ಬ್ರೇಕಿಂಗ್ ನ್ಯೂಸ್
05-06-25 10:10 am Mangalore Correspondent ಕರಾವಳಿ
ಮಂಗಳೂರು, ಜೂನ್ 5: ಕೇಸರಿ ಕಟ್ಟಿಕೊಂಡು ಹೊಡೆದ್ಕೊಂಡರೆ ಹಿಂದು ಮುಖಂಡ, ಹಿಂದು ಕಾರ್ಯಕರ್ತ ಆಗುತ್ತಾನಾ.. ರೌಡಿಶೀಟರ್, ಕೊಲೆ ಮಾಡಿದವರು, ಸುಲಿಗೆ ಮಾಡಿದವರನ್ನು ಹಿಂದು ಕಾರ್ಯಕರ್ತ ಅನ್ನುತ್ತೀರಾ.. ಕಾಂಗ್ರೆಸ್ ಸರ್ಕಾರ ಇರುವಾಗ ಮಾತ್ರ ಹಿಂದುಗಳಿಗೆ ತೊಂದರೆ ಆಗಿದ್ದಾ.. ಹಿಂದು ನಾಯಕ ಅನಿಸಿಕೊಳ್ಳಲು ರೌಡಿಶೀಟರ್, ಗಾಂಜಾ, ಅನೈತಿಕ ಚಟುವಟಿಕೆ ಮಾಡಿಕೊಂಡಿದ್ದವರೇ ಆಗಬೇಕಾ.. ಹೀಗೆಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪೊಲೀಸರು ಬಿಡುಗಡೆ ಮಾಡಿರುವ ಗಡೀಪಾರು ಪಟ್ಟಿಯಲ್ಲಿ ಕೇವಲ ಹತ್ತು ಕಿಮೀ ವ್ಯಾಪ್ತಿಯವರೇ ಹೆಚ್ಚಿದ್ದಾರೆ. ಇಡೀ ಕರಾವಳಿಗೆ ಹತ್ತು ಕಿಮೀ ವ್ಯಾಪ್ತಿಯ ಕೋಮು ಹಿಂಸೆಯ ಜನರಿಂದಾಗಿ ಕೆಟ್ಟ ಹೆಸರು ಬರ್ತಾ ಇದೆ. 30 ವರ್ಷಗಳ ಹಿಂದೆ ಬಿಜೆಪಿಯವರು ಬಿತ್ತಿದ ಕೋಮು ವೈಷಮ್ಯದ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ. ಕೋಮು ಗಲಭೆ, ಕೋಮು ಸಂಘರ್ಷ, ಕೋಮು ಹತ್ಯೆ ಬೇರೆ ಬೇರೆ. ಇಲ್ಲಿ ಆಗುತ್ತಿರುವುದು ಕೋಮು ಹತ್ಯೆ ಮಾತ್ರ. ಆದರೆ ಇಡೀ ಕರಾವಳಿಗೆ ಇದರ ನೆಪದಲ್ಲಿ ಮಸಿ ಬಳಿಯಲಾಗುತ್ತಿದೆ. ಮಾಧ್ಯಮದಲ್ಲಿ ಇಡೀ ಕರಾವಳಿಯಲ್ಲಿ ಇಂಥದ್ದು ಆಗ್ತಾ ಇದೆಯೆಂದು ಬಣ್ಣ ಹಚ್ಚಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಕಾರವಾರದಿಂದ ಕಾಸರಗೋಡು ವರೆಗೆ ನಮ್ಮ ಕರಾವಳಿಯಿದ್ದು, ಮಂಗಳೂರಿನಲ್ಲಿ ಮಾತ್ರ ಈ ರೀತಿಯ ಕೋಮು ಹಿಂಸೆಯ ಕೃತ್ಯಗಳು ನಡೆಯುತ್ತಿವೆ. ಬೆಳ್ತಂಗಡಿ, ಸುಳ್ಯ, ಉಡುಪಿ, ಕಾರವಾರ ಬೇರೆಲ್ಲಿಯೂ ನಡೀತಾ ಇಲ್ಲ. ಮಂಗಳೂರಿನಲ್ಲು ಹತ್ತು ಕಿಮೀ ರೇಡಿಯಸ್ ವ್ಯಾಪ್ತಿಯಲ್ಲಿ ಇಂತಹ ಕೃತ್ಯಗಳು ಹೆಚ್ಚಿದ್ದು, ಇದನ್ನು ಪೊಲೀಸ್ ಇಲಾಖೆ ಮೂಲಕ ಹತ್ತಿಕ್ಕಬೇಕಾಗಿದೆ. ಈ ನಡುವೆ, ನಾವೆಲ್ಲ ಹಿಂದುಗಳಲ್ವಾ ಎನ್ನುವ ಪ್ರಶ್ನೆ ಕೇಳಬೇಕಾಗಿದೆ. ಇವರ ಪರಿವಾರದಲ್ಲಿ 50-60 ದಳಗಳಿವೆ, ಅವನ್ನು ಹೇಳಿಕೊಳ್ಳಲಿ. ಅದು ಬಿಟ್ಟು ಹಿಂದು ನಾಯಕ, ಹಿಂದು ಕಾರ್ಯಕರ್ತ ಎಂದು ಹೇಳಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು. ಇದಕ್ಕಾಗಿ ನಾವೊಂದು ಸಮಿತಿ ಮಾಡುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ಇದರ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸದಾಶಿವ ಉಳ್ಳಾಲ್, ಪದ್ಮರಾಜ್ ಆರ್ ಪೂಜಾರಿ, ಜಿ.ಎ ಬಾವ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವಾ, ಲಾರೆನ್ಸ್ ಡಿಸೋಜ, ಅನಿಲ್ ಪೂಜಾರಿ, ನೀರಜ್ ಪಾಲ್, ಮಹಮ್ಮದ್ ಅಲಿ ಪುತ್ತೂರು ಉಪಸ್ಥಿತರಿದ್ದರು
Mangalore Wearing Saffron Doesn’t Make One a Hindu Leader, Manjunath Bhandary Slams Rise of Criminal Elements in Coastal Communal Politics.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm