ಬ್ರೇಕಿಂಗ್ ನ್ಯೂಸ್
05-06-25 03:05 pm HK News Desk ಕರಾವಳಿ
ಮಂಗಳೂರು, ಜೂನ್ 5: ಅರ್ ಸಿಬಿ ರಾಜ್ಯದ ಅಥವಾ ರಾಷ್ಟ್ರದ ಟೀಂ ಅಲ್ಲ. ಯಾವುದೋ ಒಂದು ಭಾವನೆ ಮತ್ತು ಹರ್ಷೋದ್ಘಾರದಲ್ಲಿ ವಿಜಯೋತ್ಸವ ಮಾಡುವಾಗ ಘಟನೆ ನಡೆದಿದೆ. ಏನಾಗಿದೆ ಏನಾಗಿಲ್ಲ ಅನ್ನೋದನ್ನ ಮುಖ್ಯಮಂತ್ರಿಗಳು ಹೇಳಬೇಕಾಗುತ್ತದೆ. ಐಪಿಎಲ್ ನಡೆಸೋರು ಕರೋಡ್ ಪತಿಗಳಲ್ಲ, ಸಾವಿರಾರು ಕೋಟಿ ಮಾಲೀಕರು. ಪ್ರಾಣ ಕಳೆದುಕೊಂಡವರಿಗೆ ಬಿಸಿಸಿಐ ಕಡೆಯಿಂದ ಒಂದೊಂದು ಕೋಟಿ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಮಾಡ್ತೀನಿ, ರಾಜ್ಯ ಸರ್ಕಾರದಿಂದಲೇ ಬಿಸಿಸಿಐನಿಂದ ಒಂದು ಕೋಟಿ ಕೊಡಿಸಬೇಕು. ಎಲ್ಲರೂ ದುಃಖದಲ್ಲಿದ್ದಾರೆ, ಹಾಗಾಗಿ ಏನೂ ಹೇಳಲು ಹೋಗಲ್ಲ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ದುಃಖ ತಡೆದುಕೊಳ್ಳಲು ಭಗವಂತ ಶಕ್ತಿ ಕೊಡಲಿ. ಸರ್ಕಾರ ಏನ್ ಮಾಡಿದೆ, ಏನ್ ಮಾಡಿಲ್ಲ ಅಂತ ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳಲು ಆಗಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಈ ಬಗ್ಗೆ ತಿಳುವಳಿಕೆ ಕೊಡಬೇಕು.
ಚಿನ್ನಸ್ವಾಮಿ ಕ್ರೀಡಾಂಗಣದ ಕೆಪಾಸಿಟಿ ಇರೋದು 35 ಸಾವಿರ ಜನ ಮಾತ್ರ. ಉಚಿತ ಅಂದ ತಕ್ಷಣ ಮೂರು ಲಕ್ಷ ಜನ ಅಲ್ಲಿಗೆ ಬಂದಿದಾರೆ. ಸಾವಿರಕ್ಕೆ ಒಂದು ಪೊಲೀಸ್ ನಮ್ಮಲ್ಲಿರೋದು, ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ. ಸಾವು ಹೊರಗಡೆ ಆದಾಗ ಒಳಗಡೆ ಸೆಲೆಬ್ರೇಷನ್ ನಿಲ್ಲಿಸಬೇಕಾಗಿತ್ತು. ಅಭಿಮಾನಿಗಳು ಬರೋವಾಗ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಯೋಚನೆ ಮಾಡಬೇಕಾಗಿತ್ತು.
ಹೈಕೋರ್ಟ್ ಗೆ ಸುಮೊಟೋ ಕೇಸ್ ಮಾಡುವ ಎಲ್ಲಾ ಹಕ್ಕಿದೆ, ಅದೇ ಥರ ಎಲ್ಲದರಲ್ಲೂ ಮಾಡಿದರೆ ಒಳ್ಳೆಯದು. ಹನ್ನೊಂದು ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು. ಇದು ಸರ್ಕಾರ ನಡೆಸಿರೋ ಕ್ರಿಕೆಟ್ ಅಲ್ಲ. ವಿಧಾನಸೌಧ ಬಳಿ ಯಾವುದೇ ಘಟನೆ ಆಗಿಲ್ಲ. ಇನ್ಜು ಸ್ಟೇಡಿಯಂನವರು ಕಾರ್ಯಕ್ರಮ ನಡೆಸುವಾಗ ಸ್ವಲ್ಪ ಯೋಚನೆ ಮಾಡಿ ನಡೆಸಬೇಕಿತ್ತು. ಅಮಾಯಕರು, ಯುವಕರು, ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಹೊಣೆ ಹೊರಬೇಕು ಎಂದು ಹೇಳಿದರು.
B K Hariprasad in Mangalore Demands Rs 1 Crore Compensation from BCCI for Each Victim of IPL Celebration Tragedy
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm