ಬ್ರೇಕಿಂಗ್ ನ್ಯೂಸ್
15-06-25 12:12 pm Mangalore Correspondent ಕರಾವಳಿ
ಮಂಗಳೂರು, ಜೂನ್ 15 : ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಇಡೀ ರಾಜ್ಯದಲ್ಲೇ ಮಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಜೂನ್ 15ರ ಬೆಳಗ್ಗೆ 8.30ರ ವರೆಗಿನ 24 ಗಂಟೆಯಲ್ಲಿ ನೀರುಮಾರ್ಗ, ಫರಂಗಿಪೇಟೆಯ ಪುದು ಭಾಗದಲ್ಲಿ 18 ಸೆಮೀ ಮಳೆಯಾಗಿದೆ.
ಬಂಟ್ವಾಳ ತಾಲೂಕಿನ ಮೇರಮಜಲಿನಲ್ಲಿ 17.4 ಸೆಮೀ, ಸುರತ್ಕಲ್ ಬಾಳದಲ್ಲಿ 16.5 ಸೆಮೀ, ಬೆಳ್ತಂಗಡಿಯ ಪಟ್ರಮೆಯಲ್ಲಿ 16.2 ಸೆಮೀ, ಅಮ್ಟಾಡಿ 15.9 ಸೆಮೀ, ಬಡಗಬೆಳ್ಳೂರು, ಸರಪಾಡಿ, ಮಚ್ಚಿನದಲ್ಲಿ 15 ಸೆಮೀ ಮಳೆಯಾಗಿದೆ. ಎಕ್ಕಾರು, ಮರೋಡಿ, ಪಡು ಮಾರ್ನಾಡು, ಬೆಳ್ತಂಗಡಿಯ ಕಲ್ಮಂಜ, ಬಜ್ಪೆ, ಬಾಳೆಪುಣಿ ಆಸುಪಾಸಿನಲ್ಲಿ 12 ಸೆಮೀ ಮಳೆಯಾಗಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಇದಕ್ಕಿಂತ ಕಡಿಮೆ ಮಳೆಯಾಗಿದೆ.




ಕಂಪೌಂಡ್ ಗೋಡೆ ಕುಸಿದ ದೃಶ್ಯ ಸೆರೆ
ಇದೇ ವೇಳೆ, ಮಂಗಳೂರು ನಗರ ಭಾಗದಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಕಂಕನಾಡಿಯ ಸುವರ್ಣ ಲೇನ್ ಬಳಿ ಆಸ್ಪತ್ರೆಯ ಆವರಣ ಗೋಡೆ ಕುಸಿದಿದ್ದು ರಸ್ತೆ ಮತ್ತು ಪಕ್ಕದ ಮನೆಯ ಆವರಣದ ಗೇಟ್ ಮತ್ತು ಗೋಡೆಗೆ ಹಾನಿಯಾಗಿದೆ. ಇದರ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ರಸ್ತೆಯ ಮೇಲೆ ಕುಸಿದು ಬಿದ್ದ ಕಾಂಪೌಂಡ್ ಗೋಡೆಯ ದೃಶ್ಯ ಭಯಾನಕ ಎನ್ನುವಂತಿದೆ. ಅದೃಷ್ಟವಶಾತ್ ಈ ಹೊತ್ತಿಗೆ ರಸ್ತೆಯಲ್ಲಿ ಜನ ಅಥವಾ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಗೋಡೆ ಕುಸಿದು ಬಿದ್ದ ರಭಸಕ್ಕೆ ಮನೆಯ ಕಾಪೌಂಡ್ ಗೆ ಅಳವಡಿಸಿದ್ದ ಗೇಟ್ ಕಿತ್ತುಕೊಂಡು ಹೋಗಿದೆ. ಇದೇ ವೇಳೆ, ವಿದ್ಯುತ್ ಕಂಬ ಎರಡು ತುಂಡಾಗಿ ಬಿದ್ದಿದೆ.
ಇದಲ್ಲದೆ, ಮಂಗಳೂರು ನಗರದ ಕಾರ್ ಸ್ಟ್ರೀಟ್, ಕೊಡಿಯಾಲ್ ಬೈಲ್, ಕೊಟ್ಟಾರ, ಅಡ್ಯಾರಿನಲ್ಲಿ ಮನೆಗಳಿಗೂ ನೀರು ನುಗ್ಗಿದ್ದು ಜನರು ಸಂಕಷ್ಟ ಪಟ್ಟಿದ್ದಾರೆ.
Heavy rain in #Mangalore: A massive compound wall collapsed at #SuvarnaLane, #Kankandy. The wall, part of a #hospital boundary, crashed onto a nearby house compound. Shocking video shows sparks flying from a nearby transformer. #Mangalore #RainHavoc #mangalorerain pic.twitter.com/ZSvwSqhyNZ
— Headline Karnataka (@hknewsonline) June 15, 2025
Mangaluru has recorded the highest rainfall in Karnataka over the past 24 hours, leading to waterlogging, property damage, and safety concerns in various parts of the city. According to the Meteorological Department, the highest rainfall was recorded in Neermarga and Pudhu in Farangipete.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 01:18 pm
Mangalore Correspondent
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm