ಬ್ರೇಕಿಂಗ್ ನ್ಯೂಸ್
12-06-25 10:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 12 : ಅಹ್ಮದಾಬಾದ್ ಏರ್ಪೋರ್ಟ್ ಬಳಿಯಲ್ಲೇ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದ ಕ್ಲೈವ್ ಕುಂದರ್ ಮಂಗಳೂರು ಮೂಲದವರು ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಮಂಗಳೂರಿನಲ್ಲಿ ಸರ್ಚ್ ಮಾಡಿದಾಗ, ಕ್ಲೈವ್ ಕುಂದರ್ ಹೆತ್ತವರು, ಕುಟುಂಬಸ್ಥರು ಮುಂಬೈನಲ್ಲಿಯೇ ನೆಲೆಸಿದ್ದಾರೆ ಎಂಬುದು ಖಚಿತವಾಗಿದೆ.
ಮಂಗಳೂರು ಮೂಲದ ಕ್ಲಿಫರ್ಡ್ ಕುಂದರ್ ಮುಂಬೈನ ಕಾಲಿನಾದಲ್ಲಿ ನಿವಾಸಿಯಾಗಿದ್ದು, ಇವರ ಪುತ್ರ ಕ್ಲೈವ್ ಕುಂದರ್ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದರು. ಕುಂದರ್ ಎನ್ನುವ ಸರ್ನೇಮ್ ಇರುವುದರಿಂದ ಇವರು ಮಂಗಳೂರು ಮೂಲದ ಸಿಎಸ್ಐ ಪ್ರೊಟೆಸ್ಟಂಟ್ ಕ್ರೈಸ್ತರು. ಮಂಗಳೂರಿನಲ್ಲಿ ಜಪ್ಪಿನಮೊಗರು, ಬಲ್ಮಠ, ಕಿನ್ನಿಗೋಳಿ ಆಸುಪಾಸಿನಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ. ಕ್ಲೈವ್ ಕುಂದರ್ ಬಗ್ಗೆ ಜೆಪ್ಪುವಿನ ಕಾಂತಿ ಚರ್ಚ್ ಫಾದರ್ ಗೇಬ್ರಿಯಲ್ ಸ್ಯಾಮುವೆಲ್ ಅವರಲ್ಲಿ ಕೇಳಿದಾಗ, ಹೆಚ್ಚಿನವರು ನಮ್ಮ ಕಾಂತಿ ಚರ್ಚ್ ನವರು ಎಂದು ಫೋನ್ ಮಾಡುತ್ತಿದ್ದಾರೆ. ಆದರೆ ಕ್ಲೈವ್ ಕುಂದರ್ ಕುಟುಂಬ ಇಲ್ಲಿ ನೆಲೆಸಿಲ್ಲ. ಅವರ ಫ್ಯಾಮಿಲಿ ಮುಂಬೈನ ಕುರ್ಲಾದಲ್ಲಿದ್ದಾರೆ. ಕುರ್ಲಾದಲ್ಲಿ ಯುಬಿಎಮ್ ಕಾಂತಿ ಚರ್ಚ್ ಸದಸ್ಯರು ಎಂದು ಹೇಳಿದ್ದಾರೆ.
ಬಲ್ಮಠ ಥಿಯೋಲಾಜಿಕಲ್ ಸೊಸೈಟಿಯವರು ಹೇಳುವ ಪ್ರಕಾರ, ಮಂಗಳೂರು ಮೂಲ ಆಗಿದ್ದರೂ ಬಹಳಷ್ಟು ಸಿಎಸ್ಐ ಕುಟುಂಬಗಳು ಮುಂಬೈನಲ್ಲಿ ನೆಲೆಸಿದ್ದು ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಕ್ಲೈವ್ ಕುಂದರ್ ಅವರ ಹೆತ್ತವರು ಕೂಡ ಮುಂಬೈನಲ್ಲಿಯೇ ಇದ್ದಾರೆ. ಕ್ಲೈವ್ ಕುಂದರ್ ಅಮೆರಿಕದ ಫ್ಲೋರಿಡಾದಲ್ಲಿ ಪೈಲಟ್ ತರಬೇತಿ ಪಡೆದಿದ್ದು, ಆನಂತರ ಕೋ ಪೈಲಟ್ ಆಗಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದರು. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿದ್ದ ಮುಖ್ಯ ಪೈಲಟ್ ಕಮಾಂಡರ್ ಸುಮಿತ್ ಸಬರ್ವಾಲ್ 8200 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದು, ಇತರರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಕ್ಲೈವ್ ಕುಂದರ್ ಅವರಿಂದಲೂ ತರಬೇತಿ ಪಡೆಯುತ್ತಿದ್ದರು. ಆದರೂ 1100 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದರು.
Following the tragic crash of the Air India flight near Ahmedabad, it was initially believed that co-pilot Clive Kundar hailed from Mangaluru. However, fresh clarification from local church authorities confirms that his family resides in Mumbai and not in Mangaluru.
13-06-25 08:47 pm
Bangalore Correspondent
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
Hassan, Heart Attack, Death: ಹಾಸನ ; ಎರಡು ತಿಂಗ...
11-06-25 09:35 pm
No Cabinet Reshuffle, Karnataka: ಸದ್ಯಕ್ಕಿಲ್ಲ...
11-06-25 05:23 pm
13-06-25 03:08 pm
HK News Desk
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
PM Modi, Ahmedabad, Plane Crash: ವಿಮಾನ ದುರಂತ...
13-06-25 12:25 pm
Lone Survivor, Ahmedabad Plane Crash: ಟೇಕ್ ಆ...
12-06-25 10:11 pm
Ahmedabad Plane Crash, 241 Dead, One survives...
12-06-25 08:52 pm
13-06-25 09:36 pm
Mangalore Correspondent
Mangalore, Former MLA Moinuddin Bava, NMPT: 2...
13-06-25 06:47 pm
Indias First Special Action Force, Mangalore:...
13-06-25 03:46 pm
Special Task Force, Home Minister Parameshwar...
13-06-25 01:05 pm
Mangalore Student Death, Kuthar, Hiba Aiman:...
13-06-25 09:38 am
13-06-25 07:30 pm
Mangalore Correspondent
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm
Vitla Police, SI Kaushik: ಜುಗಾರಿ ಅಡ್ಡೆಗೆ ದಾಳಿ...
11-06-25 07:26 pm
ಅಡಿಕೆ ಖರೀದಿಸಿ 50ಕ್ಕೂ ಹೆಚ್ಚು ರೈತರಿಗೆ ಹಣ ಕೊಡದೆ...
11-06-25 02:03 pm