊಬೈಲ್ ಕಾರಿನಲ್ಲಿ ಉಳಿದಿರುವುದನ್ನು ಗಮನಿಸಿ, ಅದನ್ನು ಕೊಟ್ಟು ಬರಲು ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ ಮಾಲ್ ನತ್ತ ತೆರಳಿದ್ದರು. ಇದೇ ವೇಳೆಗೆ, ಟೋಯಿಂಗ್ ವಾಹನ ಬಂದಿದ್ದು ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರನ್ನು ತೆರವು ಮಾಡಲು ಸೂಚನೆ ನೀಡಿದ್ದಾರೆ. ಒಂದಷ್ಟು ಹೊತ್ತು ಅಲ್ಲಿ ನಿಂತ ಟೋಯಿಂಗ್ ವಾಹನದವರು, ಕಾರನ್ನು ಎತ್ತಿ ಟೋಯಿಂಗ್ ಮಾಡಿಕೊಂಡು ಹೋಗಿದ್ದಾರೆ.
ಚಾಲಕ ಮರಳಿ ಬಂದಾಗ ಸ್ಥಳದಲ್ಲಿ ಕಾರು ಇರಲಿಲ್ಲ. ಮಗು ಮತ್ತು ಕಾರು ನಾಪತ್ತೆಯಾಗಿದ್ದರಿಂದ ಮಹಿಳೆ ಗಾಬರಿಗೊಂಡು ಹುಡುಕಾಟ ನಡೆಸಿದರು. ಅಲ್ಲೇ ಇದ್ದ ಅಂಗಡಿಯವರಲ್ಲಿ ಕೇಳಿದಾಗ, ಟೋಯಿಂಗ್ ವಾಹನದ ಕಿತಾಪತಿ ವಿಚಾರ ತಿಳಿದುಬಂತು. ಘಟನೆ ನಗರದ ಕದ್ರಿ ಬಳಿ ನಡೆದಿದ್ದು ಅಲ್ಲಿನ ಸ್ಥಳೀಯರ ಸೂಚನೆಯಂತೆ ಕೂಡಲೇ ಮಹಿಳೆ ಮತ್ತು ಚಾಲಕ ಕದ್ರಿ ಠಾಣೆಗೆ ತೆರಳಿದ್ರು. ಠಾಣೆಯ ಪೊಲೀಸರಲ್ಲಿ ಮಗು ಮತ್ತು ಕಾರಿನ ಬಗ್ಗೆ ಹೇಳಿದಾಗ ಅವರೂ ಗಾಬರಿಗೊಂಡಿದ್ದಾರೆ. ಕಾರನ್ನು ಅಲ್ಲಿಯೇ ಹೊರಭಾಗದಲ್ಲಿ ಪಾರ್ಕ್ ಮಾಡಲಾಗಿತ್ತು. ಕಾರಿನ ಒಳಗೆ ಗಮನಿಸಿದಾಗ, ಮಗು ಕಾರಿನ ಹಿಂಬದಿಯಲ್ಲಿ ಹಾಗೇ ನಿದ್ರಿಸಿದ್ದು ಕಂಡುಬಂತು.
ಬಳಿಕ ಮಹಿಳೆ ಮತ್ತು ಚಾಲಕ ಅಲ್ಲಿನ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಿನಲ್ಲಿ ಮಗು ಇರುವುದು ನಿಮ್ಮ ಕಣ್ಣಿಗೆ ಕಂಡಿಲ್ಲವೇ? ಅಷ್ಟು ಬೇಗ ಹೊತ್ತುಕೊಂಡು ಹೋಗಲು ನೀವು ಅಲ್ಲಿಯೇ ಕಾಯ್ಕೊಂಡು ಇದ್ರಾ ಅಂತ ಪ್ರಶ್ನೆ ಮಾಡಿದ್ದಾರೆ. ಟೋಯಿಂಗ್ ಮಾಡಿದ ಪೊಲೀಸರು ಬಂದು ಕಾರಿನ ಗ್ಲಾಸಿಗೆ ಟಿಂಟ್ ಹಾಕಿದ್ದರಿಂದ ಗಮನಕ್ಕೆ ಬರಲಿಲ್ಲ. ಮಗುವನ್ನು ಬಿಟ್ಟು ಹೋಗಿದ್ದೇ ತಪ್ಪು ಅಂತ ವಾದಿಸಿದರು. ಕೊನೆಗೆ, ಟಿಂಟ್ ಮತ್ತು ನೋ ಪಾರ್ಕಿಂಗ್ ವಿಚಾರದಲ್ಲಿ ದಂಡ ಕಟ್ಟಿಸಿಕೊಂಡು ಪೊಲೀಸರು ಕಾರನ್ನು ಬಿಟ್ಟು ಕೊಟ್ಟರು.
ಮಗು ಇರುವಾಗಲೇ ಕಾರನ್ನು ಟೋಯಿಂಗ್ ಮಾಡಿರುವ ವಿಚಾರ ಮಾತ್ರ ಪೊಲೀಸರನ್ನು ಕಣ್ಣು ಕಾಣದ ಗಾವಿಲರು ಎಂದು ಸಾರ್ವಜನಿಕರು ಟೀಕಿಸುವಂತಾಗಿದೆ. ಪುಣ್ಯಕ್ಕೆ ಕಾರನ್ನು ಎಳೆದೊಯ್ಯುವಾಗ ಮಗುವಿಗೇನೂ ಆಗಿಲ್ಲ. ಇಲ್ಲಾಂದ್ರೆ ಪೊಲೀಸರ ಕುತ್ತಿಗೆ ಹಿಡಿಯುವ ಸ್ಥಿತಿ ಬರ್ತಿತ್ತು !
In a bizarre case, a car was towed away by the Kadri traffic police while a 7-year-old child was still inside the vehicle. The incident took place in the limits of Mangaluru East police station on Thursday, December 24.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm