Mangalore Police, Drugs, Sudheer Kumar Reddy: ಮಗ ಡ್ರಗ್ಸ್ ವ್ಯಸನಿ, ಹೆತ್ತವರ ದೂರು ಆಧರಿಸಿ ಕಾರ್ಯಾಚರಣೆ, 200 ಜನಕ್ಕೆ ಡ್ರಗ್ಸ್ ಪೂರೈಸ್ತಿದ್ದ ಐವರ ಸೆರೆ, ನೂರು ಮಂದಿ ದೂರು ಕೊಟ್ಟರೆ ಮಂಗಳೂರು ಡ್ರಗ್ಸ್ ಫ್ರೀ ಆಗಬಹುದು ; ಕಮಿಷನರ್

03-07-25 10:50 pm       Mangalore Correspondent   ಕರಾವಳಿ

ತನ್ನ ಮಗ ಡ್ರಗ್ಸ್ ವ್ಯಸನಕ್ಕೀಡಾಗಿದ್ದಾನೆಂದು ಆತನ ಹೆತ್ತವರು ಬಂದು ದೂರಿಕೊಂಡ ಹಿನ್ನೆಲೆಯಲ್ಲಿ ಸಿಇಎನ್ ಕ್ರೈಮ್ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 200 ಮಂದಿ ಉದ್ಯೋಗಸ್ಥರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಐವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮಂಗಳೂರು, ಜುಲೈ 3 : ತನ್ನ ಮಗ ಡ್ರಗ್ಸ್ ವ್ಯಸನಕ್ಕೀಡಾಗಿದ್ದಾನೆಂದು ಆತನ ಹೆತ್ತವರು ಬಂದು ದೂರಿಕೊಂಡ ಹಿನ್ನೆಲೆಯಲ್ಲಿ ಸಿಇಎನ್ ಕ್ರೈಮ್ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 200 ಮಂದಿ ಉದ್ಯೋಗಸ್ಥರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಐವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಹೆತ್ತವರ ದೂರಿನಂತೆ ಏನಾಗಿದೆ ಎಂದು ತಿಳಿಯಲು ಸಿಇಎನ್ ವಿಭಾಗದಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ, ಡ್ರಗ್ಸ್ ಪೂರೈಕೆಯ ಜಾಲ ಗೊತ್ತಾಗಿದ್ದು, 5 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 6 ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಒಬ್ಬರು ಬಂದ ದೂರು ನೀಡಿದ್ದರಿಂದ 200 ಜನಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ಐವರನ್ನು ಬಂಧಿಸಲಾಗಿದೆ. ಇದೇ ರೀತಿ ಹತ್ತು ಜನ ದೂರು ಕೊಟ್ಟರೆ ಎರಡು ಸಾವಿರ ಮಂದಿಗೆ ಡ್ರಗ್ಸ್ ಪೂರೈಕೆ ಆಗುವುದನ್ನು ತಪ್ಪಿಸಬಹುದು. ನೂರು ಮಂದಿ ಬಂದು ಖಚಿತವಾಗಿ ದೂರು ನೀಡಿದಲ್ಲಿ ಇಡೀ ಮಂಗಳೂರು ನಗರದಲ್ಲಿ ಡ್ರಗ್ಸ್ ಪೂರೈಕೆ ಆಗದಂತೆ ಮಾಡಬಹುದು.

ಹೀಗಾಗಿ ಯಾರೇ ಆದರೂ ಡ್ರಗ್ಸ್ ಬಗ್ಗೆ ಮಾಹಿತಿ ಇದ್ದಲ್ಲಿ ನೇರವಾಗಿ ಬಂದು ಹಂಚಿಕೊಳ್ಳಿ. ಯಾರೇ ಡ್ರಗ್ಸ್ ವ್ಯಸನಿಗಳಿದ್ದರೂ ಅವರನ್ನು ಸಂತ್ರಸ್ತರೆಂದು ಪರಿಗಣಿಸುತ್ತೇವೆ. ಅವರಿಗೆ ಡ್ರಗ್ಸ್ ಪೂರೈಸುವವರನ್ನು ಪೆಡ್ಲರ್ ಗಳೆಂದು ಪರಿಗಣಿಸಿ ಕಠಿಣ ಕ್ರಮ ಜರುಗಿಸುತ್ತೇವೆ. ಡ್ರಗ್ಸ್ ಜಾಲ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಪೊಲೀಸ್ ಕಮಿಷನರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Acting on a complaint by a distressed parent whose son was addicted to drugs, the Commissionerate’s CEN Crime team launched a special operation. As a result, five drug peddlers—who reputedly supplied narcotics to about 200 working adults and college students—have been arrested, Police Commissioner Sudhir Kumar Reddy announced today.