ಬ್ರೇಕಿಂಗ್ ನ್ಯೂಸ್
12-06-25 10:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 12 : ಅಹ್ಮದಾಬಾದ್ ಏರ್ಪೋರ್ಟ್ ಬಳಿಯಲ್ಲೇ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದ ಕ್ಲೈವ್ ಕುಂದರ್ ಮಂಗಳೂರು ಮೂಲದವರು ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಮಂಗಳೂರಿನಲ್ಲಿ ಸರ್ಚ್ ಮಾಡಿದಾಗ, ಕ್ಲೈವ್ ಕುಂದರ್ ಹೆತ್ತವರು, ಕುಟುಂಬಸ್ಥರು ಮುಂಬೈನಲ್ಲಿಯೇ ನೆಲೆಸಿದ್ದಾರೆ ಎಂಬುದು ಖಚಿತವಾಗಿದೆ.
ಮಂಗಳೂರು ಮೂಲದ ಕ್ಲಿಫರ್ಡ್ ಕುಂದರ್ ಮುಂಬೈನ ಕಾಲಿನಾದಲ್ಲಿ ನಿವಾಸಿಯಾಗಿದ್ದು, ಇವರ ಪುತ್ರ ಕ್ಲೈವ್ ಕುಂದರ್ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲಟ್ ಆಗಿದ್ದರು. ಕುಂದರ್ ಎನ್ನುವ ಸರ್ನೇಮ್ ಇರುವುದರಿಂದ ಇವರು ಮಂಗಳೂರು ಮೂಲದ ಸಿಎಸ್ಐ ಪ್ರೊಟೆಸ್ಟಂಟ್ ಕ್ರೈಸ್ತರು. ಮಂಗಳೂರಿನಲ್ಲಿ ಜಪ್ಪಿನಮೊಗರು, ಬಲ್ಮಠ, ಕಿನ್ನಿಗೋಳಿ ಆಸುಪಾಸಿನಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ. ಕ್ಲೈವ್ ಕುಂದರ್ ಬಗ್ಗೆ ಜೆಪ್ಪುವಿನ ಕಾಂತಿ ಚರ್ಚ್ ಫಾದರ್ ಗೇಬ್ರಿಯಲ್ ಸ್ಯಾಮುವೆಲ್ ಅವರಲ್ಲಿ ಕೇಳಿದಾಗ, ಹೆಚ್ಚಿನವರು ನಮ್ಮ ಕಾಂತಿ ಚರ್ಚ್ ನವರು ಎಂದು ಫೋನ್ ಮಾಡುತ್ತಿದ್ದಾರೆ. ಆದರೆ ಕ್ಲೈವ್ ಕುಂದರ್ ಕುಟುಂಬ ಇಲ್ಲಿ ನೆಲೆಸಿಲ್ಲ. ಅವರ ಫ್ಯಾಮಿಲಿ ಮುಂಬೈನ ಕುರ್ಲಾದಲ್ಲಿದ್ದಾರೆ. ಕುರ್ಲಾದಲ್ಲಿ ಯುಬಿಎಮ್ ಕಾಂತಿ ಚರ್ಚ್ ಸದಸ್ಯರು ಎಂದು ಹೇಳಿದ್ದಾರೆ.
ಬಲ್ಮಠ ಥಿಯೋಲಾಜಿಕಲ್ ಸೊಸೈಟಿಯವರು ಹೇಳುವ ಪ್ರಕಾರ, ಮಂಗಳೂರು ಮೂಲ ಆಗಿದ್ದರೂ ಬಹಳಷ್ಟು ಸಿಎಸ್ಐ ಕುಟುಂಬಗಳು ಮುಂಬೈನಲ್ಲಿ ನೆಲೆಸಿದ್ದು ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಕ್ಲೈವ್ ಕುಂದರ್ ಅವರ ಹೆತ್ತವರು ಕೂಡ ಮುಂಬೈನಲ್ಲಿಯೇ ಇದ್ದಾರೆ. ಕ್ಲೈವ್ ಕುಂದರ್ ಅಮೆರಿಕದ ಫ್ಲೋರಿಡಾದಲ್ಲಿ ಪೈಲಟ್ ತರಬೇತಿ ಪಡೆದಿದ್ದು, ಆನಂತರ ಕೋ ಪೈಲಟ್ ಆಗಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದರು. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿದ್ದ ಮುಖ್ಯ ಪೈಲಟ್ ಕಮಾಂಡರ್ ಸುಮಿತ್ ಸಬರ್ವಾಲ್ 8200 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದು, ಇತರರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಕ್ಲೈವ್ ಕುಂದರ್ ಅವರಿಂದಲೂ ತರಬೇತಿ ಪಡೆಯುತ್ತಿದ್ದರು. ಆದರೂ 1100 ಗಂಟೆಗಳ ಪ್ರಯಾಣದ ಅನುಭವ ಹೊಂದಿದ್ದರು.
Following the tragic crash of the Air India flight near Ahmedabad, it was initially believed that co-pilot Clive Kundar hailed from Mangaluru. However, fresh clarification from local church authorities confirms that his family resides in Mumbai and not in Mangaluru.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm